ಕೊರಟಗೆರೆ :-
ಪ್ರಸಿದ್ಧ ಮಾಜಿ ಸಚಿವ ಶ್ರೀ ಚೆನ್ನಿಗಪ್ಪನವರ ಮಡದಿ ಸಿದ್ದಗಂಗಮ್ಮ (76 ವರ್ಷ) ಜನವರಿ 4 ಜನವರಿ ಶನಿವಾರ ಅಕಾಲಿಕ ಮರಣ ಹೊಂದಿದ್ದು, ಭಾನುವಾರ ನೆಲಮಂಗಲ ತಾಲ್ಲೂಕು ತ್ಯಾಮಗೊಂಡ್ಲು ಹೋಬಳಿ ಬೈರನಾಯಕನಹಳ್ಳಿ ತೋಟದ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಅರಣ್ಯ ಖಾತೆ, ಬಂದಿಖಾನೆ ಸೇರಿದಂತೆ ಇನ್ನಿತರ ಉನ್ನತ ಖಾತೆ ಹೊಂದಿದ್ದ ಸಿ ಚೆನ್ನಗಪ್ಪನವರು 2006ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ, ಕೊರಟಗೆರೆ ಕ್ಷೇತ್ರದಲ್ಲಿ ಸತತ ಮೂರು ಬಾರಿ ವಿಧಾನಸಭಾ ಪ್ರವೇಶಿಸಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಸಿ. ಚನ್ನಗಪ್ಪನವರು ಕೊಡುಗೈ ದಾನಿ,
ಬಡವರ ಬಂಧು ದೀನ ದಯಾಳು ಎಂದು ಹೆಸರಾಂಕಿತರಾಗಿ ತಮ್ಮ ಮನೆಗೆ ಬರುವಂತಹ ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರುಗಳಿಗೆ ಸದಾ ಹಸನ್ಮುಖಿಯಾಗಿ ಸಮಸ್ಯೆ ಹೊತ್ತು ಬರುವ ಜನರಿಗೆ ಆಸರೆಯಾಗುತ್ತಿದ್ದ ಸಿ.ಚನ್ನಿಗಪ್ಪನವರ ಜೊತೆಯಲ್ಲಿ ನಿಂತು ಹೆಗಲಿಗೆ ಹೆಗಲು ನೀಡುತೀದ್ದ ಅವರ ಮಡದಿ ಸಿದ್ದಗಂಗಮ್ಮ ಬರುವ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಉಣಬಡಿಸಿ ನಿತ್ಯ ದಾಸೋಹ ನಡೆಸುತ್ತಿದ್ದಂತಹ ಸಿ. ಚೆನ್ನಿಗಪ್ಪನವರ ಮಡದಿ ಸಿದ್ದಗಂಗಮ್ಮ ಅಕಾಲಿಕ ಮರಣ ಸುದ್ದಿ ಬಹಳಷ್ಟು ಕಾರ್ಯಕರ್ತರ ಹಾಗೂ ಅಭಿಮಾನಿಗಳಿಗೆ ಆಘಾತ ಮೂಡಿಸಿದ್ದು,
ಶ್ರೀ ಚನ್ನಪ್ಪನವರ ಮರಣಾ ನಂತರ ಚನ್ನಗಿಯಪ್ಪನವರ ಅಭಿಮಾನಿಗಳನ್ನ ಹಾಗೂ ಹಿತೈಷಿಗಳನ್ನು ಕಾಪಾಡಿಕೊಂಡು ಬಂದಿದ್ದಂತ ಅವರ ಮಡದಿ ಸಿದ್ದಗಂಗಮ್ಮ ಆಕಾಲಿಕ ಮರಣದ ಸುದ್ದಿ ಕೇಳಿ ನೂರಾರು ಜನ ಕಂಬನಿ ಮಿಡಿದಿದ್ದಾರೆ.
ಇವರ ಮಕ್ಕಳಾದ ಮಾಜಿ ಶಾಸಕ ಡಿಸಿ ಗೌರಿಶಂಕರ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಡಿಸಿ ವೇಣುಗೋಪಾಲ್ ಹಾಗೂ ಡಿಸಿ ಅರುಣ್ ಕುಮಾರ್ ಸೇರಿದಂತೆ ಒಬ್ಬರು ಹೆಣ್ಣು ಮಗಳು
ತಾಯಿ ಅಗಲುವಿಕೆಯಿಂದ ದುಃಖ ತಪ್ತರಾಗಿದ್ದಾರೆ, ಹಿರಿಯ ಮಗ ಡಿಸಿ ಅರುಣ್ ಕುಮಾರ್ ಪತ್ರಿಕೆಗೆ ಮಾಹಿತಿ ನೀಡಿ ಬೈರನಾಯಕನಹಳ್ಳಿ ತೋಟದ ಮನೆಯಲ್ಲಿ ನಮ್ಮ ತಂದೆ ಸಿ. ಚೆನ್ನಿಗಪ್ಪ ನವರ ಅಂತ್ಯಕ್ರಿಯೆ ನಡೆಸಿದ ಪಕ್ಕದಲ್ಲಿ ತಾಯಿಯ ಅಂತ್ಯಕ್ರಿಯೆಗೂ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ .
