ಹರಪನಹಳ್ಳಿ :
ತಾಲೂಕಿನ ಹಲುವಾಗಲು ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮೃತ ಯೋಧ ಬಸವರಾಜ್ ತಿಪ್ನಹಳ್ಳಿ ಅವರ ಅಂತ್ಯಕ್ರಿಯೆ ಸೋಮವಾರ ನಡೆಯಿತು.
ಶುಕ್ರವಾರ ರಾತ್ರಿ ನಡೆದಿದ್ದ ಅಪಘಾತದಲ್ಲಿ ಬಸವರಾಜ್ ಅವರು ಮೃತಪಟ್ಟಿದ್ದರು. ಅವರ ಪಾರ್ಥೀವ ಶರೀರ ಹರಿದ್ವಾರದಿಂದ ಭಾನುವಾರ ರಾತ್ರಿ ಆಗಮಿಸಿತು, ದಾರಿಯುದ್ದಕ್ಕು ಪಾರ್ಥೀವ ಶರೀರದ ಮೆರವಣಿಗೆ ನಡೆಯಿತು.
ಶಾಸಕ ಜಿ.ಕರುಣಾಕರ ರೆಡ್ಡಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಅರುಂಡಿ ಸುವರ್ಣನಾಗರಾಜ್, ಹೊಸಪೇಟೆ ಉಪವಿಬಾಗಾಧಿಕಾರಿ ಪಿ.ಎನ್.ಲೋಕೇಶ್, ತಹಸೀಲ್ದಾರ ಡಾ.ನಾಗವೇಣಿ, ಡಿವೈಎಸ್ಪಿ ನಾಗೇಶ್ ಐತಾಳು, ಸಿಪಿಐ ಡಿ.ದುರುಗಪ್ಪ, ತಾಲೂಕು, ಗ್ರಾಮ ಪಂಚಾಯ್ತಿ ಪ್ರತಿನಿಧಿಗಳು, ವಿವಿಧ ಹಂತದ ಅಧಿಕಾರಿಗಳು ಆಗಮಿಸಿ ಕುಟುಂಬದವರಿಗೆ ಸಾಂತ್ವನ ಹೇಳಿ, ಯೋಧನ ಅಂತಿಮ ದರ್ಶನ ಪಡೆದರು.
ಶಾಲಾವರಣದಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ತಂಡ ಸರ್ಕಾರಿ ಗೌರವ ಸಲ್ಲಿಸಿತು. ಬಳಿಕ ಯೋಧನ ಪಾರ್ಥೀವ ಶರೀರದ ಮೆರವಣಿಗೆ ವಿಎಸ್ಎಸ್ಎನ್ ಸೊಸೈಟಿ ಹಿಂಭಾಗದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಸೆಂಟ್ರಲ್ ಇಂಡಸ್ಟ್ರೀಯಲ್ ಪೋರ್ಸ್ನ ಪತಂಜಲಿ ಬೆಟಾಲಿಯನ್ನ ಅಧಿಕಾರಿ ನವೀನ್ಕುಮಾರ, ಒಬ್ಬ ಮುಖ್ಯಸಿಪಾಯಿ, 3 ಜನ ಸಿಪಾಯಿಗಳು ಸಲಾಂ ಸಲ್ಲಿಸಿದರು. ರಾಷ್ಟ್ರದ್ವಜವನ್ನು ಹೆತ್ತವರಿಗೆ ಹಸ್ತಾಂತರಿಸಿದರು. ಮೂರು ಸುತ್ತು ಜಿಲ್ಲಾ ಪೊಲೀಸರು ಗುಂಡು ಹಾರಿಸಿ ಅಂತಿಮ ನಮನ ಸಲ್ಲಿಸಿದರು.
ಗ್ರಾಮಸ್ಥರು ಮೃತ ಯೋಧನ ಹೆಸರಿನಲ್ಲಿ ಗ್ರಂಥಾಲಯ ಮತ್ತು ಸ್ಮಾರಕ ನಿರ್ಮಾಣಕ್ಕೆ ಮನವಿ ಸಲ್ಲಿಸಿದರು. ಶಾಸಕ ಜಿ.ಕರುಣಾಕರ ರೆಡ್ಡಿ ಮಾತನಾಡಿ, ಗ್ರಾಮಸ್ಥರ ಮನವಿಯಂತೆ ಅನುದಾನ ಕಲ್ಪಿಸುವುದಾಗಿ ತಿಳಿಸಿದರು.
ಮೃತ ಯೋಧನ ತಂದೆ ತಾಯಿ ಹನುಮಂತಪ್ಪ ದುರುಗಮ್ಮ, ಬಿಜೆಪಿ ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಬಾಗಳಿ ಕೊಟ್ರೇಶಪ್ಪ, ಎಂ.ಪಿ.ನಾಯ್ಕ, ಅರುಂಡಿ ನಾಗರಾಜ್, ರಾಘವೇಂದ್ರಶೆಟ್ಟಿ, ಡಾ.ಮಲ್ಕಪ್ಪ ಅಧಿಕಾರ್, ಕಲ್ಲೇರ ಬಸವರಾಜ್, ನಿವೃತ್ತ ಸೈನಿಕ ರಾಜು, ರಾಘವೇಂದ್ರ, ನಾಗರಾಜ್, ಶಂಕರ, ಹಾಲೇಶ್, ಮಹೇಂದ್ರ ಸೇರಿದಂತೆ ಅನೇಕರು ಅಂತಿನ ನಮನ ಸಲ್ಲಿಸಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.’
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
