ತುಮಕೂರು
ಸಿದ್ಧಗಂಗಾ ಮಠದಲ್ಲಿ ಐತಿಹಾಸಿಕ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ರಥೋತ್ಸವ ಸಾವಿರಾರು ಭಕ್ತ ಸಾಗರದ ನಡುವೆ ಭಾನುವಾರ ಮಧ್ಯಾಹ್ನ ನೆರವೇರಿತು.ಪ್ರತೀ ವರ್ಷ ಮಹಾಶಿವರಾತ್ರಿ ಹಬ್ಬದ ಮಾರನೆಯ ದಿನ ಅಂದರೆ ಮಾಘ ಶುದ್ಧ ಪಾಲ್ಗುಣ ಚತುರ್ದಶಿ ಯಂದು ನಡೆಯುವ ರಥೋತ್ಸವ ಕ್ಕೆ ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದಲೂ ಸಾವಿರಾರು ಭಕ್ತರು ಸಾಕ್ಷಿಯಾದರು.
ಸಿದ್ಧಗಂಗೆ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ರಥಕ್ಕೆ ಪೂಜೆ ಸಲ್ಲಿಸಿ ತೇರನೆಳೆಯುವ ಮೂಲಕ ಮಹಾರಥೋತ್ಸವಕ್ಕೆ ಪೂಜೆ ಸಲ್ಲಿಸಲಾಯಿತು.ರಥದ ಕಲಶಕ್ಕೆ ದವನ ಸಿಗಿಸಿದ ಬಾಳೆಹಣ್ಣಿನ್ನು ಎಸೆಯುವ ಮೂಲಕ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.ಬಂದ ಭಕ್ತ ರೆಲ್ಲರಿಗೂ ಮಠದಲ್ಲಿ ಸಿಹಿಪಾಯಸ ದಾಸೋಹ ವಿತರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2023/02/WhatsApp-Image-2023-02-19-at-14.13.gif)