ಪುಷ್ಪಾ-2 : ಹೊಸ ಟ್ವಿಸ್ಟ್‌ ಕೊಟ್ಟ ಡೈರೆಕ್ಟರ್‌ : ಏನು ಗೊತ್ತಾ….?

ಹೈದ್ರಾಬಾದ್‌ :

    ‘ಪುಷ್ಪ 2’ ಸಿನಿಮಾ ಸದ್ಯ ವಿವಾದಗಳ ಮೂಲಕ ಸುದ್ದಿ ಆಗುತ್ತಿದೆ. ನಿರ್ದೇಶಕ ಸುಕುಮಾರ್ ಹಾಗೂ ಹೀರೋ ಅಲ್ಲು ಅರ್ಜುನ್ ಮಧ್ಯೆ ಯವುದೂ ಸರಿ ಇಲ್ಲ, ಹೀರೋ ಶೂಟಿಂಗ್​ ಬರದೆ ವಿದೇಶಕ್ಕೆ ಹೋಗಿದ್ದಾರೆ ಎಂಬಿತ್ಯಾದಿ ವದಂತಿಗಳು ವೈರಲ್ ಆಗುತ್ತಿವೆ. ಈಗ ಗೊಂದಲಕ್ಕೆ ಅನೇಕರು ಸ್ಪಷ್ಟನೆ ನೀಡಿದ್ದಾರೆ. ಇವುಗಳ ಮಧ್ಯೆ ನಿರ್ದೇಶಕ ಸುಕುಮಾರ್ ಅವರು ಚಿತ್ರದ ಕ್ಲೈಮ್ಯಾಕ್ಸ್ ಶೂಟ್​ಗೆ ರೆಡಿ ಆಗಿದ್ದಾರೆ. ಎರಡೆರಡು ಕ್ಲೈಮ್ಯಾಕ್ಸ್ ಶೂಟ್ ಮಾಡಲು ಅವರು ಸಿದ್ಧತೆ ಮಾಡಿಕೊಂಡಿದ್ದಾರೆ.

   ಸದ್ಯ ಒಂದು ತಿಂಗಳ ಶೂಟ್ ಬಾಕಿ ಇದೆ ಎಂದು ವರದಿ ಆಗಿದೆ. ಅಲ್ಲು ಅರ್ಜುನ್ ಅವರು ಶೀಘ್ರವೇ ಸೆಟ್ ಸೇರಿಕೊಳ್ಳಲಿದ್ದಾರೆ. ಸದ್ಯ ಇತರ ಕಲಾವಿದರ ಶೂಟ್​ಗಳನ್ನು ಮಾಡಲಾಗುತ್ತಿದೆ. ಆದಾಗ್ಯೂ ಒಂದು ತಿಂಗಳ ಶೂಟ್ ಬಾಕಿ ಇದೆ ಎಂದು ಹೇಳಲಾಗುತ್ತಿದೆ. ಫೈಟಿಂಗ್ ಹಾಗೂ ಸಾಂಗ್ ಒಂದನ್ನು ಶೂಟ್ ಮಾಡಿದರೆ ಬಹುತೇಕ ಚಿತ್ರೀಕರಣ ಮುಗಿದಂತೆ ಆಗಲಿದೆ. ಆ ಬಳಿಕ ನಿರ್ದೇಶಕರು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಲಿದ್ದಾರೆ.

   ಕೆಲವು ವರದಿಗಳ ಪ್ರಕಾರ ಸುಕುಮಾರ್ ಅವರು ಎರಡು ಕ್ಲೈಮ್ಯಾಕ್ಸ್​ಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಎರಡನ್ನೂ ಶೂಟ್ ಮಾಡಿ ಕೊನೆಯಲ್ಲಿ ಯಾವುದನ್ನು ಇಡಬೇಕು, ಯಾವುದನ್ನು ತೆಗೆಯಬೇಕು ಎಂದು ನಿರ್ಧರಿಸಲಿದ್ದಾರೆ. ಎಡಿಟಿಂಗ್ ವೇಳೆ ಅವರು ಟ್ವಿಸ್ಟ್ ನೀಡಲಿದ್ದಾರೆ. ಇತ್ತೀಚೆಗೆ ಸಿನಿಮಾಗಳ ದೃಶ್ಯಗಳು, ಕಥೆ ಲೀಕ್ ಆಗುತ್ತಿರೋ ಪ್ರಕರಣಗಳು ನಡೆಯುತ್ತಿವೆ. ಇದನ್ನು ತಪ್ಪಿಸಲು ಸುಕುಮಾರ್ ಅವರು ಈ ಪ್ಲ್ಯಾನ್ ಮಾಡಿದ್ದಾರೆ. 

   ‘ಕೆಜಿಎಫ್ 2’ಗೆ ಮೂರನೇ ಪಾರ್ಟ್ ಬರಲಿದೆ. ಅದೇ ರೀತಿ ಸುಕುಮಾರ್ ಕೂಡ ಈ ಸಿನಿಮಾಗೆ ಮೂರನೇ ಪಾರ್ಟ್​ ತರೋ ಆಲೋಚನೆಯಲ್ಲಿ ಇದ್ದಾರೆ.  ‘ಪುಷ್ಪ 2: ದಿ ರೂಲ್’ ಸಿನಿಮಾ ಡಿಸೆಂಬರ್ 6ರಂದು ಬಿಡುಗಡೆ ಆಗಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಸೇರಿ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್​’ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link