ಚಿತ್ರದುರ್ಗ;
ವೃತ್ತಿಯಿಂದ ನಿವೃತ್ತರಾದ ಪ್ರಾದ್ಯಾಪಕ ಹಾಗೂ ಖ್ಯಾತ ವಿಮರ್ಶಕರಾದ ಡಾ.ಲೋಕೇಶ್ ಅಗಸನಕಟ್ಟೆಯವರ ನಿವಾಸಕ್ಕೆ ಇಂದು ಬೆಳಗ್ಗೆ ತೆರಳಿ ಹಳೆಯ ವಿದ್ಯಾರ್ಥಿಗಳ ಗೆಳೆಯರ ಬಳಗದ ವತಿಯಿಂದ ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ.ಅಗಸನಕಟ್ಟೆ ಅವರು, ತಮ್ಮ ವೃತ್ತಿ ಅನುಭವದ ಮಾತುಗಳನ್ನು ನಮ್ಮೊಂದಿಗೆ ಹಂಚಿಕೊಂಡು ಮುಂದಿನ ಸಾಧ್ಯತೆ ಮತ್ತು ಸವಾಲುಗಳು ಕುರಿತಾದ ಚಿಂತನೆಗಳನ್ನು ಹೇಗೆ ಮಾಡಬೇಕು ಎನ್ನುವ ಸಲಹೆಯನ್ನು ನೀಡಿದರು.
ವೃತ್ತಿ ಎನ್ನುವುದು ನಮ್ಮ ಬದುಕಿಗೆ ಆಸರೆಯಾಗಬಹುದು ಆದರೆ ಲೋಕಜ್ಞಾನದ ಅನುಭವ ಬರವಣಿಗೆಯಿಂದ ಸಿಗುತ್ತದೆ. ಹಾಗಾಗಿ ಅಂತಹ ಸೃಜನಶೀಲ ಬರವಣಿಗೆಯನ್ನು ರೂಢಿಸಿಕೊಂಡಾಗ ನಮ್ಮ ಬದುಕಲ್ಲಿ ಆನಂದವನ್ನು ಕಾಣಲಿಕ್ಕೆ ಸಾಧ್ಯವಾಗುತ್ತದೆ. ಅಂತಹ ಬದಕು ವಿದ್ಯಾರ್ಥಿಗಳು ಕಟ್ಟಿಕೊಳ್ಳಬೇಕು ಎನ್ನುವ ಹಿತನುಡಿಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಮಹೇಶ್.ಕೆ ಕನ್ನಡ ಉಪನ್ಯಾಸಕರು, ಮಹಂತೇಶ್.ಹೆಚ್.ಪಿ ಅತಿಥಿ ಉಪನ್ಯಾಸಕರು, ಕಣುಮಪ್ಪ.ಕೆ ಸಂಶೋಧನಾ ವಿದ್ಯಾರ್ಥಿ, ಚೇತನ್ಕುಮಾರ್.ಎಂ.ಸಿ ಅತಿಥಿ ಉಪನ್ಯಾಸಕರು, ಲಿಂಗರಾಜು, ಶಂಕರ್ಹೊನ್ನೂರು ಅತಿಥಿ ಉಪನ್ಯಾಸಕರು, ಮಂಜೇಶ್ ಇನ್ನು ಮೊದಲಾದ ಹಳೆಯ ವಿದ್ಯಾರ್ಥಿಗಳು ಗುರುಗಳ ಅಭಿನಂಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ