ದಾವಣಗೆರೆ :
ತ್ಯಾಗ-ಬಲಿದಾನದ ಸಂಕೇತವಾಗಿರುವ ಮೊಹರಂ ಹಬ್ಬವನ್ನು ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಮುಸ್ಲಿಂ ಬಾಂಧವರು ಶುಕ್ರವಾರ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಇಲ್ಲಿನ ಮದಕರಿ ನಾಯಕ ವೃತ್ತದಲ್ಲಿರುವ ದರ್ಗಾ ಹಾಗೂ ಜಾಲಿ ನಗರದ ಶಿವಾಲಿ ರಸ್ತೆಯಲಿರುವ ದಗಾ ಸೇರಿದಂತೆ ಹಲವು ದರ್ಗಾಗಳಲ್ಲಿ ದೇವರ ಸನ್ನಿಧಿಯಲ್ಲಿ ಹೂವಿನ ಅಲಂಕಾರ, ವಿಶೇಷ ಪೂಜೆ ನೆರವೇರಿಸಲಾಯಿತು.
ನಂತರ ಮುಸ್ಲಿಂ ಸಮಾಜ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ದರ್ಗಾ ಆವರಣದಲ್ಲಿ ನಿರ್ಮಿಸಲಾಗಿದ್ದ ಅಗ್ನಿಗುಂಡಿಗೆ ಸೌದೆ, ಸಕ್ಕರೆ, ಉಪ್ಪು, ಕರ್ಪೂರ, ಮೆಣಸು ಹಾಗೂ ಊದಿನಕಡ್ಡಿಗಳನ್ನು ಸಮರ್ಪಿಸಿ, ತಮ್ಮ ಹರಕೆಗಳನ್ನು ತೀರಿಸಿದರು. ಪೂರ್ವಜರನ್ನು ನೆನೆಯುವ ಮೊಹರಂ ಹಬ್ಬದ ಹಿನ್ನಲೆಯಲ್ಲಿ ನಗರದ ಮದಕರಿ ನಾಯಕ ವೃತ್ತ, ಗಣೇಶ ಪೇಟೆ, ಜಾಲಿನಗರ ಮತ್ತಿತರ ಭಾಗಗಳಲ್ಲಿ ಸಮಾಜ ಬಾಂಧವರು ಕೆಂಡ ತುಳಿದು ತಮ್ಮ ಹರಕೆಗಳನ್ನು ತೀರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/moharam.gif)