ಮಧುವೆಗೆ ಒಪ್ಪದೇ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ

ಕುಣಿಗಲ್ : 

     ಓದುವುದು ಬ್ಯಾಡ ಮಧುವೆಯಾಗು ಎಂದಿದ್ದಕ್ಕೆ ಬೇಸರಗೊಂಡ ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಕೆಆರ್‌ಎಸ್ ಅಗ್ರಹಾರದ ಮಹಾತ್ಮಗಾಂಧಿ ಕಾಲೇಜು ಮಂಭಾಗದ ರಸ್ತೆಯಲ್ಲಿ ಭಾನುವಾರ ನಡೆದಿದೆ

    ತಾಲೂಕಿನ ಕೊತ್ತಗೆರೆ ಹೋಬಳಿ ಹಿರೇಮೇಸ್ತಿçಪಾಳ್ಯ ಗ್ರಾಮ ಹಾಲಿ ಕುಣಿಗಲ್ ಪಟ್ಟಣದ ಕೆಆರ್‌ಎಸ್ ಅಗ್ರಹಾರ ವಾಸಿ ರಕ್ಷಿತಾ (೨೩) ಆತ್ಮಹತ್ಯೆ ಮಾಡಿಕೊಂಡ ಯುವತಿ

    ರಕ್ಷಿತಾಳು ಕುಣಿಗಲ್ ಪಟ್ಟಣದ ಕೆಆರ್‌ಎಸ್ ಅಗ್ರಹಾರದಲ್ಲಿ ಬಾಡಿಗೆ ಮನೆಯಲ್ಲಿ ಇದ್ದರು ಆಕೆಗೆ ಮಧುವೆಯಾಗು ಎಂದು ಪೋಷಕರು ಹುಡುಗನನ್ನು ತೋರಿಸಿದರು ನಾನು ಈಗಲೇ ಮಧುವೆಯಾಗುವುದಿಲ್ಲ, ಇನ್ನು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕೆಂದು ತಿಳಿಸಿದ್ದಾಳೆ ಎನ್ನಲಾಗಿದ್ದು, ಇಲ್ಲ ನೀನು ಮಧುವೆಯಾಗಬೇಕು ಎಂದು ಪೋಷಕರು ತಿಳಿಸಿದ್ದಾರೆ ಎನ್ನಾಲಾಗಿದ್ದು, ಇದರಿಂದ ಬೇಸರಗೊಂಡ ರಕ್ಷಿತಾಳು ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದಾರೆ,

Recent Articles

spot_img

Related Stories

Share via
Copy link