ಹರಪನಹಳ್ಳಿ :
ಶಾಲಾ ಕಾಲೇಜುಗಳ ಪ್ರಾರಂಭವಾಗಿ ತಿಂಗಳು ಕಳೆದರೂ ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣ ಪ್ರದೇಶಗಳ ಶಿಕ್ಷಣ ಸಂಸ್ಥೆಗಳ ತೆರಳುವ ವಿಧ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ನಿಗದಿತ ಸಮಯಕ್ಕೆ ಬಸ್ ಸಿಗದೇ ವಿಧ್ಯಾರ್ಥಿಗಳು ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಹರಪನಹಳ್ಳಿ ತಾಲೂಕಿನ ಏನ್ ಚೀರನಹಳ್ಳಿ ನಾಗರಕೊಂಡ ಅಲದಹಳ್ಳಿ ಹಾಗೂ ಮತ್ತಿಹಳ್ಳಿ ಗ್ರಾಮಗಳಲ್ಲಿ ಬಸ್ ಇಲ್ಲದೆ ತರಗತಿಗಳು ತಪ್ಪಿ ಹೋಗುತ್ತದೆ ಎಂಬ ಕಾರಣಕ್ಕೆ ಪ್ರಾಣ ಪಣಕಿಟ್ಟು ಖಾಸಗಿ ಆಟೋ ಮತ್ತು ಜೀಪಗಳ ಟಾಪ್ ಹಾಗೂ ಪುಟ್ ಬೋರ್ಡ್ ನಲ್ಲಿ ನೇತಾಡಿಕೊಂಡು ಹೋಗುವುದು ಮತ್ತು ತುಟ್ಟಿ ಧರ ನೀಡುವುದು ಸಾಮಾನ್ಯವಾಗಿದೆ. ಈ ಗ್ರಾಮಗಳಲ್ಲಿ ಲಾಕ್ ಡೌನ್ ಮುಗಿದ ನಂತರ ಯಾವುದೇ ಬಸ್ ಸಂಚಾರ ಮಾಡಿಲ್ಲ ಬಸ್ ಇಲ್ಲದೆ ವಿಧ್ಯಾರ್ಥಿಗಳು ನರಕ ಯಾತನೆ ಅನುಭವಿಸುತ್ತಿದ್ದರೆ.
ಏನ್ ಚೀರನಹಳ್ಳಿ ಗ್ರಾಮದಲ್ಲಿ ಬಸ್ ನಿಲ್ದಾಣ ವಿಲ್ಲದೆ ವಿದ್ಯಾರ್ಥಿನಿಯರು ಆಟೋ ಅಥವಾ ಬಸ್ ಬಸ್ ಕಾಯಲು ರೋಡಿಗೆ ಬಂದು ಇರಬೇಕು. ಸಾರ್ವಜನಿಕರ ದೂರು ದುಮ್ಮಾನಗಳನ್ನು ಅಲ್ಲದೆ ವಾಗ್ವಾದಗಳು ನೆಡೆಯುವುದು ಇಲ್ಲಿ ಸಾಮಾನ್ಯವಾಗಿದೆ. ಈ ಬಾಗದಲ್ಲಿ ರಸ್ತೆಗಳು ವ್ಯವಸ್ಥಿತವಾಗಿ ಇದ್ದರೂ ಆ ಗ್ರಾಮದಲ್ಲಿ ಬಸ್ ಸೌಕರ್ಯಗಳಿಂದ ವಂಚಿತವಾಗಿದೆ.
ಸರ್ಕಾರ ವಿಧ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ಮಕ್ಕಳಿಗೆ ಅನುಕೂಲವಾಗಲಿ ಎಂದು ಬಸ್ ಪಾಸ್ ಗಳನ್ನು ವಿತರಿಸುತ್ತಿದೆ ಆದರೆ ಬಸ್ ಗಳೆ ಇಲ್ಲದೆ ಪಾಸ್ ಪಡೆದು ಪ್ರಯೋಜನವಾದರೂ ಏನು? ಎಂದು ಕಾಲೇಜ್ ವಿಧ್ಯಾರ್ಥಿ ಬಸವರಾಜ ತಮಗಾದ ನೋವನ್ನು ತೋಡಿಕೊಂಡರು.
ಸಾರಿಗೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸರ್ಕಾರ ಸಾರ್ವಜನಿಕರಿಗೆ ಸಮರ್ಪಕ ಸಾರಿಗೆ ವ್ಯವಸ್ಥೆ ನೀಡುವ ಉದ್ದೇಶದಿಂದ ಕೋಟ್ಯಂತರ ರೊ ವೆಚ್ಚ ಮಾಡಿ ಜನತೆಗೆ ಅನುಕೂಲ ಮಾಡಲು ಪ್ರಯತ್ನಿಸುತ್ತಿದೆ. ಇದರ ಸದಪಯೋಗ ಜನತೆಗೆ ತಲುಪಿಸುವ ಕಾರ್ಯ ಸಾರಿಗೆ ಅಧಿಕಾರಿಗಳು ಮಾಡಲಿ ಎಂದು ಗ್ರಾಮದ ಸಮಾಜ ಕಾರ್ಯ ಕರ್ತ ದಕ್ಷಿಣಮೂರ್ತಿ ಕಿತ್ತೂರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
