ಹಾಗಲವಾಡಿ ಕೋವಿಡ್ ಸೆಂಟರ್‍ನಲ್ಲಿ ಹಾಲು-ಹಣ್ಣು ವಿತರಣೆ

ಎಂ ಎನ್ ಕೋಟೆ : 

      ಕೋವಿಡ್ ಸೋಂಕು ದೃಢಪಟ್ಟಿರುವ ರೋಗಿಗಳಿಗೆ ಟೀ, ಹಾಲು, ಹಣ್ಣು ಹಾಗೂ ಲಘು ಉಪಾಹಾರ ನೀಡಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎನ್.ಸಿ. ಪ್ರಕಾಶ್ ತಿಳಿಸಿದರು.

      ಅವರು ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಕೋವಿಡ್ ಸೆಂಟರ್‍ಗಳಿಗೆ ಭಾನುವಾರ ಭೇಟಿ ನೀಡಿ, ರೋಗಿಗಳಿಗೆ ಚಹಾ, ಹಾಲು, ಹಣ್ಣು ವಿತರಿಸಿ ಮಾತನಾಡಿದರು. ತಾಲ್ಲೂಕಿನ ಎಲ್ಲ ಕೋವಿಡ್ ಸೆಂಟರ್‍ಗಳಿಗೆ ಪ್ರತಿ ದಿನ ರೋಗಿಗಳಿಗೆ ಚಹಾ, ಹಾಲು, ಲಘು ಉಪಾಹಾರ ವಿತರಿಸಲಾಗುತ್ತಿದೆ. ರೋಗಿಗಳು ಭಯ ಪಡುವ ಅಗತ್ಯವಿಲ್ಲ. ಸಕಾಲಕ್ಕೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತದೆ. ರೋಗಿಗಳು ಧೈರ್ಯದಿಂದ ಚಿಕಿತ್ಸೆ ಪಡೆಯಿರಿ. ಕೋವಿಡ್ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಜಾಗೃತಿ ಇರಲಿ. ಎಲ್ಲರೂ ಸಹ ಆರೋಗ್ಯವಾಗಿ ಇದ್ದು, ಭೇಗ ಗುಣಮುಖರಾಗಿ ಬನ್ನಿ ಎಂದು ರೋಗಿಗಳಿಗೆ ತಿಳಿಸಿದರು. ಶೀಘ್ರದಲ್ಲಿ ತಾಲ್ಲೂಕಿನಲ್ಲಿ ಐದು ಸಾವಿರ ಮಾಸ್ಕ್ ವಿತರಿಸಲಾಗುತ್ತದೆ. ಸಾರ್ವಜನಿಕರು ಸುಖಾಸುಮ್ಮನೆ ಮನೆಯಿಂದ ಹೊರಬರಬೇಡಿ. ಕೊರೋನಾ ಬಗ್ಗೆ ಜಾಗೃತಿ ಇರಲಿ, ಗ್ರಾಮೀಣ ಭಾಗದ ರೈತರು ವ್ಯಕ್ತಿಗತ ಅಂತರ ಕಾಪಾಡಿಕೊಂಡು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಅ.ನ.ಲಿಂಗಪ್ಪ, ಬಿಜೆಪಿ ಹಿಂದುಳಿದ ವರ್ಗದ ತಾಲ್ಲೂಕು ಅಧ್ಯಕ್ಷ ಎಂ ಎನ್ ಭೀಮಶೆಟ್ಟಿ, ಮುಖಂಡ ಚಂದ್ರಮೌಳಿ, ಲೋಹಿತ್ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap