ಭಾರತದಲ್ಲಿ ಮಣಿಪುರ ಹಾಗೂ ಕಾಶ್ಮೀರಕ್ಕೆ ಹೋಗಬೇಡಿ : ತನ್ನ ಪ್ರಜೆಗಳಿಗೆ ಅಮೇರಿಕ ಸೂಚನೆ

ನವದೆಹಲಿ: 

    ನಕ್ಸಲೀಯರು ಸಕ್ರೀಯರಾಗಿರುವ ಭಾರತದ ಮಣಿಪುರ ಮತ್ತು ಜಮ್ಮು-ಕಾಶ್ಮೀರಕ್ಕೆ ಪ್ರಯಾಣಿಸದಂತೆ ಅಮೆರಿಕ ತನ್ನ ಪ್ರಜೆಗಳಿಗೆ ಹೇಳಿದೆ. ಭಾರತದ ಪರಿಷ್ಕೃತ ಪ್ರವಾಸ ಸಲಹೆಯಲ್ಲಿ ಈಶಾನ್ಯ ರಾಜ್ಯಗಳ ಮಾಹಿತಿಯನ್ನು ಪ್ರತಿಬಿಂಬಿಸಲು ಅಪ್ ಡೇಟ್ ಮಾಡಲಾಗಿದೆ ಎಂದು ಸ್ಟೇಟ್ ಡಿಪಾರ್ಟ್ ಮೆಂಟ್ ಹೇಳಿದೆ.

    ಅಪರಾಧ ಮತ್ತು ಭಯೋತ್ಪಾದನೆಯಿಂದಾಗಿ ಭಾರತದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೆಲವು ಪ್ರದೇಶಗಳು ಅಪಾಯವನ್ನು ಹೆಚ್ಚಿಸಿವೆ ಎಂದು ಅದು ಹೇಳಿದೆ. ಒಟ್ಟಾರೆ ಭಾರತವನ್ನು 2 ನೇ ಹಂತದಲ್ಲಿ ಇರಿಸಲಾಗಿದೆ. ಆದರೆ ದೇಶದ ಹಲವಾರು ಭಾಗಗಳನ್ನು 4 ನೇ ಹಂತದಲ್ಲಿ ಇರಿಸಲಾಗಿದೆ: ಜಮ್ಮು ಮತ್ತು ಕಾಶ್ಮೀರ, ಭಾರತ-ಪಾಕ್ ಗಡಿ, ಮಣಿಪುರ ಮತ್ತು ಮಧ್ಯ ಮತ್ತು ಪೂರ್ವ ಭಾರತದ ಭಾಗಗಳು ನಾಲ್ಕನೇ ಹಂತದಲ್ಲಿವೆ.

   “ಭಯೋತ್ಪಾದನೆ ಮತ್ತು ನಾಗರಿಕ ಅಶಾಂತಿಯ ಕಾರಣದಿಂದ ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರಕ್ಕೆ (ಪೂರ್ವ ಲಡಾಖ್ ಪ್ರದೇಶ ಮತ್ತು ಅದರ ರಾಜಧಾನಿ ಲೇಹ್ ಹೊರತುಪಡಿಸಿ) ಪ್ರಯಾಣಿಸಬೇಡಿ; ಸಶಸ್ತ್ರ ಸಂಘರ್ಷದ ಸಾಧ್ಯತೆಯಿಂದಾಗಿ ಭಾರತ-ಪಾಕಿಸ್ತಾನ ಗಡಿಯ 10 ಕಿಮೀ ಒಳಗೆ ಹಾಗೂ ಭಯೋತ್ಪಾದನೆಯಿಂದಾಗಿ ಕೇಂದ್ರ ಮತ್ತು ಪೂರ್ವ ಭಾರತದ ಭಾಗಗಳಿಗೆ ತೆರಳಬೇಡಿ, ಮಣಿಪುರದಲ್ಲಿ ಹಿಂಸಾಚಾರ ಮತ್ತು ಅಪರಾಧ ಕಾರಣ ಅಲ್ಲಿಗೆ ಪ್ರಯಾಣಿಸದಂತೆ ಅಮೆರಿಕದ ಸ್ಟೇಟ್ ಡಿಪಾರ್ಟ್ ಮೆಂಟ್ ಸಲಹೆ ನೀಡಿದೆ.

Recent Articles

spot_img

Related Stories

Share via
Copy link
Powered by Social Snap