ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ: ಸ್ವಾಮಿಜಿಗಳ ವಿರುದ್ಧ ಎಫ್ಐಆರ್ ರದ್ದತಿಗೆ ಬಿಜೆಪಿ ಜೆಡಿಎಸ್ ಆಗ್ರಹ

ತುಮಕೂರು:

    ಹೇಮಾವತಿ ಲಿಂಕ್ ಕೆನಾಲ್ ಎಕ್ಸ್ ಪ್ರೆಸ್ ವಿರೋಧಿ ಹೋರಾಟ ದಲ್ಲಿ ರೈತರು, ಸ್ವಾಮೀಜಿ ಗಳ ವಿರುದ್ಧ ಹಾಕಿರುವ ಎಫ್ ಐಆರ್ ರದ್ದು ಗೊಳಿಸುವಂತೆ ಒತ್ತಾಯಿಸಿ ಬಿಜೆಪಿ ಜೆಡಿಎಸ್ ಮುಖಂಡರು ಎಸ್ಪಿ ಕಚೇರಿ ಬಳಿ ಪ್ರತಿಭಟನೆ ಗೆ ಮುಂದಾಗಿದ್ದಾರೆ.

     ಶಾಸಕರಾದ ಎಂ. ಟಿ. ಕೃಷ್ಣಪ್ಪ ಬಿ. ಸುರೇಶ್ ಗೌಡ ಮಾಜಿ ಸಚಿ ವ ಎಸ್ ಶಿವಣ್ಣ ಜಿಲ್ಲಾಧ್ಯಕ್ಷ ಹೆಬ್ಬಾಕರವಿ, ಕೆ. ಟಿ. ಶಾಂತಕುಮಾರ್, ಕನ್ನಡ ಸೇನೆ ಮುಖಂಡ ಧನಿಯಕುಮಾರ್ ನೇತೃತ್ವದಲ್ಲಿ ಐಜಿಪಿ ಲಾಭೂರಾಂ, ಎಸ್ಪಿ ಕೆ. ವಿ. ಅಶೋಕ್ ಅವರನ್ನು ಭೇಟಿಯಾದ ಮುಖಂಡರು ನಮ್ಮ ಮೇಲೆ ಕೇಸ್ ಹಾಕಿ. ಆದರೆ ಅಮಾಯಕ ರೈತರು, ತಪ್ಪೆಸಗದ ಸ್ವಾಮೀಜಿ ಗಳ ಮೇಲೆ ಕೇಸ್ ಹಾಕಿರುವುದನ್ನು ಹಿಂಪಡೆಯಬೇಕು. ಅಲ್ಲಿ ಯವರೆಗೆ ಧರಣಿ ಕೈ ಬಿಡುವುದಿಲ್ಲ. ನೀವು ಗೃಹ ಸಚಿವರು, ಸರ್ಕಾರದ ಜೊತೆ ಮಾತಾಡಿ ಕೇಸ್ ವಾಪಸ್ ಪಡೆಸಿ ಎಂದು ಐಜಿಪಿ ಅವರನ್ನು ಆಗ್ರಹಿಸಿದರು. 

ಬಿಗಿ ಬಂದೋಬಸ್ತ್: ಎಸ್ಪಿ ಕಚೇರಿ ಬಳಿ ಪ್ರತಿ ಬಟನೆ ಮಾಡು ತ್ತಿದ್ದವರನ್ನು ಹತ್ತಿಕ್ಕಲು ನಗರದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಬಟವಾಡಿವರೆಗೆ ರಸ್ತೆ ಸಂಚಾರ ನಿರ್ಬಂಧಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸಂಚಾರ ನಿರ್ಬಂಧ ದ ಹಿನ್ನೆಲೆಯಲ್ಲಿ ಹನುಮಂಪುರ ಬೈಪಾಸ್ ಮಾರ್ಗವಾಗಿ ವಾಹನ ಡೈವರ್ಟ್ಲಮಾಡಿದ್ದು, ದಿಢೀರ್ ಸಂಚಾರ ಮಾರ್ಗ ಬದಲಾವಣೆ ಗೆ ಸಾರ್ವಜನಿಕ ರು ಅಸಮಾಧಾನ ವ್ಯಕ್ತಪಡಿಸಿದ ರು.

Recent Articles

spot_img

Related Stories

Share via
Copy link