ರೇಣುಕಾ ಸ್ವಾಮಿ ಕೊಲೆ ಪ್ರಕರಣ : ತಪ್ಪೋಪ್ಪಿಕೊಂಡ್ರ ದರ್ಶನ್‌ ….!

ಬೆಂಗಳೂರು :

    ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ ಹತ್ಯೆ ಯಲ್ಲಿ ತನ್ನ ಪಾತ್ರದ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಪೊಲೀಸರು ನ್ಯಾಯಾಲಯಕ್ಕೆ ಆರೋಪಿಗಳ ವಶಕ್ಕೆ ನೀಡಿರುವ ರಿಮ್ಯಾಂಡ್‌ ಕಾಪಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಉಲ್ಲೇಖಿಸಲಾಗಿದೆ.

   ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದನೆಂಬ ಆರೋಪದ ಮೇಲೆ ದರ್ಶನ್‌ ಮತ್ತು ಆತನ ಗ್ಯಾಂಗ್‌ ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆಗೈದಿತ್ತು. ಈ ಪ್ರಕರಣದಲ್ಲಿ ನಟ ದರ್ಶನ್‌ ನೀಡಿರುವ ಸ್ವಇಚ್ಛಾ ಹೇಳಿಕೆ ಈಗ ಬಹಿರಂಗಗೊಂಡಿದೆ.

   ಕೊಲೆ ನಡೆದ ಬಳಿಕ ಪ್ರಕರಣದಲ್ಲಿ ಎಲ್ಲಿಯೂ ತನ್ನ ಹೆಸರು ಬರದಂತೆ ಮಾಡಲು ನಾನು ಎ 14 ಆರೋಪಿ ಪ್ರದೋಶ್‌ ಗೆ 30 ಲಕ್ಷ ರೂ. ಕೊಟ್ಟಿದೆ. ಈ ಹಣದಲ್ಲಿ ಪೊಲೀಸರು, ಲಾಯರ್‌ ಮತ್ತು ಶವ ವಿಲೇವಾರಿಯ ಖರ್ಚು ವೆಚ್ಚವನ್ನು ನೋಡಿಕೊಳ್ಳಲು ಹೇಳಿದ್ದೆ ಎಂದು ನಟ ದರ್ಶನ್‌ ಸ್ವಇಚ್ಛಾ ಹೇಳಿಕೆ ದಾಖಲಿಸಿದ್ದಾರೆ.

   ದರ್ಶನ್‌ ಹೇಳಿಕೆ ಪಡೆದ ಬಳಿಕ ಪೊಲೀಸರು ಪ್ರದೋಶ್‌ ಮನೆಯಿಂದ ದರ್ಶನ್‌ ನೀಡಿದ್ದ ಹಣವನ್ನು ವಶಪಡಿಸಿಕೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap