ಅಡುಗೆ ಅನಿಲ ಸೋರಿಕೆ : ಮನೆ ಭಸ್ಮ

ಹುಳಿಯಾರು

    ಅಡುಗೆ ಅನಿಲ ಸೋರಿಕೆಯಿಂದ ಮನೆ ಸಂಪೂರ್ಣ ಭಸ್ಮವಾಗಿ 25 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದ ಘಟನೆ ಹುಳಿಯಾರು ಹೋಬಳಿಯ ಕುಶಾಲಪುರದಲ್ಲಿ ನಡೆದಿದೆ.

   ಕುಶಾಲಪುರದ ಮಧುಸೂದನ್ ಅವರ ಮನೆ ಡುಗೆ ಅನಿಲ ದುರಂತದಿಂದ ಭಸ್ಮವಾಗಿದ್ದು ಇವರು ಕುಟುಂಬ ಸಮೇತ ಪಕ್ಕದ ಊರಿನ ದೇವಾಲಯಕ್ಕೆ ಪೂಜೆಗೆ ತೆರಳಿದ್ದ ಸಂದರ್ಭದಲ್ಲಿ ಈ ಅವಘಡ ಜರುಗಿದೆ. ಮನೆಯಲ್ಲಿ ತೆಂಗಿನ ಕೊಬ್ಬರಿ ಹಾಗೂ ಊಟಕ್ಕೆ ಬಳಸುವ ಮುತ್ತುಗದ ಎಲೆಗಳು ಇದ್ದ ಕಾರಣದಿಂದ ಬೆಂಕಿ ಮನೆಯನ್ನು ಸಂಪೂರ್ಣ ವ್ಯಾಪಿಸಿದೆ. ಅಗ್ನಿಶಾಮಕ ತಂಡದವರು ಬರುವಷ್ಟರಲ್ಲಿ ಮನೆ ಸಂಪೂರ್ಣ ಸುಟ್ಟು ಹೋಗಿತ್ತು.

    ಬೆಂಕಿಯ ಕೆನ್ನಾಲಿಗೆಗೆ ಮನೆಯ ಗೃಹೋಪಯೋಗಿ ವಸ್ತುಗಳು, ಪೀಠೋಪಕರಣಗಳು, ದವಸ-ಧಾನ್ಯ, ಊಟಕ್ಕೆ ಬಳಸುವ ಮುತ್ತಗದ ಎಲೆ, ನಗದು, ಒಡವೆ ಸೇರಿದಂತೆ, ಕಟ್ಟಡ, ಬಾಗಿಲು, ಕಿಟಕಿ, ಮೇಲ್ಛಾವಣಿ ಸೇರಿದಂತೆ 25 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಎಸ್‍ಐ ಆನಂದಪ್ಪ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ವಿವರ ಪಡೆದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap