ಸಚಿವ ಮಹದೇವಪ್ಪವರ ಹುಟ್ಟು ಹಬ್ಬದ ಹಿನ್ನೆಲೆ ಪೌರಕಾರ್ಮಿಕರಿಗೆ ಮತ್ತು ಮಕ್ಕಳಿಗೆ ಹೊಸ ಸಮವಸ್ತ್ರ, ದಿನಸಿಕಿಟ್ ವಿತರಣೆ

ಬೆಂಗಳೂರು:

    ಸರಳ ವ್ಯಕ್ತಿತ್ವ, ಕಾಂಗ್ರೇಸ್ ಪಕ್ಷದ ಹಿರೀಯ ನಾಯಕರಾದ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಮಹದೇವಪ್ಪವರ ಹುಟ್ಟು ಹಬ್ಬದ ಹಿನ್ನೆಲೆ ಬೆಂಗಳೂರು ನಗರದಲ್ಲಿ ಅಭಿಮಾನಿಗಳ ಒತ್ತಾಯದಿಂದ ಹುಟ್ಟುಹಬ್ಬದ ಸಂಭ್ರಮ ಆಚರಣೆ ನಡೆಯಿತ್ತು. ಆಗೆ ಕರ್ನಾಟಕ ರಾಜ್ಯ ಸಂವಿಧಾನ ಬಳಗವತಿಯಿಂದ ಕೇಕ್ ಕಟಿಂಗ್, ಪೌರಕಾರ್ಮಿಕರಿಗೆ ಮತ್ತು ಮಕ್ಕಳಿಗೆ ಸಮವಸ್ತ್ರ, ದಿನಸಿ ಕಿಟ್ ವಿತರಣೆ ಮಾಡುವುದರ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.

     ಸಂಭ್ರಮ ಆಚರಣೆಯಲ್ಲಿ ಕರ್ನಾಟಕ ರಾಜ್ಯ ಸಂವಿಧಾನ ಬಳಗ ರಾಜ್ಯಾಧ್ಯಕ್ಷರು ಎಸ್ ಜಯಕಾಂತ್ ಚಾಲಕ್ಯ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಆರ್ ಜಯಚಂದ್ರ , ಮಾಜಿ, ಕರುನಾಡು ಸೇನೆ ಅಧ್ಯಕ್ಷರಾದ ಭಾರತ್ , INTC ಮಂಡ್ಯ ತಾಲ್ಲೂಕು ಕಾರ್ಯಾಧ್ಯಕ್ಷರಾದ ಬಾಲಾಜಿ , ಮುನಿರಾಜು ಸೇರಿದಂತೆ ಅನೇಕ ಗಣ್ಯರು ಭಾಗಿ.