ಹುಬ್ಬಳ್ಳಿ: ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ

ಹುಬ್ಬಳ್ಳಿ:

 ಸಂಶಿ-ಯಲವಿಗಿ ರೈಲು ಮಾರ್ಗದಲ್ಲಿ ಕಾಮಗಾರಿ ಫೆ.18ರಿಂದ 27ರವರೆಗೆ ನಡೆಯಲಿದ್ದು, ಕೆಲವು ರೈಲುಗಳ ಸಂಚಾರ ಪೂರ್ಣ ಹಾಗೂ ಭಾಗಶಃ ರದ್ದು ಪಡಿಸಲಾಗಿದೆ.

ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣದಿಂದ ಹೊರಡುವ ಸಿದ್ಧಾರೂಢ ಸ್ವಾಮೀಜಿ- ಚಿತ್ರದುರ್ಗ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲು (07347), ಚಿತ್ರದುರ್ಗ- ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ(07348) ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.

ಅರಸೀಕೆರೆ ನಿಲ್ದಾಣದಿಂದ ಹೊರಡುವ ಅರಸೀಕೆರೆ-ಸಿದ್ಧಾರೂಢ ಸ್ವಾಮೀಜಿ ವಿಶೇಷ ಪ್ಯಾಸೆಂಜರ್ ರೈಲು (07367); ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ಸಿದ್ಧಾರೂಢ ಸ್ವಾಮೀಜಿ- ಅರಸೀಕೆರೆ (07368) ರೈಲಿನ ಸಂಚಾರವನ್ನು ಫೆ.18 ರಿಂದ 25ರವರೆಗೆ ರದ್ದುಗೊಳಿಸಲಾಗಿದೆ.

ಕೆ.ಎಸ್.ಆರ್. ಬೆಂಗಳೂರು-ಸಿದ್ಧಾರೂಢ ಸ್ವಾಮೀಜಿ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ (12079) ಹಾಗೂ ಅದೇ ರೀತಿ ಹುಬ್ಬಳ್ಳಿ-ಬೆಂಗಳೂರು (12080) ರೈಲಿನ ಹಾವೇರಿ-ಹುಬ್ಬಳ್ಳಿ ನಿಲ್ದಾಣಗಳ ನಡುವಿನ ಸಂಚಾರ ರದ್ದು ಮಾಡಲಾಗಿದೆ. ಹಾವೇರಿಯಿಂದ ಹೊರಡಲಿದೆ.

ಅರಸೀಕೆರೆ- ಹುಬ್ಬಳ್ಳಿ ವಿಶೇಷ ಪ್ಯಾಸೆಂಜರ್ ರೈಲು ರಾಣೆಬೆನ್ನೂರು (07367) ರೈಲು ಹಾಗೂ ಹುಬ್ಬಳ್ಳಿ-ಅರಸೀಕೆರೆ (07368) ರೈಲು ರಾಣೆಬೆನ್ನೂರು-ಹುಬ್ಬಳ್ಳಿ ನಡುವೆ ಫೆ.19 ರಿಂದ 24, ಫೆ.26, 27 ರಂದು ಸಂಚಾರ ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಕೊಚ್ಚುವೆಲಿ-ಹುಬ್ಬಳ್ಳಿ ಸಿದ್ಧಾರೂಢ ಸ್ವಾಮೀಜಿ ಎಕ್ಸ್‌ಪ್ರೆಸ್‌ ರೈಲು (12778) ಫೆ.17 ರಿಂದ 24ರವರೆಗೆ ಹಾವೇರಿ-ಹುಬ್ಬಳ್ಳಿ ನಡುವೆ ಸಂಚರಿಸುವುದಿಲ್ಲ.

ಸಿದ್ಧಾರೂಢ ಸ್ವಾಮೀಜಿ-ಯಶವಂತಪುರ ಎಕ್ಸ್‌ಪ್ರೆಸ್‌ ರೈಲು (16544) ಹಾವೇರಿ, ಹರಿಹರದ ಬದಲಾಗಿದೆ ಹುಬ್ಬಳ್ಳಿ, ಹೊಸಪೇಟೆ, ಕೊಟ್ಟೂರು, ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap