ಸಾವಯವ ಕೃಷಿಯಿಂದ ಪರಿಸರ ಸಮತೋಲನ ಸಾಧ್ಯ

ಗುಬ್ಬಿ :

ಗುಬ್ಬಿ ತಾಲ್ಲೂಕಿನ ಸಿಎಸ್ ಪುರ ಹೋಬಳಿಯ ವೆಂಕಟೇಗೌಡನಪಾಳ್ಯದಲ್ಲಿ ಐಡಿಎಫ್ ಸಂಸ್ಥೆ ಬೆಂಗಳೂರು, ಗ್ರಾಮ್‍ಸರ್ವ್ ಕಂಪನಿ ಮತ್ತು ಸಿಎಸ್ ಪುರ ರೈತ ಉತ್ಪಾದಕರ ಕಂಪನಿವತಿಯಿಂದ ಏರ್ಪಡಿಸಿದ್ದ ಸುಸ್ಥಿರ ಕೃಷಿ ಸಂವಾದದಲ್ಲಿ ಐಡಿಎಫ್ ಸಂಸ್ಥೆಯ ಸಹಾಯಕ ಯೋಜನಾಧೀಕಾರಿ ಕೆ.ಎನ್. ಗುರುದತ್ ಮಾತನಾಡಿದರು.

ರೈತರು ಸಾವಯವ ಕೃಷಿ ಮಾಡುವುದರಿಂದ ಪರಿಸರವನ್ನು ಸಮತೋಲನದಲ್ಲಿ ನೂಡಲು ಸಾಧ್ಯವಾಗುತ್ತದೆ ಎಂದು ಐಡಿಎಫ್ ಸಂಸ್ಥೆಯ ಸಹಾಯಕ ಯೋಜನಾಧೀಕಾರಿ ಕೆ.ಎನ್. ಗುರುದತ್ ತಿಳಿಸಿದರು.

ತಾಲ್ಲೂಕಿನ ಸಿಎಸ್ ಪುರ ಹೋಬಳಿಯ ವೆಂಕಟೇಗೌಡನಪಾಳ್ಯದಲ್ಲಿ ಐಡಿಎಫ್ ಸಂಸ್ಥೆ ಬೆಂಗಳೂರು, ಗ್ರಾಮ್‍ಸರ್ವ್ ಕಂಪನಿ ಮತ್ತು ಸಿಎಸ್ ಪುರ ರೈತ ಉತ್ಪಾದಕರ ಕಂಪನಿವತಿಯಿಂದ ಏರ್ಪಡಿಸಿದ್ದ ಸುಸ್ಥಿರ ಕೃಷಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನದಲ್ಲಿ ಸರ್ಕಾರ ಸಾವಯವಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ. ಆದ್ದರಿಂದ ರೈತರು ತಾವು ಬೆಳೆಯುವ ತರಕಾರಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಸಾವಯವ ಗೊಬ್ಬರ ಮತ್ತು ಸಾವಯವ ಕೀಟನಾಶಕವನ್ನು ಬಳಸಿಕೊಂಡು ಕೃಷಿ ಮಾಡುವುದರಿಂದ ಕೃಷಿನ್ನು ಕಡಿಮೆ ಖರ್ಚಿನಲ್ಲಿ ಮಾಡಬಹುದು. ಇಳುವರಿಯನ್ನು ಸಹ ಅಧಿಕವಾಗಿ ಪಡೆಯಬಹುದು ಎಂದರು.

ಮುಖ್ಯ ಕಾರ್ಯನಿರ್ವಹಕ ಆಧಿಕಾರಿ ಲೋಕೇಶ್ ಮಾತನಾಡಿ, ಎಲ್ಲಾ ಸದಸ್ಯರು ಕಂಪನಿಯಿಂದ ದೊರೆಯುವ ಬೆಳೆ ವೈದ್ಯ ಸೇವೆಗಳನ್ನು ಬಳಸಿಕೊಂಡು ಉತ್ತಮ ಬೆಳೆಗಳನ್ನು ಬೆಳೆಯಲುಮುಂದಾಗಬೇಕು ಎಂದರು.
ಸಂವಾದ ಕಾರ್ಯಕ್ರಮದಲ್ಲಿ ಕಂಪನಿಯ ಲೆಕ್ಕಾಧಿಕಾರಿ ಶ್ರೀಕಾಂತ್, ಬ್ಯಾಂಕ್ ವ್ಯವಹಾರ ಪ್ರತಿನಿಧಿ ಗಂಗಮ್ಮ, ಪ್ರಗತಿ ರೈತರು, ಕೃಷಿಕ ಸಂಘದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link