ಯಮಕನಮರಡಿ:
ಹುಕ್ಕೇರಿ ತಾಲೂಕಿನ ಬಿದ್ರೆವಾಡಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಆಕಸ್ಮಿಕವಾಗಿ ಬೆಂಕಿಬಿದ್ದು ಸೋಯಾಬಿನ್ ಬಣವೆ ಸಂಪೂರ್ಣವಾಗಿ ಭಸ್ಮವಾಗಿ ಸಾವಿರಾರು ರೂಪಾಯಿ. ನಷ್ಟವಾಗಿರುವ ಘಟನೆ ಬುಧವಾರ ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ನಡೆದಿದೆ.
ಬಿದ್ರೆವಾಡಿ ಗ್ರಾಮದ ರೈತ ಜಕ್ಕಪ್ಪ ಸಿದ್ದಪ್ಪ ಪಾಟೀಲ ತಮ್ಮ ಜಮೀನಿನಲ್ಲಿ ಬೆಳೆದ ಸೋಯಾಬಿನ್ ಬೆಳೆಯನ್ನು ಕಿತ್ತು ಒಕ್ಕಲು ಮಾಡುವ ಗೋಸ್ಕರ ತಮ್ಮ ಜಮೀನಿನಲ್ಲಿ ಬನವೆ ಹಾಕಿ ಇಟ್ಟಿದ್ದೆವು ಆದರೆ ಆಕಸ್ಮಿಕವಾಗಿ ಸೋಯಾಬಿನ್ ಬಣವೆ ಬೆಂಕಿ ಬಿದ್ದು ಸುತ್ತು ನನಗೆ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.
ಸುದ್ದಿ ತಿಳಿದ ತಕ್ಷಣ ಗ್ರಾಮದ ಯುವಕರು ಗ್ರಾಮಸ್ಥರು ಬೆಂಕಿನೊಂದಿಸಲು ಪ್ರಯತ್ನ ಪಟ್ಟರು ಸಾಧ್ಯವಾಗಿಲ್ಲ ಎಂದು ರೈತ ಜಕ್ಕಪ್ಪ ಪಾಟೀಲ್ ಮಾಹಿತಿ ನೀಡಿದರು.








