ಕೇಂದ್ರ ಸಚಿವರ ಸಮ್ಮುಖದಲ್ಲೆ ಭಾರತ ಮಾತೆಯ ಭಾವಚಿತ್ರಕ್ಕೆ ಅಪಮಾನ

ತುಮಕೂರು

     ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಭಾಗವಹಿಸಿದ್ದ ಸಂವಾದ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಅಪಮಾನವೆಸಗಿರುವ ಘಟನೆ ಶುಕ್ರವಾರ ನಡೆದಿದೆ.

     ನಗರದ ಸ್ನೇಹ ಸಂಗಮ ಸಭಾಂಗಣದಲ್ಲಿ ನಡೆದ ವಾಣಿಜ್ಯೋದ್ಯಮಿಗಳು, ಲೆಕ್ಕ ಪರಿಶೋಧಕರು, ವಿವಿಧ ವಾಣಿಜ್ಯ ಸಂಘಟನೆಗಳ ಪ್ರತಿನಿಧಿ ಗಳೊಂದಿಗಿನ ಸಂವಾದಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡುವ ವೇಳೆ ಭಾರತ ಮಾತೆಯ ಭಾವಚಿತ್ರದ ಎದುರೇ ಶೂ ಬಿಚ್ಚಿಟ್ಟು ದೀಪ ಹಚ್ಚಲು ತೆರಳಿದ್ದು ಟೀಕೆ ಗೆ ಗುರಿಯಾಗಿದೆ.ಕೇಂದ್ರ ಸಚಿವ ರ ಜೊತೆ ಜ್ಯೋತಿ ಬೆಳಗಿಸಲು ಕೆಳಗಿದ್ದ ಕೆಲವು ಸಂಘಸಂಸ್ಥೆ ಪ್ರತಿನಿಧಿ ಗಳನ್ನು ವೇದಿಕೆ ಗೆ ಆಹ್ವಾನಿಸಲಾಯಿತು. ಸಚಿವ ರ ಜೊತೆ ಪೋಟೋದಲ್ಲಿ ಕಾಣಿಸಿಕೊಳ್ಳುವ ಅವಸರದಲ್ಲಿ ಭಾರತ ಮಾತೆ ಭಾವಚಿತ್ರ ವನ್ನು ಗಮನಿಸದೇ ಶೂ ಬಿಟ್ಟು ಈ ಕೃತ್ಯ ವೆಸಗಿದ್ದಾರೆ.

    ಜೊತೆಗೆ ಭಾರತ ಮಾತೆ ಪೋಟೋಗೆ ಪುಷ್ಪ ನಮನವನ್ನು ಮರೆತ ಆಯೋಜಕರ ನಡೆಯ ಬಗ್ಗೆಯೂ ಭಾಜಪದವರೇ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap