ಮಂಡ್ಯ:
ಅಕ್ರಮವಾಗಿ 12.940 ಕೆಜಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.
ಮೈಸೂರಿನ ಕಲ್ಯಾಣನಗರದ ಅಂಬೇಡ್ಕರ್ ಬಡಾವಣೆ ನಿವಾಸಿ ಅಬ್ದುಲ್ ರೆಹಮಾನ್ ಅವರ ಪುತ್ರ ಇರ್ಷಾದ್(44) ಹಾಗೂ ಗುಂಡ್ಲುಪೇಟೆ ಈದ್ದಾ ಮೊಹಲ್ಲಾ, ಕಾರ್ಖಾನೆ ಬೀದಿಯ ನಿವಾಸಿ ನವಾಬ್ ಅವರ ಪುತ್ರ ಅಕ್ಟರ್ ಅಲಿಯಾಸ್ ಮುಬಾರಕ್(38) ಬಂಧಿತರು.
ತಾಲೂಕಿನ ಬೊಮ್ಮೂರು ಅಗ್ರಹಾರ ಗೇಟ್ ಬಳಿಯ ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೈಸೂರು ಕಡೆಯಿಂದ ಶ್ರೀರಂಗಪಟ್ಟಣ ಕಡೆಗೆ ಆರೋಪಿಗಳಿಬ್ಬರು 7ಲಕ್ಷ ಮೌಲ್ಯದ ಒಣ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ದೊರೆತ ಹಿನ್ನಲೆ ಮೈಸೂರು ವಿಭಾಗ ಅಬಕಾರಿ ಜಂಟಿ ಆಯುಕ್ತ ಬಸವರಾಜ ಹಡಪದ, ಮಂಡ್ಯ ಜಿಲ್ಲಾ ಉಪ ಆಯುಕ್ತ ಡಾ.ಆರ್.ನಾಗಶಯನ ಇವರ ನಿರ್ದೇಶನದ ಮೇರೆಗೆ ಪಾಂಡವಪುರ ಉಪವಿಭಾಗದ ಅಧೀಕ್ಷಕಿ ವಿ.ಬಿ.ರಾಧಮಣಿ ಅವರ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ವಲಯ ಅಬಕಾರಿ ನೀರಿಕ್ಷಕ ವೈ.ಜೆ.ಪ್ರಫುಲ್ಲಾ ಚಂದ್ರ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಮಾಲು ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಲಾಗಿದ್ದು, ಕಾರ್ಯಾಚರಣೆಯಲ್ಲಿ ತಾಲೂಕು ಪಶುವೈದ್ಯಾಧಿಕಾರಿ ಡಾ.ಸಿ.ಜಿ.ಸುರೇಶ್ ನೆರವು ನೀಡಿದ್ದು, ಅಬಕಾರಿ ಉಪ ನಿರೀಕ್ಷಕ ಬಿ.ಶಿವಣ್ಣ, ಎಚ್.ವಿ.ರಾಮು, ಎಂ.ಎನ್.ನಾಗೇಂದ್ರ, ಎಸ್.ಎನ್.ಯೋಗೇಶ್, ಪಿ.ಜಿ.ದಿಲೀಪ್ ಕುಮಾರ್, ಅಬಕಾರಿ ಮುಖ್ಯ ಪೇದೆಗಳಾದ ಚಾಲಕ ಇದ್ದರು
