ಈ ಕುರಿತು ಜುಲೈ 6ರಂದು ಜಿಲ್ಲಾಧಿಕಾರಿ ಪೊಲೀಸ್ ಕಮಿಷನರ್ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರ ಸಮ್ಮುಖದಲ್ಲಿ ಸಭೆ ನಡೆಸಿ ನೀಲನಕ್ಷೆಯಂತೆ ಪಿಲ್ಲರ್ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಿದ್ದು ಯೋಜನೆ ಅನುಷ್ಠಾನಕ್ಕೆ ಪೊಲೀಸ್ ಭದ್ರತೆ ನೀಡಬೇಕೆಂದು ಪತ್ರ ಬರೆಯಲಾಗಿದೆ.
ಈ ಬಗ್ಗೆ ನಗರದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು, ಅನುಮತಿ ಕೇಳಿ ವಿನಂತಿ ಪತ್ರ ಕೊಡುವ ಅವಶ್ಯಕತೆ ಇಲ್ಲ. ಸುಪ್ರೀಂ ಕೋರ್ಟ್ ಆರ್ಡರ್ ಇದೆ, ಈದ್ಗಾ ಮೈದಾನ ಇರುವುದು ಪಾಲಿಕೆ ಜಾಗ. ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡಲು ಹೇಳಿದೆ. ಈದ್ಗಾ ಮೈದಾನದಲ್ಲಿ ಅಂಜುಮನ್ ಆಗಲಿ, ಮುಸ್ಲಿಂ ಸಮುದಾಯದ ಮಾಲೀಕತ್ವದ ಹಕ್ಕಿಲ್ಲ. ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಲ್ಡಿಂಗ್, ದೇವಸ್ಥಾನ, ಮಸೀದಿ ಇದ್ದರು ತೆರವುಗೊಳಿಸಲು ಆರ್ಡರ್ ಇದೆ. ಹೀಗಾಗಿ ಯಾವ ಗೋಡೆ ತಗೆಯಬೇಕೆಂದು ಪತ್ರ ಬರೆದಿದ್ದಾರೆ. ಈದ್ಗಾ ಮೈದಾನದ ಗೋಡೆ ತೆರವುಗೊಳಿಸಲಬೇಕು ಎಂದಿದ್ದಾರೆ.
ನಮಾಜ್ ಮಾಡುವುದರಿಂದ ಅಲ್ಲಿ ಟ್ರಾಫಿಕ್ ಎಷ್ಟಾಗತ್ತೆ. ಇವರಿಗಾಗಿ ಒಂದು ದಿನ ಟ್ರಾಫಿಕ್ ಡೈವರ್ಟ್ ಮಾಡುತ್ತಾರೆ. ಹೀಗಾಗಿ ಕಾಮಗಾರಿಗೆ ನಮ್ಮ ಬೆಂಬಲ ಇದೆ. ಅಕಸ್ಮಾತ್ ಯಾರಾದರೂ ವಿರೋಧ ಮಾಡಿದರೆ ನಾವು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಪ್ ಹಳ್ಳೂರ ಮಾತನಾಡಿದ್ದು, ಮೊದಲ ಪ್ಲ್ಯಾನ್, ಇವಾಗಿನ ಪ್ಲ್ಯಾನ್ ಬೇರೆ ಇದೆ. ಮುಸ್ಲಿಂ, ಈದ್ಗಾ ಮೈದಾನ ವಿರೋಧ ಮಾಡಲು ಹೀಗೆ ಮಾಡುತ್ತಿದ್ದಾರೆ. ಒಂದು ಸಮುದಾಯ ಓಲೈಕೆಗೆ ಮಾಡುತ್ತಿದ್ದಾರೆ. ಫ್ಲೈ ಓವರ್ ಕಾಮಗಾರಿ ಇವಾಗ ಹೊಸ ಪ್ಲ್ಯಾನ್ ಮಾಡಿದೆ. ಪದೇ ಪದೇ ಈದ್ಗಾ ಮೈದಾನಕ್ಕೆ ಬೆನ್ನು ಹತ್ತಿದ್ದಾರೆ. ಈದ್ಗಾ ಮೈದಾನದ ಕಾಂಟ್ರವರ್ಸಿ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಕಿಡಿಕಾರಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಾಹೇಬರು ಮನೆ ಹಾಗೂ ಕಚೇರಿಯಲ್ಲಿ ನಾಯಕರ ಜೊತೆ ಈದ್ಗಾ ಮೈದಾನದ ಫೋಟೋ ಇಟ್ಟು ಪೂಜೆ ಮಾಡಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈದ್ಗಾ ಮೈದಾನದಿಂದ ರಾಜಕೀಯ ಮಾಡಿ ಕೇಂದ್ರ ಮಂತ್ರಿಯಾಗಿದ್ದೀರಿ. ಜೋಶಿ ಅವರನ್ನು ಮನಗೆ ಕಳಿಸಲು ಜನ ತೀರ್ಮಾನ ಮಾಡಿದ್ದರು.
ನೇಹಾ ಹಿರೇಮಠ ಘಟನೆ ಮೂಲಕ ಚುನಾವಣೆ ಮಾಡಿದ್ದರು. ನೇಹಾ ಹಿರೇಮಠನಿಂದಲೇ ಜೋಶಿ ಗೆದ್ದಿದ್ದು. ಕೊಲೆಯಾಗಿರೋದನ್ನ ಖಂಡನೆ ಮಾಡುವುದುಬಿಟ್ಟು ರಾಜಕೀಯ ಮಾಡಿದರು. ಅರವಿಂದ ಬೆಲ್ಲದ್ ಅವರೇ ಜಬರದಸ್ತ ಮಾಡಿ ಅಮಿತ್ ಶಾ ಗೆ ಭೇಟಿ ಮಾಡಿಸಿದ್ದರು. ಪದೇ ಪದೇ ಈದ್ಗಾ ಮೈದಾನ ಯಾಕೆ ಬೇಕು. ಒಂದು ಕೋಮಿಗೆ ಅವಮಾನ ಮಾಡಿ, ರಾಜಕೀಯ ಮಾಡ್ತಾರೆ. ಕೋಮುವಾದಿ ಹಿಂದೂಗಳನ್ನು ಓಲೈಕೆಗಾಗಿ ಟಾರ್ಗೆಟ್ ಮಾಡಿ ಈದ್ಗಾ ಮೈದಾನದ ತೆರವು ಮಾಡಲು ಪ್ಲ್ಯಾನ್ ಮಾಡಲಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.