ರಾಷ್ಟ್ರದ ರಕ್ಷಣೆಯ ವಿಚಾರದಲ್ಲಿ ಪಾಕ್ ಜೊತೆ ರಾಜಿಯಾಗಲ್ಲ : ಪ್ರಧಾನಿ ಮೋದಿ

 ದೆಹಲಿ:

      ಭಾರತ ಶಾಂತಿಗೆ ಬದ್ಧವಾಗಿದೆ. ರಾಷ್ಟ್ರದ ರಕ್ಷಣೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾರದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶತೃ ರಾಷ್ಟ್ರ ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

      ಆಕಾಶವಾಣಿಯ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು,  ಸರ್ಜಿಕಲ್ ಸ್ಟ್ರೈಕ್​ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ. ಸರ್ಜಿಕಲ್ ಸ್ಟ್ರೈಕ್ ಮಾಡಿದ ಯೋಧರಿಗೆ ಸಲಾಮ್. ನಾವು ಉಗ್ರರಿಗೆ ತಕ್ಕ ಪಾಠ ಕಲಿಸುತ್ತೇವೆ. ರಾಷ್ಟ್ರೀಯ ರಕ್ಷಣಾ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಆಗ್ರಹಿಸಿದ್ದಾರೆ. 

       ಪಾಕಿಸ್ತಾನ ಆಕ್ರಮಿತ ಕಾಶ್ಮೀರದದಲ್ಲಿ ಭಾರತೀಯ ಪಡೆಗಳು ನಡೆಸಿದ್ದ ಸರ್ಜಿಕಲ್ ದಾಳಿಯ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಮೂರು ದಿನಗಳ ಸೇನಾ ಪ್ರದರ್ಶನ “ಪರಾಕ್ರಮ ಪರ್ವ”ಕ್ಕೆ ಚಾಲನೆ ನೀಡಿರುವ ಪ್ರಧಾನಿ ಮೋದಿ, ಭಾರತದ ಧೋರಣೆ ಯಾವತ್ತೂ ಸೈನಿಕರ ಪರವಾಗಿರುತ್ತೆ. ಪಾಕ್​ಗೆ ತಕ್ಕ ತಿರುಗೇಟು ಕೊಡುವುದೇ ನಮ್ಮ ಗುರಿ ಎಂದು ತಿಳಿಸಿದ್ದಾರೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap