ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಹುದ್ದೆ ಪಡೆಯುವ ತನಕ ವಿಶ್ರಮಿಸುವುದಿಲ್ಲ

ತುಮಕೂರು:

ಎಜುಕ್ಯಾನ್-2021 ಕಾರ್ಯಾಗಾರದಲ್ಲಿ ದೃಢ ಸಂಕಲ್ಪ ಮಾಡಿದ ಸ್ಪರ್ಧಾರ್ಥಿಗಳು

ಶ್ರೀಕನಕಶ್ರೀ ಸಮಿತಿಯ ಶ್ರಮ ವ್ಯರ್ಥವಾಗಲು ಬಿಡುವುದಿಲ್ಲವೆಂದ ಯುವಜನರು

 

 ಶ್ರೀಕನಕಶ್ರೀ ಸೇವಾ ಸಮಿತಿಯು ನಗರದ ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ 5 ದಿನಗಳ ಕಾಲ ಆಯೋಜಿಸಿರುವ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಎಜುಕ್ಯಾನ್-2021 (eಜu-ಏಂಓ-2021) ನಲ್ಲಿ, ಇಂಡಿಯಾ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಉತ್ತರ ಅಮೆರಿಕದ ಕಾನ (ಏಂಓಂ) ಅಧ್ಯಕ್ಷರೂ ಆದ ಸತೀಶ್ ನಂಜಪ್ಪ ಅವರು ಅಮೆರಿಕದಿಂದಲೆ ವರ್ಚುಯಲ್ ಸಭೆಯ ಮೂಲಕ ಭಾಗವಹಿಸಿ, ಕಾರ್ಯಾಗಾರಕ್ಕೆ ಹಾಗೂ ಸ್ಪಧಾರ್ಥಿಗಳಿಗೆ ಶುಭಾಶಯ ಕೋರಿದರು. ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯ ಶಿಬಿರಗಳಿಗೆ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.

ಶ್ರೀಕನಕಶ್ರೀ ಸೇವಾ ಸಮಿತಿಯು ನಗರದ ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಿರುವ 5 ದಿನಗಳ ಅವಧಿಯ ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಗಾರ ಎಜುಕ್ಯಾನ್-2021 (eಜu ಏಂಓ-2021) ಗುರುವಾರಕ್ಕೆ ಯಶಸ್ವಿ 4 ದಿನಗಳನ್ನು ಪೂರೈಸಿ, ಇಂದು 5ನೇ ದಿನಕ್ಕೆ ಕಾಲಿರಿಸಿ ಸಂಜೆ ಸಮಾರೋಪವಾಗುತ್ತಿದೆ. ನ.22 ರಿಂದ ನ.25 ರವರೆಗೆ 4 ದಿನ ನಡೆದ ಈ ಕಾರ್ಯಾಗಾರದಲ್ಲಿ ಸ್ಪರ್ಧಾರ್ಥಿಗಳು ಹೆಚ್ಚು ಹುಮ್ಮಸ್ಸು ಹಾಗೂ ಲವಲವಿಕೆಯಿಂದ ಭಾಗವಹಿಸಿದರು. ತರಬೇತುದಾರರು ನೀಡಿದ ಅಸೈನ್‍ಮೆಂಟ್, ಹೋಂವರ್ಕ್‍ಗಳನ್ನು ಬರೆದು ಮೆಚ್ಚುಗೆ ಗಳಿಸಿ, ಬುದ್ಧಿವಂತರು ಎಂಬ ಪ್ರಶಂಸೆಗೂ ಪಾತ್ರರಾದರು. ಕಾರ್ಯಾಗಾರದಲ್ಲಿ ನಡೆಯುತ್ತಿದ್ದ ತರಗತಿಗಳನ್ನು ಆಸಕ್ತಿಯಿಂದ ಕೇಳುವುದರ ಜೊತೆಗೆ, ತಮ್ಮ ಗೊಂದಲಗಳಿಗೆ ತರಬೇತುದಾರ ಜೊತೆ ಸಂವಾದಿಸುವುದರ ಮೂಲಕ ಸಂಶಯಗಳನ್ನು ಬಗೆಹರಿಸಿಕೊಂಡರು.

ಕಾರ್ಯಾಗಾರ ಆಯೋಜಿಸಿರುವ ಶ್ರೀಕನಕಶ್ರೀ ಸೇವಾ ಸಮಿತಿಯವರು ಕಳೆದ 4 ದಿನಗಳಿಂದ ಮುಂಜಾನೆಯಿಂದ ತಡ ರಾತ್ರಿಯ ತನಕ ಎಷ್ಟೆಲ್ಲಾ ಕಷ್ಟ ಪಡುತ್ತಾರೆ ಎಂಬುದನ್ನು ಖುದ್ದು ನೋಡಿದ ಸ್ಪರ್ಧಾರ್ಥಿಗಳು ಆಯೋಜಕರ ಪರಿಶ್ರಮ, ತ್ಯಾಗ, ಬದ್ಧತೆಯು ವ್ಯರ್ಥವಾಗಲು ಬಿಡುವುದಿಲ್ಲ. ಚೆನ್ನಾಗಿ ಓದಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯಾವುದಾದರೂ ಹುದ್ದೆ ಪಡೆದೆ ತೀರುತ್ತೇವೆ ಎಂದು ದೃಢ ಸಂಕಲ್ಪ ಮಾಡಿದ್ದು, ತಮ್ಮ ಅನಿಸಿಕೆಗಳನ್ನು ಪ್ರಜಾಪ್ರಗತಿ ಪತ್ರಿಕೆಯ ಜೊತೆ ಹಂಚಿಕೊಂಡಿದ್ದಾರೆ.

 

ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದೇನೆ. ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದೆ, ಈ ಕಾರ್ಯಾಗಾರದಲ್ಲಿ ಸಾಕಷ್ಟು ಕಲಿತಿದ್ದೇನೆ. 2 ವರ್ಷದಲ್ಲಿ ನನ್ನ ಗುರಿ ಮುಟ್ಟುಬೇಕು ಅಂದುಕೊಂಡಿದ್ದೆ. ಆದರೇ ಇಲ್ಲಿಗೆ ಬಂದ ನಂತರ ಅದನ್ನು 1 ವರ್ಷಕ್ಕೆ ಇಳಿಸಿದ್ದೇನೆ. ಆಯೋಜಕರಿಗೆ ತುಂಬು ಹೃದಯದ ಧನ್ಯವಾದಗಳು.

-ಶಿಲ್ಪಾ, ಮೈಸೂರು ಜಿಲೆ,

 

ಉಚಿತ ಕಾರ್ಯಾಗಾರ ಆಯೋಜಿಸಿರುವ ಶ್ರೀಕನಕಶ್ರೀ ಸೇವಾ ಸಮಿತಿಯವರ ಸೇವಾಗುಣ ಮುಂದಿನ ಪೀಳಿಗೆಗೆ ಅನುಕರಣಾಯೋಗ್ಯವಾದುದು. ಯಾವುದಾದರೂ 1 ಸರ್ಕಾರಿ ಹುದ್ದೆ ಪಡೆದು ಆಯೋಜಕರ ಋಣ ತೀರಿಸುತ್ತೇನೆ. ಇಲ್ಲಿ ಸಾಕಷ್ಟು ಕಲಿತಿದ್ದೇನೆ.

-ಸೌಜನ್ಯ, ಚಿಕ್ಕಬಳ್ಳಾಪುರ ಜಿಲ್ಲೆ

 

ಪದವಿ ನಂತರದಲ್ಲಿ ಏನು ಓದಬೇಕು ತಿಳಿದಿರಲಿಲ್ಲ. ಈಗ ಐಎಎಸ್ ಪರೀಕ್ಷೆ ಗುರಿಯಾಗಿ ನನ್ನ ಮುಂದೆ ನಿಂತಿದೆ. ಈ ನನ್ನ ಗುರಿಗೆ ನೀರೆದಿರುವ ಶ್ರೀಕನಕಶ್ರೀ ಸೇವಾ ಸಮಿತಿಯವರಿಗೆ ಶರಣು ಹೇಳುವೆ.

-ಸಿದ್ಲಿಂಗವ್ವ, ಕೊಪ್ಪಳ ಜಿಲ್ಲೆ

 

ಈ ಕಾಲದಲ್ಲಿ ಯಾರೂ ಸಹ ಉಚಿತವಾಗಿ 1 ಲೋಟ ನೀರು ಕೊಡುವುದಿಲ್ಲ, ಅಂತದ್ದರಲ್ಲಿ ಶ್ರೀಕನಕಶ್ರೀ ಸೇವಾ ಸಮಿತಿಯವರು ನಮಗೆ ಉಚಿತ ಊಟ, ವಸತಿ, ಗುಣಮಟ್ಟದ ತರಬೇತಿ ನೀಡುತ್ತಿದ್ದಾರೆ ಅವರಿಗೆ ಅಭಿನಂದನೆಗಳು. ಆಯೋಜಕರನ್ನು ಮೆಚ್ಚಿಸಲು ಹೇಳುವುದಿಲ್ಲ, ನಾಗರಿಕ ಸೇವಾ ಅಧಿಕಾರಿಯಾಗಿ ಬಂದು ಅವರ ಮುಂದೆ ನಿಲ್ಲುವೆ.

-ಪರ್ವತ ಲಕ್ಷ್ಮೀ ಆರ್, ಚಿತ್ರದುರ್ಗ

 

ಪದವಿ ಮುಗಿಸಿದ ನಂತರದಿಂದಲೂ ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ಈ ಕಾರ್ಯಾಗಾರದಲ್ಲಿ ಏನು ಓದಬೇಕು, ಏನು ಓದಬಾರದು, ಯಶಸ್ಸು ಗಳಿಸುವುದು ಹೇಗೆ, ಒತ್ತಡ ನಿರ್ವಹಣೆ ಬಗೆ, ಮೊದಲಾದ ವಿಚಾರಗಳನ್ನು ಹೇಳಿಕೊಟ್ಟಿದ್ದಾರೆ. ನಾನು ಐಎಎಸ್ ಅಧಿಕಾರಿ ಆಗೇ ಆಗುತ್ತೇನೆ.

-ನಿವೇದಿತಾ ಎಚ್, ಚಿತ್ರದುರ್ಗ ಜಿಲ್ಲೆ

 

ಎಂಎಸ್ಸಿ ಪದವಿ ಮುಗಿಸಿದ್ದೇನೆ, ಈ ತರಬೇತಿಗೆ ಬರುವಾಗ ಕೆಎಎಸ್ ಸ್ಪರ್ಧಾರ್ಥಿಯಾಗಿ ಬಂದೆ. ಆದರೇ ಕಾರ್ಯಾಗಾರದಲ್ಲಿ ಬಂದಿದ್ದ ಉತ್ತಮ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಿಂದ ನಾನೀಗ ಐಎಎಸ್ ಪರೀಕ್ಷೆ ಪಾಸ್ ಮಾಡಬೇಕೆಂದಿದ್ದು, ನನ್ನ ಗುರಿ ಮುಟ್ಟೆ ತೀರುತ್ತೇನೆ. ನನ್ನಲ್ಲಿ ಸಾರ್ಥಕ ಪರಿವರ್ತನೆ ತಂದ ಆಯೋಜಕರನ್ನು ಎಂದೂ ಮರೆಯಲಾರೆ.

-ನಾಗರತ್ನ, ಚಾಮನಗರಜಿಲ್ಲೆ

 

ಕೊರೋನಾ ಸಂದರ್ಭದಲ್ಲಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಓಡುತ್ತಿದ್ದ ಕುದುರೆಗಳಿಗೆ ಲಗಾಮು ಹಾಕಲಾಗಿತ್ತು. ಈಗ ಅದು ತೆರವು ಗೊಂಡಿರುವ ಸರಿಯಾದ ಸಂದರ್ಭದಲ್ಲಿ ಶ್ರೀಕನಕಶ್ರೀ ಸೇವಾ ಸಮಿತಿಯವರು ಈ ಕಾರ್ಯಾಗಾರ ಆಯೋಜಿಸಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಆಯೋಜಕರ ಆಶಯ ಈಡೇರಿಸುವ ಭರವಸೆ ನೀಡುತ್ತೇನೆ.

-ಸುನಂದಾ, ಹುಲ್ಯಾಳ್, ಬಾಗಲಕೋಟೆ ಜಿಲ್ಲೆ

 

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕುರಿತು ನನಗೆ ಈ ಮೊದಲು ಅರಿವಿರಲಿಲ್ಲ. ಈ ಕಾರ್ಯಾಗಾರದಲ್ಲಿ ಓದುವ ವಿಧಾನ, ತಂತ್ರಗಳು, ಪುಸ್ತಕಗಳ ಬಗ್ಗೆ ಹೇಳಿ ಕೊಟ್ಟಿದ್ದಾರೆ. ಈಗ ಪರೀಕ್ಷೆ ಎದುರಿಸುವುದು ಸುಲಭ ಎನಿಸುತ್ತಿದೆ. ಆಯೋಜಕರನ್ನು ಎಂದಿಗೂ ಮರೆಯಲಾರೆ.

-ಗುಡದರಾಜ್, ವಿಜಯನಗರ ಜಿಲ್ಲೆ,

 

ಇದೀಗ ತಾನೇ ಬಿಎಸ್ಸಿ ಪದವಿ ಮುಗಿಸಿದ್ದೇನೆ. ಸದ್ಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೇನೆ. ಶ್ರೀಕನಕಶ್ರೀ ಸೇವಾ ಸಮಿತಿಯವರು ಉಚಿತ ವಸತಿ, ಊಟ ನೀಡುವ ಮೂಲಕ ಉತ್ತಮ ಕಾರ್ಯಾಗಾರ ಆಯೋಜಿಸಿದ್ದು, ನನ್ನಂತಹ ಬಹಳಷ್ಟು ಜನ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

-ಹರ್ಷಿತ್.ಜೆ.ಎಮ್, ಹಾಸನ ಜಿಲ್ಲೆ

 

5 ದಿನಗಳ ಈ ತರಬೇತಿ ಕಾರ್ಯಾಗಾರದಲ್ಲಿ ಬಹಳಷ್ಟು ಕಲಿತಿದ್ದೇನೆ. ಹಿಂದುಳಿದ ಬಡ ವರ್ಗಗಳಿಗೆ ಇಂತಹ ಉಚಿತ ತರಬೇತಿಗಳು ಕಾಮಧೇನುವಿದ್ದಂತೆ, ಕೇರಳ, ಅಮೆರಿಕದಿಂದ ಸಂಪನ್ಮೂಲ ವ್ಯಕ್ತಿಗಳು ಅಂತರ್ಜಾಲದ ಮೂಲಕ ಶಿಬಿರದಲ್ಲಿ ಮಾತನಾಡಿದ್ದು ನಮ್ಮಲ್ಲಿ ಹುರುಪು ತಂದಿದೆ.

-ಎಸ್.ಪಿ.ಕಿರಣ್‍ಕುಮಾರ್, ಚಿಕ್ಕಮಗಳೂರು ಜಿಲ್ಲೆ

 

ಕಾರ್ಯಾಗಾರಕ್ಕೆ ಬರುವ ತನಕ ನನಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬುದು ತಿಳಿದಿರಲಿಲ್ಲ, ಈಗ ಅವುಗಳ ಬಗ್ಗೆ ಅಗತ್ಯ ಅರಿವು ಸಿಕ್ಕಿದ್ದು, ಸುಲಭ ಎನಿಸಿವೆ. ಒಟ್ಟಾರೇ ಸರ್ಕಾರಿ ಹುದ್ದೆ ಪಡೆದೆ ತೀರುತ್ತೇನೆ. ಆಯೋಜಕರ ಪರಿಶ್ರಮ ಶ್ಲಾಘನಾರ್ಹ.

-ಮಲ್ಲಿಕಾರ್ಜುನ್ ಗೋಡಿ, ಧಾರವಾಡ ಜಿಲ್ಲೆ

 

ಈ ತರಬೇತಿ ಕಾರ್ಯಾಗಾರದಲ್ಲಿ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಮುಂದೆ ನನ್ನ ಮುಂದಿನ ಗುರಿ ಜಿಲ್ಲಾಧಿಕಾರಿಯಾಗುವುದು. ಶ್ರೀಕನಕಶ್ರೀ ಸೇವಾ ಸಮಿತಿಯವರಿಗೆ ಧನ್ಯವಾದಗಳು.

-ಶಿವಣ್ಣ, ರಾಯಚೂರು ಜಿಲ್ಲೆ

 

ಪದವಿ ಎರಡನೇ ವರ್ಷ ಓದುತ್ತಿದ್ದೇನೆ. ಪದವಿಯ ನಂತರ ಐಎಎಸ್ ಪರೀಕ್ಷೆ ತೆಗೆದುಕೊಳ್ಳಬೇಕೆಂದಿದ್ದ ನನಗೆ ಈ ತರಬೇತಿಯು ಸರಿಯಾದ ಸಮಯಕ್ಕೆ ಸರಿಯಾದ ವ್ಯಕ್ತಿಗಳಿಂದ ಸಿಕ್ಕಿದೆ. ಆಯೋಜಕರನ್ನು ಅಭಿಂದಿಸುತ್ತೇನೆ.

ಮಧುಸೂಧನ್ ಆರ್, ಕೋಲಾರ ಜಿಲ್ಲೆ

ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ಯುವ ಜನರಿಗೆ ಈ ಕಾರ್ಯಾಗಾರದಿಂದ ಬಹಳ ಅನುಕೂಲ ಆಗಿದೆ. ಹೊಸದಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೆ ಈ ಶಿಬಿರ ಯಶಸ್ಸಿನ ಹಾದಿ ತೋರಿದೆ. ಆಯೋಜಕರ ಪರಿಶ್ರಮಕ್ಕೆ ಪ್ರತಿಫಲವಾಗಿ ಒಂದು ಒಳ್ಳೆಯ ಹುದ್ದೆ ಪಡೆಯುವೆ.

-ಎಸ್.ಎಮ್.ವಿನಾಯಕ, ಚಿತ್ರದುರ್ಗ ಜಿಲ್ಲೆ

 

ಒಬ್ಬ ಸ್ಪರ್ಧಾರ್ಥಿ ಯಶಸ್ವಿಯಾಗಲು ಅತ್ಯುತ್ತಮ ತರಬೇತಿ ಅಗತ್ಯ. ಆ ತರಬೇತಿಯನ್ನು ಶ್ರೀಕನಕಶ್ರೀ ಸಮಿತಿಯವರು ಕೊಡಿಸಿದ್ದಾರೆ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುವೆ. ಇನ್ನೂ 1 ವರ್ಷದಲ್ಲಿ ಯಾವುದಾದರೊಂದು ಸರ್ಕಾರಿ ಹುದ್ದೆ ಹಿಡಿದೆ ತೀರುತ್ತೇನೆ.

ಪರಮಣ್ಣ, ಯಾದಗಿರಿ ಜಿಲ್ಲೆ

 

ಇನ್ಸೈಟ್ಸ್‍ನಿಂದ ಬಂಪರ್ ಆಫರ್ :

ಎಜುಕ್ಯಾನ್-2021 ಕಾರ್ಯಾಗಾರವನ್ನು ಉದ್ಘಾಟಿಸಲು ಬಂದಿದ್ದ ಇನ್ಸೈಟ್ಸ್ ಐಎಸ್‍ಎಸ್ ತರಬೇತಿ ಸಂಸ್ಥೆಯ ನಿರ್ದೇಶಕರಾದ ಜಿ.ಬಿ.ವಿನಯ್‍ಕುಮಾರ್ ಅವರು ಶಿಬಿರದಲ್ಲಿ ಭಾಗವಹಿಸಿರುವ ಸ್ಪಧಾರ್ಥಿಗಳಿಗೆ ಬಂಪರ್ ಆಫರ್ ನೀಡಿದ್ದಾರೆ. ಇನ್ನೂ 3 ತಿಂಗಳ ನಂತರ ಸ್ಪರ್ಧಾರ್ಥಿಗಳಿಗೆ 1 ಅರ್ಹತಾ ಪರೀಕ್ಷೆ ನಡೆಸಿ ಅದರಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ 10 ಯುವ ಜನರಿಗೆ ಉಚಿತ ಐಎಸ್‍ಎಸ್ ತರಬೇತಿಯನ್ನು ತಮ್ಮ ಸಂಸ್ಥೆಯ ಮೂಲಕ ನೀಡಲಾಗುವುದೆಂದು ಗೋಷಿಸಿದ್ದು, ಸ್ಪರ್ಧಾರ್ಥಿಗಳಲ್ಲಿ ಆಸಕ್ತಿ ಕೆರಳುವಂತೆ ಮಾಡಿದೆ.

 

 

5 ಜನ ಸ್ಪರ್ಧಾರ್ಥಿಗಳಿಗೆ ಉಚಿತ ತರಬೇತಿ, ಸ್ಪರ್ಧಾಚೇತನ ಘೋಷಣೆ : ಎಜುಕ್ಯಾನ್-2021 ಕಾರ್ಯಾಗಾರದಲ್ಲಿ ತರಬೇತುದಾರರಾಗಿ ಭಾಗವಹಿಸಿದ್ದ ಸ್ಪರ್ಧಾಚೇತನ ಕೋಚಿಂಗ್ ಸಂಸ್ಥೆಯ ಮುಖ್ಯಸ್ಥರು, ಸಂಪನ್ಮೂಲ ವ್ಯಕ್ತಿಗಳೂ ಆದ ಆರ್.ಮಂಜುನಾಥ್, ಕೆ.ಗಂಗಾಧರ್ ಅವರುಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸ್ಪಧಾರ್ಥಿಗಳ ಗುಣಮಟ್ಟ, ಬುದ್ದಿಮತ್ತೆ, ಶಿಸ್ತು ಹಾಗೂ ಆಯೋಜಕರ ಪರಿಶ್ರಮ, ಬದ್ಧತೆ, ಸೇವಾಗುಣ ಎಲ್ಲವನ್ನೂ ಗಮನಿಸಿ ತಮ್ಮ ಸಂಸ್ಥೆಯ ವತಿಯಿಂದ ಆಯ್ದ ನಾಲ್ಕು ಜನ ಪುರುಷ ಸ್ಪರ್ಧಾರ್ಥಿಗಳಿಗೆ ಉಚಿತ ತರಬೇತಿ ಮತ್ತು ಒಬ್ಬ ಮಹಿಳಾ ಸ್ಪರ್ಧಾರ್ಥಿಗೆ ಊಟ-ವಸತಿ ಸಹಿತ ಉಚಿತ ತರಬೇತಿ ನೀಡುವುದಾಗಿ ಕಾರ್ಯಾಗಾರದಲ್ಲೆ ಘೋಷಿಸಿದರು. ಇವರುಗಳನ್ನು ಶ್ರೀಕನಕಶ್ರೀ ಸೇವಾ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಸ್ಪಧಾರ್ಥಿಗಳು ಅಭಿನಂದಿಸಿದ್ದಾರೆ.

ಅಕ್ಷರವು ಎಲ್ಲವನ್ನೂ ತಂದು ಕೊಡುತ್ತದೆ :

ನಮ್ಮಪ್ಪ ಓದು ಬರಹ ಗೊತ್ತಿಲ್ಲದ ತಳ ಸಮುದಾಯದ ಬಡವ. ಬಹಳ ಕಷ್ಟಪಟ್ಟು ನಮ್ಮನ್ನು ಸಾಕಿ, ವಿದ್ಯೆ ಕಲಿಸಿದ. ಅಪ್ಪನ ಕಷ್ಟ ನೋಡಿ ಬೆಳೆಯುತ್ತಿದ್ದ ನನ್ನಲ್ಲಿ ಒಂದು ರೀತಿಯ ಕಿಚ್ಚು, ಜಾಗೃತಿ ಮೂಡಿ ಅಪ್ಪನ ಕಷ್ಟಕ್ಕೆ ಪರಿಹಾರ ನೀಡಬೇಕೆಂದು ನಾನು ನನ್ನ ತಮ್ಮ ಕಷ್ಟಪಟ್ಟು ಓದಿದೆವು. ಪುಸ್ತಕಗಳು ನಮ್ಮ ಕೈ ಬಿಡಲಿಲ್ಲ. ನಮ್ಮ ಪರಿಸ್ಥಿತಿ ಬದಲಿಸಿದವು. ನಾನು ರಸಾಯನಶಾಸ್ತ್ರ ಉಪನ್ಯಾಸಕ ನಾದೆ. ಸಹೋದರ ವಿಜ್ಞಾನಿಯಾಗಿ ಜರ್ಮನಿಗೆ ಹೋದ. ಇಂದು ಎಲ್ಲರೂ ನಮ್ಮನ್ನು ಗೌರವಿಸುತ್ತಾರೆ.

ಅವಮಾನಿಸಿದವರು ಅವರ ಮನೆಯ ಹಬ್ಬಕ್ಕೆ ಕರೆಯುತ್ತಾರೆ ಆದ್ದರಿಂದ ಸ್ಪರ್ಧಾರ್ಥಿಗಳು ಅಕ್ಷರದ ಶಕ್ತಿಯನ್ನು ಅರಿತು ಅಭ್ಯಾಸ ಮಾಡಬೇಕು. ಉದ್ದೇಶ ಸ್ಪಷ್ಟವಾಗಿದ್ದರೆ, ಪ್ರಯತ್ನ ಪ್ರಮಾಣಿಕವಾಗಿದ್ದರೆ, ಪ್ರತಿಫಲ ಯಾರಪ್ಪನ ಮನೆಯ ಸ್ವತ್ತು ಅಲ್ಲ. ಅದು ನಮ್ಮದೆ ಆಗಿರುತ್ತದೆ. ಸಮಾನ ಮನಸ್ಕರೆಲ್ಲಾ ಒಂದೆಡೆ ಸೇರಿ ಶ್ರೀಕನಕಶ್ರೀ ಸೇವಾ ಸಮಿತಿ ರಚಿಸಿಕೊಂಡು, ಬಡ ಹಿಂದುಳಿದ ವರ್ಗಗಳ ಯುವ ಜನರು ಐಎಎಸ್, ಕೆಎಎಸ್ ಮುಂತಾದ ಸ್ಪರ್ಧಾರ್ಥಿಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲಿ ಎಂಬ ಉದ್ದೇಶದಿಂದ ಈ ಕಾರ್ಯಗಾರ ಆಯೋಜಿಸಿರುವುದಕ್ಕೆ ಅವರನ್ನು ಅಭಿನಂದಿಸುತ್ತೇನೆ.

-ಕೆ.ಗಂಗಾಧರ್, ತರಬೇತುದಾರರು, ಸ್ಪರ್ಧಾಚೇತನ ಕೋಚಿಂಗ್ ಸೆಂಟರ್, ತುಮಕೂರು

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

Recent Articles

spot_img

Related Stories

Share via
Copy link