ಸ್ನಾನಕ್ಕೆಂದು ಹೋದವನು ಹೋಗಿದ್ದಾದರೂ ಎಲ್ಲಿಗೆ ಗೊತ್ತಾ…..?

ಕೊರಟಗೆರೆ:-

  ಬೆಂಗಳೂರು ಮೂಲದ 5-6 ಜನ ಮೋಜು ಮಸ್ತಿ ಗಾಗಿ ಫಾರಂ ಹೌಸ್ ಗೆ ಬಂದು ನೈಟ್ ಪಾರ್ಟಿ ಮುಗಿಸಿ ಮಲಗಿದ್ದವರು ಬೆಳಿಗ್ಗೆ ಸ್ನೇಹಿತನೂರ್ವ ಸ್ನಾನದ ಮನೆಗೆ ಹೋದವನು ಕುಸಿದು ಬಿದ್ದು ಸ್ನಾನ ಮನೆಯಲ್ಲಿಯೇ ಮೃತಪಟ್ಟಿರುವ ಘಟನೆಯೊಂದು ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

   ಕೊರಟಗೆರೆ ತಾಲೂಕಿನ ಬಿ ಡಿ ಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರೆ ಚಿಕ್ಕನಹಳ್ಳಿ ಬಳಿಯ ರವಿ ಕುಮಾರ್ ಫಾರಂ ಹೌಸ್ ನಲ್ಲಿ ಈ ಘಟನೆ ಜರಿಗಿದ್ದು, ಬೆಂಗಳೂರು ಮೂಲದ ವಿಶ್ವನಾಥ್ (55 ವರ್ಷ) ಸಾವಿಗಿಡಾದ ದುರ್ದೈವಿಯಾಗಿದ್ದಾನೆ ಎನ್ನಲಾಗಿದೆ.

   ಮೃತ ವಿಶ್ವನಾಥ್ ಸೇರಿದಂತೆ ನಾಲ್ಕೈದು ಜನ ಸ್ನೇಹಿತರು ರಾತ್ರಿ ಇದೆ ಫಾರ್ಮ್ ಹೌಸ್ ಅಲ್ಲಿ ಪಾರ್ಟಿ ಮುಗಿಸಿಕೊಂಡು ಅಲ್ಲೇ ಮಲಗಿದ್ದಾರೆ ಏನಾಗಿದೆ, ಬೆಳಿಗ್ಗೆ ಬೆಂಗಳೂರಿಗೆ ಹೊರಡುವ ಸಂದರ್ಭದಲ್ಲಿ ಸ್ನಾನಕ್ಕೆ ಹೋದ ವಿಶ್ವನಾಥ್ ಎಷ್ಟು ಹೊತ್ತಾದರೂ ಬಾರದ ಕಾರಣ ಸ್ನೇಹಿತರು ಸ್ಥಾನದ ಗೃಹ ನೋಡಿದಾಗ ಕುಸಿದು ಬಿದ್ದ ಸ್ಥಿತಿಯಲ್ಲಿ ಕಂಡು ಬಂದು, ಸ್ನೇಹಿತರು ಗಾಬರಿಗೊಂಡು ಹಲವು ರೀತಿಯಲ್ಲಿ ಪ್ರಯತ್ನಿಸಿದ್ದರಾದರೂ ವಿಶ್ವನಾಥ್ ಅಂತಿಮವಾಗಿ ಮೃತಪಟ್ಟಿರುವ ವಿಚಾರ ಕಂಡು ಬಂದಿದೆ ಏನಾಗಿದೆ.

   ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ಅನಿಲ್ ಹಾಗೂ ಪಿಎಸ್ಐ ಬಸವರಾಜು ಭೇಟಿ ನೀಡಿ ಕೇಸು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Recent Articles

spot_img

Related Stories

Share via
Copy link