ಕೊರಟಗೆರೆ:
ರಾಜ್ಯದ ಪ್ರಮುಖ ದಾರ್ಮಿಕ ಕ್ಷೇತ್ರಗಳಲ್ಲೂಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿದೇವಾಲಯ ಕಳೆದ 6 ವರ್ಷಗಳ ಹಿಂದೆಟ್ರೇಸ್ಟ್ ಹಾಗೂ ಪುನರ್ಸ್ಥಾಪಿತಟ್ರೇಸ್ಟ್ ನಡುವೆ ನೆಡೆದಕದನಕೊರ್ಟ್ನ ಮೆಟ್ಟಿಲ್ಲೇರಿ ಸರ್ಕಾರದ ಅದೀನದಲ್ಲಿದ್ದ ದೇವಾಲಯ ಅಂತಿಮವಾಗಿ ಕೋರ್ಟ್ ಅದೇಶದಂತೆಶನಿವಾರ ಮತ್ತೆ ಹಳೆಯ ಟ್ರಸ್ಟ್’ಗೆ ಹಸ್ತಾಂತರಿಸುವಂತೆ ಮಹತ್ವದಅದೇಶ ಹೊರಡಿಸಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ತೀತಾಗ್ರಾ.ಪಂ ವ್ಯಾಪ್ತಿಗೆ ಬರುವ ಗೋರವವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯ ರಾಜ್ಯದ ಪ್ರಮುಖ ದೇವಾಲಯಗಳಲ್ಲೂಂದ್ದಾಗಿದ್ದು, ದೇವಾಲಯ ಬೆಳೆದಂತೆಲ್ಲಾ ಸ್ಥಳಿಯ ಕೆಲವು ಸಮಸ್ಯೆ ತಲೆದೂರಿ ಕಳೆದ 6 ವರ್ಷಗಳ ಹಿಂದೆ ಹಳೆಯ ಟ್ರಸ್ಟ್ ಹಾಗೂ ಪುನರ್ ಸ್ಥಾಪಿತ ಟ್ರಸ್ಟ್ ನದುವೆ ಸಂಘರ್ಷಏರ್ಪಟ್ಟು ಕನೂನು ಸುವ್ಯವಸ್ಥೆ ದೃಷ್ಥಿಯಿಂದ ಕೋರ್ಟ್ ತಾತ್ಕಾಲಿಕವಾಗಿ ಸರ್ಕಾರಕ್ಕೆ ವಹಿಸಲಾಗಿ ದೀರ್ಘ ಕಾಲದ ವಾದವಿವಾದಗಳ ನಂತರ ಈಗ ಮತ್ತೆಕೋರ್ಟ್ ಹಳತಯ ಟ್ರಸ್ಟ್ ಗೆ ವಹಿಸುವಂತೆ ಅದೇಶಿಸಿದೆ.
ಉಚ್ಚ ನ್ಯಾಯಾಲಯದ ಆದೇಶ ಮತ್ತು ಧಾರ್ಮಿಕದತ್ತಿ ಇಲಾಖೆ ಆಯುಕ್ತ, ತುಮಕೂರು ಜಿಲ್ಲಾಧಿಕಾರಿ ನಿರ್ದೆಶನದಂತೆ ಕೆಲವು ನಿಬಂಧನೆಗಳಿಗೆ ಒಳಪಡಿಸಿ ನಿಯಮಾನುಸಾರ ಜಿಲ್ಲಾಧಿಕಾರಿಗಳ ಆದೇಶದಂತೆ 2021ನೇ ಫೆ.27ರ ಶನಿವಾರ ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಗೆ ದೇವಾಲಯದ ಸಂಪೂರ್ಣ ಅಧಿಕಾರವನ್ನುಇಲ್ಲಿನ ಹಳೆಯ ಮಹಾಲಕ್ಷ್ಮೀ ಚಾರಿಟ್ರೇಬಲ್ ಟ್ರಸ್ಟ್’ಗೆ ಹಸ್ತಾಂತರ ಮಾಡಿದೆ.
ಸರಕಾರದಿಂದ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯವು ಕಾಯ್ದೆಯನುಸಾರ ಘೋಷಿತ ಸಂಸ್ಥೆಯೆಂದು ಘೋಷಿಸಲು ಅಂತಿಮ ಆದೇಶ ಹೊರಡಿಸುವತನಕ ಟ್ರಸ್ಟ್ನವರು ಸಾರ್ವಜನಿಕ ವಂತಿಗೆ ಮತ್ತು ಮಹತ್ತರತಿರ್ಮಾನ ತೆಗೆದುಕೊಳ್ಳದಂತೆ ಸೂಚಿಸಿದೆ. ದೇವಾಲಯ ದಾಖಲೆ ಮತ್ತು ಲೆಕ್ಕ ಪತ್ರಗಳನ್ನು ಪ್ರತಿ ಮಾಹೆ ಜಿಲ್ಲಾಧಿಕಾರಿಗಳ ಗಮನಕ್ಕೆ ಕಡ್ಡಾಯವಾಗಿತರಲು ಸೂಚಿಸಿ ಉಚ್ಚ ನ್ಯಾಯಾಲಯವು ನಿಬಂಧನೆಗಳಿಗೆ ಒಳಪಡಿಸಿ ಆದೇಶ ಮಾಡಿದೆ.
ಗೊರವನಹಳ್ಳಿ ಪುಣ್ಯಕ್ಷೇತ್ರದ ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಮತ್ತು ಶ್ರೀಮಹಾಲಕ್ಷ್ಮೀ ಪುನಃಸ್ಥಾಪಿತಟ್ರಸ್ಟ್ ನಡುವೆ ವೈಮಸ್ಸಿನ ಹಿನ್ನಲೆ ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಸರಕಾರವು ಆಡಳಿತ ಅಧಿಕಾರವನ್ನು 2015ನೇ ಮಾರ್ಚ್ 7ರಂದು ತನ್ನ ವಶಕ್ಕೆ ಪಡೆದಿತ್ತು. ಸತತ 6ವರ್ಷಗಳ ನಂತರ ಸರಕಾರದಿಂದ ಮತ್ತೆ ದೇವಾಲಯದ ಟ್ರಸ್ಟ್ ಗೆ ಮತ್ತೆ ಅಧಿಕಾರ ಬಂದಿರುವ ಹಿನ್ನಲೆ ಗೊರವನಹಳ್ಳಿ ಮಹಾಲಕ್ಷ್ಮೀಯ ಭಕ್ತರಲ್ಲಿ ಸಂತಷ ಮನೆಮಾಡಿದೆ.
ಮಹಾಲಕ್ಷ್ಮೀದೇವಾಲಯದ ಆಡಳಿತ ಅಧಿಕಾರವನ್ನು ಮಧುಗಿರಿ ಎಸಿ ಸೋಮಪ್ಪ ಕಡಕೋಳರವರು ಸರಕಾರದಿಂದ ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ನಅದ್ಯಕ್ಷ ಟಿ.ಆರ್.ಶ್ರೀರಂಗಯ್ಯನಿಗೆ ಕಾರ್ಯದರ್ಶಿ ಚಿಕ್ಕನರಸಪ್ಪ, ಧರ್ಮದರ್ಶಿ ರಂಗಶಾಮಯ್ಯ, ರಾಮಕೃಷ್ಣಯ್ಯ, ನರಸರಾಜು, ಲಕ್ಷ್ಮೀನರಸಯ್ಯ, ತಹಶೀಲ್ದಾರ್ ಗೋವಿಂದರಾಜು, ಉಪತಹಶೀಲ್ದಾರ್ ಮಧುಚಂದ್ರ, ತೀತಾಗ್ರಾಪಂಅಧ್ಯಕ್ಷ ಟಿ.ಆರ್.ನಟರಾಜು ಹಾಗೂ ದೇವಾಲಯದ ಸಿಬ್ಬಂದಿಗಳ ಸಮಾಕ್ಷಮದಲ್ಲಿ ಹಸ್ತಾಂತರ ಮಾಡಿದ್ದಾರೆ.
ಮಹಾಲಕ್ಷ್ಮೀ ಭಕ್ತಾಧಿಗಳ ಆಶಯದಂತೆ ಗೊರವನಹಳ್ಳಿ ದೇವಾಲಯದ ಆಡಳಿತ ಮತ್ತೇ ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಗೆ ಬಂದಿದೆ . ಉಚ್ಚ ನಾಯಾಲಯದ ಆದೇಶ, ನಿಬಂಧನೆ ಮತ್ತು ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಿ ಭಕ್ತರಿಗೆ ಸಕಲ ಸೌಲಭ್ಯ ಕಲ್ಪಿಸುತ್ತೇವೆ. ಮಹಾಲಕ್ಷ್ಮೀ ದೇವಾಲಯ ಅಭಿವೃದ್ದಿ ಮತ್ತು ಭಕ್ತರ ಸೇವೆಗೆ ಟ್ರಸ್ಟ್ ಸದಾ ಶ್ರಮಿಸಲಿದೆ.
ಟಿ.ಆರ್.ಶ್ರೀರಂಗಯ್ಯ. ಅಧ್ಯಕ್ಷ. ಮಹಾಲಕ್ಷ್ಮೀಚಾರಿಟಬಲ್ ಟ್ರಸ್ಟ್.ಗೊರವನಹಳ್ಳಿ.
ಗೋರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯದಟ್ರೇಸ್ಟ್ದಾರ್ಮಿಕಕ್ಷೇತ್ರಕ್ಕೆ ಮಾತ್ರ ಸೀಮಿತವಗದೆ ಈ ಹಿಂದಿನ ಎಲ್ಲಾ ಚಟುವಟಿಕೆಗಳಿಗೂ ತೊಡಗಿಸಿಕೊಳ್ಳುವುದಲ್ಲದೆ ಶೈಕ್ಷಣಿಕ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಲಾಗುವುದು
ಚಿಕ್ಕನರಸಪ್ಪ, ಕಾರ್ಯದರ್ಶಿಗಳು, ಮಹಾಲಕ್ಷ್ಮೀಚಾರಿಟಬಲ್ ಟ್ರಸ್ಟ್. ಗೊರವನಹಳ್ಳಿ.
ಉಚ್ಚ ನಾಯಾಲಯ ಮತ್ತು ಧಾರ್ಮಿಕ ದತ್ತಿ ಆಯುಕ್ತರ ಆದೇಶದಂತೆ ಗೊರವನಹಳ್ಳಿ ದೇವಾಲಯದ ಆಡಳಿತದ ಜವಾಬ್ದಾರಿ ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಗೆ ಹಸ್ತಾಂತರ ಮಾಡಲಾಗಿದೆ. ಇನ್ನುಳಿದ ಎಲ್ಲಾ ಅಧಿಕಾರವನ್ನು ಸೋಮವಾರ ವಹಿಸುತ್ತೇವೆ. ತುಮಕೂರು ಜಿಲ್ಲಾಧಿಕಾರಿಗಳ ನಿರ್ದೆಶನದಂತೆ ನ್ಯಾಯಾಲಯದ ಷರತ್ತು ಮತ್ತು ನಿಬಂಧನೆ ಪಾಲನೆಯ ಬಗ್ಗೆ ಟ್ರಸ್ಟ್ಗೆ ಸೂಚಿಸಲಾಗಿದೆ.
ಸೋಮಪ್ಪ ಕಡಕೋಳ.ಆಡಳಿತಾಧಿಕಾರಿ/ಎಸಿ.ಮಧುಗಿರಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
