ಕಷ್ಟಗಳ ಸರಮಾಲೆಯಲ್ಲಿ ವಿನೋದ್ ರಾಜ್

ಬೆಂಗಳೂರು: 

       ಕನ್ನಡ ಹೆಸರಾಂತ ನಟಿ ಲೀಲಾವತಿಯವರ ಮಗ ವಿನೋದರಾಜ್ ಅವರ ಜೀವನದಲ್ಲಿ ಈಗ ಕಷ್ಟಗಳ ಸರಮಾಲೆ ಎದುರಾಗಿದ್ದು, ಅದನ್ನು ತಪ್ಪಿಸಲು ಈಗ ಅವರು ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

        ಅವರು ಚೆನ್ನೈನಲ್ಲಿರುವ ತಮ್ಮ ತೋಟವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಸಿನಿಮಾ ರಂಗದಿಂದ ದೂರ ಉಳಿದ ನಂತರ ಅವರ ಕೈ ಹಿಡಿದದ್ದು  ಕೃಷಿ. ಆದರೆ ಈಗಿನ ಪರಿಸ್ಥಿತಿಯಲ್ಲಿ  ಕೃಷಿಯಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ಅವರು ಅಳಲು ತೋಡಿಕೊಂಡರು , ಬೆಲೆ ಏರಿಕೆಯಿಂದಾಗಿ ವ್ಯಾಪಾರ ವಹಿವಾಟಿನಲ್ಲಿ ಏರುಪೇರಾಗಿದೆ. ಆದ್ದರಿಂದ ಆಸ್ತಿ ಮಾರಾಟ ಮಾಡಲು ನಿರ್ಧಾರ ಮಾಡಿರುವುದಾಗಿ ವಿನೋದ್ ರಾಜ್ ಅವರು ಹೇಳಿದ್ದಾರೆ ಮತ್ತು ಇತ್ತೀಚೆಗಷ್ಠೆ ಅವರು ಬೀದಿ ರಾಬರಿಗೆ ಒಳಗಾಗಿದ್ದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link