ಅಲ್ಲು ಅರ್ಜುನ್‌ ಪರ ವಕೀಲ ನಿರಂಜನ್‌ ರೆಡ್ಡಿ ಪಡೆಯುವ ಸಂಭಾವನೆ ಎಷ್ಟು ಗೊತ್ತಾ….?

ತೆಲಂಗಾಣ :

    ಅಲ್ಲು ಅರ್ಜುನ್ ಅವರು ಒಂದೇ ದಿನದಲ್ಲಿ ಎಲ್ಲವನ್ನೂ ನೋಡಿ ಬಂದರು. ‘ಪುಷ್ಪ 2’ ಯಶಸ್ಸಿನಲ್ಲಿದ್ದ ಅವರು ನಾನಾ ಕಡೆಗಳಿಗೆ ತೆರಳಿ ಸಕ್ಸಸ್ ಮೀಟ್​ನಲ್ಲಿ ಭಾಗಿ ಆಗುತ್ತಿದ್ದಾರೆ. ಹೀಗಿರುವಾಗಲೇ ಡಿಸೆಂಬರ್ 4ರಂದು ಹೈದರಾಬಾದ್​ನ ಸಂಧ್ಯಾ ಥಿಯೇಟರ್​ನಲ್ಲಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿ ಅವರು ಡಿಸೆಂಬರ್ 13ರಂದು ಬಂಧನಕ್ಕೆ ಒಳಗಾಗಿ, ಇಂದು (ಡಿಸೆಂಬರ್ 14) ಬಿಡುಗಡೆ ಹೊಂದಿದ್ದಾರೆ.

   ತೆಲಂಗಾಣ ಹೈಕೋರ್ಟ್ ಅಲ್ಲು ಅರ್ಜುನ್​ಗೆ ಮಧ್ಯಂತರ ಜಾಮೀನು ನೀಡಿದೆ. ರಾತ್ರಿ ಇಡೀ ಜೈಲಿನಲ್ಲೇ ಇದ್ದ ಅಲ್ಲು ಅರ್ಜುನ್ ಅವರು ಇಂದು ಬಿಡುಗಡೆ ಹೊಂದಿದ್ದಾರೆ. ಅವರ ಪರ ವಕೀಲರು ಇಟ್ಟ ಮುಖ್ಯವಾದ ಪಾಯಿಂಟ್​ಗಳನ್ನು ಕೋರ್ಟ್ ಪರಿಗಣಿಸಿದೆ. ಹಾಗಾದರೆ ಆ ವಕೀಲರ ಹೆಸರು ಏನು? ಅವರು ಚಾರ್ಜ್ ಮಾಡೋದು ಎಷ್ಟು ಎಂಬ ಬಗ್ಗೆ ಇಲ್ಲಿದೆ ವಿವರ.

  ‘ಜನರನ್ನು ನಿಯಂತ್ರಣ ಮಾಡಬೇಕಿದ್ದ ಪೊಲೀಸರು ಅಲ್ಲು ಅರ್ಜುನ್ ಅವರನ್ನು ನೋಡುತ್ತಾ ನಿಂತಿದ್ದರು. ವಿದೇಶದಲ್ಲಿ ಕ್ರಿಕೆಟ್ ನಡೆಯುವಾಗ ಪೊಲೀಸರು ಅಲ್ಲಿ ಬಂದ ಪ್ರೇಕ್ಷಕರ ಮೇಲೆ ಕಣ್ಣಿಡುತ್ತಾರೆ. ಆದರೆ, ಭಾರತದಲ್ಲಿ ಕ್ರಿಕೆಟ್ ನಡೆದರೆ ಪೊಲೀಸರು ಕ್ರಿಕೆಟರ್​​ಗಳು ಹಾಗೂ ಕ್ರಿಕೆಟ್ ನೋಡುತ್ತಾ ನಿಂತಿರುತ್ತಾರೆ’ ಎಂದು ವಾದ ಮಂಡಿಸಿದರು. ಈ ರೀತಿಯ ಹಲವು ವಿಚಾರವನ್ನು ಅವರು ಮುಂದಿಟ್ಟಿದ್ದಾರೆ.
 
    ‘ಇಷ್ಟು ದೊಡ್ಡ ಮೊತ್ತದ ಹಣ ನೀಡುವುದರಲ್ಲಿ ಅರ್ಥ ಇದೆ’ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.ನಿರಂಜನ್ ರೆಡ್ಡಿ ಅವರು ಲಾಯರ್ ಮಾತ್ರವಲ್ಲ, ನಿರ್ಮಾಪಕರೂ ಹೌದು. ‘ಆಚಾರ್ಯ’ ಸಿನಿಮಾಗೆ ಅವರು ಕೂಡ ನಿರ್ಮಾಪಕರಾಗಿದ್ದರು. ಈ ಸಿನಿಮಾದಲ್ಲಿ ರಾಮ್ ಚರಣ್ ಹಾಗೂ ಚಿರಂಜೀವಿ ನಟಿಸಿದ್ದಾರೆ. ಈಗ ಅವರು ಅಲ್ಲು ಅರ್ಜುನ್ ಸಹಾಯಕ್ಕೆ ಬಂದು ಅವರನ್ನು ಜೈಲಿನಿಂದ ಹೊರಕ್ಕೆ ತಂದಿದ್ದಾರೆ.