ಸಿಪಿ ಯೋಗೇಶ್ವರ್​​ ಸೈನಿಕ ಅಲ್ಲ ಫ್ರಾಡ್: ಎಚ್. ವಿಶ್ವನಾಥ್

ಮೈಸೂರು: 

    ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಯೋಗೇಶ್ವರ್ ಒಬ್ಬ ಫ್ರಾಡ್. ಅವನನ್ನು ಸೈನಿಕ ಎನ್ನಬಾರದು, ಸೈನಿಕ ಎನ್ನುವ ಮೂಲಕ ಸೈನಿಕರಿಗೆ ಅಪಮಾನ ಮಾಡಬಾರದು ಎಂದು ಏಕ ವಚನದ ಮೂಲಕ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬುಧವಾರ ವಾಗ್ದಾಳಿ ನಡೆಸಿದ್ದಾರೆ.

   ಸಿ.ಪಿ. ಯೋಗೇಶ್ವರ್ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಅತ್ತ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ‘ಸೈನಿಕ ಕುಲಕ್ಕೆ ಯೋಗೇಶ್ವರ್ ಅಪಮಾನ, ಅವನನ್ನು ಸೈನಿಕ ಅಂತ ಕರೆಯಬಾರದು’ ಕಾಂಗ್ರೆಸ್​ಗೆ ಯೋಗೇಶ್ವರ್ ಅನಿವಾರ್ಯನಾ? ಎಂದು ಪ್ರಶ್ನಿಸಿದರು.

   ಈಗಾಗಲೇ ಮುಡಾ, ವಾಲ್ಮೀಕಿ ಫ್ರಾಡ್ ಜೊತೆಗೆ ಯೋಗೇಶ್ವರ್ ಎಂಬ ಮೂರನೇ ಫ್ರಾಡ್ ಸೇರಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಮೂರು ಕ್ಷೇತ್ರಗಳ ಉಪಚುನಾವಣೆಯಿಂದ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ ಎಂದರು. 

Recent Articles

spot_img

Related Stories

Share via
Copy link
Powered by Social Snap