ದರ್ಶನ್ ವಿರುದ್ಧ ಸಾಕ್ಷಿ ಹೇಳಲು ನಿಂತ ಆ ಮೂವರು ಯಾರು?

ಬಳ್ಳಾರಿ:

   ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರು ಜೈಲು ಸೇರಿ ಮೂರು ತಿಂಗಳು ಕಳೆಯುತ್ತಾ ಬಂದಿದ್ದು, ಅವರ ವಿರುದ್ಧ ಚಾರ್ಜ್​​ಶೀಟ್ ಕೂಡ ಸಲ್ಲಿಕೆ ಆಗಿದೆ. ಈ ಪ್ರಕರಣದಲ್ಲಿ ಬರೋಬ್ಬರಿ 3991 ಪುಟಗಳ ಚಾರ್ಜ್​ಶೀಟ್ ನ್ಯಾಯಾಲಯದ ಕೈ ಸೇರಿದೆ. ದರ್ಶನ್ ವಿರುದ್ಧ ಸಾಕ್ಷಿ ಹೇಳಲು ಮೂವರು ಸಿದ್ಧರಾಗಿದ್ದಾರೆ. ಅವರು ಯಾರು? ಅವರು ಏನು ಹೇಳಿದ್ದಾರೆ ಎನ್ನುವ ಬಗ್ಗೆ ಇಲ್ಲಿದೆ ವಿವರ.

   ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಕೋರ್ಟ್​ನಲ್ಲಿ ಮಹತ್ವ ಪಡೆದುಕೊಳ್ಳುತ್ತವೆ. ಈಗ ದರ್ಶನ್ ವಿರುದ್ಧ 3 ಜನರು ಸಾಕ್ಷಿ ಹೇಳಲು ರೆಡಿ ಆಗಿದ್ದಾರೆ. ಅದರಲ್ಲಿ ಸಾಕ್ಷಿ ನಂಬರ್​ 1 ಶೆಡ್ಡಿನ ವಾಚ್​ಮ್ಯಾನ್. ದರ್ಶನ್ ಶೆಡ್​ಗೆ ಬಂದಿದ್ದು, ಹೋಗಿದ್ದು ಸೇರಿ ಎಲ್ಲಾ ಮಾಹಿತಿ ಬಗ್ಗೆ ಅವರು ಹೇಳಿಕೆ ನೀಡಿದ್ದಾರೆ. ಘಟನೆ ನಡೆದ ಸಮಯದಲ್ಲಿ ಯಾರು ಬಂದರು, ಯಾವಾಗ ಬಂದರು, ಯಾವ ವಾಹನಗಳು ಬಂದಿದ್ದವು ಎಂದು ಮಾಹಿತಿ ನೀಡಿದ್ದಾರೆ. ರೇಣುಕಾ ಸ್ವಾಮಿ ಬದುಕಿದ್ದಾಗ ವಾಚ್​ ಮ್ಯಾನ್ ನೋಡಿದ್ದರು ಎನ್ನಲಾಗಿದೆ.

   ಶೆಡ್​​ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಎರಡು ಹಾಗೂ ಮೂರನೇ ಪ್ರತ್ಯಕ್ಷ ಸಾಕ್ಷಿ ಎಂದು ಪರಿಗಣಿಸಲಾಗಿದೆ. ರೇಣುಕಾ ಸ್ವಾಮಿಗೆ ಎಷ್ಟು ಸಮಯ ಹೊಡೆದರು, ಯಾರು ಏನು ಮಾಡಿದರು ಎಂಬ ಸಂಪೂರ್ಣ ಮಾಹಿತಿಯನ್ನು ಸಾಕ್ಷಿದಾರರು ನೀಡಿದ್ದಾರೆ. ಇವುಗಳು ದರ್ಶನ್​ಗೆ ಮುಳುವಾಗುವ ಸಾಧ್ಯತೆ ಇದೆ. 

   ದರ್ಶನ್ ಸೇರಿ ಬಂಧನಕ್ಕೆ ಒಳಗಾದ 17 ಮಂದಿಯಲ್ಲಿ ಯಾರು ಕೊಲೆ ಮಾಡಿದ್ದು ಎಂಬುದು ಇನ್ನೂ ಸಾಬೀತಾಗಿಲ್ಲ. ಸದ್ಯ ಎಲ್ಲರ ಭಾಗಿದಾರತ್ವ ಇರುವ ಬಗ್ಗೆ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಆಗಿದೆ. ಈ ಪೈಕಿ ಯಾರು ತಪ್ಪು ಮಾಡಿದ್ದಾರೆ, ಯಾರ ಪಾತ್ರ ಎಷ್ಟಿದೆ ಎನ್ನುವ ವಿಚಾರ ಕೋರ್ಟ್ ವಿಚಾರಣೆ ಬಳಿಕ ಗೊತ್ತಾಗಬೇಕಿದೆ.

Recent Articles

spot_img

Related Stories

Share via
Copy link
Powered by Social Snap