ಫೂರ್ಣಗೊಳ್ಳದ ಕಾಮಗಾರಿ : ಉದ್ಗಾಟನೆಗೆ ಸರ್ಕಾರದ ಆತುರ : ಕಾಂಗ್ರೆಸ್‌

ಬೆಂಗಳೂರು:

    ಡಬಲ್‌ ಇಂಜಿನ್‌ ಸರ್ಕಾರಕ್ಕೆ ಫೂರ್ಣಗೊಳ್ಳದ ಕಾಮಗಾರಿಗಳನ್ನು ಉದ್ಗಾಟಿಸಲು ಏಕೀ ಆತುರ ಎಂದು ಕಾಂಗ್ರಸ್‌ ಪ್ರಶ್ನಿಸಿದೆ .ರಾಜ್ಯದ ಪ್ರತಿಷ್ಠಿತ ಹೆದ್ದಾರಿಯಾದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ರಾಷ್ಟ್ರಕ್ಕೆ ಸಮರ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿರುವಾಗ  ಈ ಆರೋಪ ಕೇಳಿ ಬಂದಿದೆ.

    ಪೂರ್ಣಗೊಳ್ಳದ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಯು ಹತಾಶೆ, ಪ್ರಯಾಣಿಕರ ಜೀವಕ್ಕೆ ಅಪಾಯ, ಟೋಲ್ ವಸೂಲಿಯಿಂದ ಲಾಭ, ದೋಷಪೂರಿತ ರಸ್ತೆ ವಿನ್ಯಾಸ, ನೀರಿನ ಹರಿವಿನ ನೈಸರ್ಗಿಕ ತಡೆ, ಪ್ರವಾಹ ನಿಯಂತ್ರಣ ಕ್ರಮಗಳ ಅನುಪಸ್ಥಿತಿ ಮತ್ತು ತಮ್ಮ ಸ್ವಂತ ಭೂಮಿಗೆ ಪ್ರವೇಶಿಸಲಾಗದ ವಿಷಯದಲ್ಲಿ ರೈತರಿಗೆ ಭಾರಿ ಅನ್ಯಾಯ ಸೇರಿದಂತೆ ಹಲವು ಪ್ರಶ್ನೆಗಳಿಗೆ ಮೋದಿ ಮತ್ತು ರಾಜ್ಯ ಸರ್ಕಾರ ಉತ್ತರಿಸಬೇಕಿದೆ ಎಂದು ಎಐಸಿಸಿ ಕರ್ನಾಟಕ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.

    ಅರೆಬೆಂದ, ಛಿದ್ರವಾಗಿರುವ, ತೇಪೆಯಾಗಿರುವ ಮತ್ತು ಪೂರ್ಣಗೊಳ್ಳಲು ಬಹಳ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಿ ಏಕೆ ಉದ್ಘಾಟಿಸುತ್ತಿದ್ದಾರೆ. 118 ಕಿ.ಮೀ ಉದ್ದದ ಹೆದ್ದಾರಿಯ ಎರಡೂ ಬದಿಯ ಸರ್ವೀಸ್ ರಸ್ತೆಗಳು ಪೂರ್ಣಗೊಂಡಿಲ್ಲ. ಇಂಡಿಯನ್ ರೋಡ್ ಕಾಂಗ್ರೆಸ್ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಎಕ್ಸ್‌ಪ್ರೆಸ್‌ವೇ ನಿರ್ಮಿಸಿಲ್ಲ ಎಂದು ಅವರು ಆರೋಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap