ಹುಳಿಯಾರು : ಕಾರೆಹಳ್ಳಿ ದೇವಸ್ಥಾನದಲ್ಲಿ ಕಳವು

  ಹುಳಿಯಾರು:

     ಹುಳಿಯಾರು ಹೋಬಳಿಯ ಇತಿಹಾಸ ಪ್ರಸಿದ್ಧ ಕಾರೇಹಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ರಾತ್ರಿ ಕಳ್ಳತನ ನಡೆದಿದೆ.

     ದೇವಾಲಯದ ಬಾಗಿಲಿನ ಬೀಗ ಹೊಡೆದ ಕಳ್ಳರು ದೇವಸ್ಥಾನದಲ್ಲಿದ್ದ 2 ಹುಂಡಿಗಳನ್ನು ಕದ್ದೊಯ್ದು ದೇವಸ್ಥಾನದ 100 ಮೀಟರ್ ದೂರದಲ್ಲಿ ಹುಂಡಿ ಹೊಡೆದು ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಹುಂಡಿಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

ಅಲ್ಲದೆ ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮರಗಳನ್ನೂ ಸಹ ಕಳ್ಳರು ಕದ್ದೊಯ್ದಿದ್ದಾರೆ. ಕಳೆದ ವರ್ಷದ ಜಾತ್ರೆ ಸಂದರ್ಭದಲ್ಲಿ ಹುಂಡಿ ಹೊಡೆದಿದ್ದು ಮುಂದಿನ ತಿಂಗಳ ಜಾತ್ರೆ ಸಂದರ್ಭದಲ್ಲಿ ಹುಂಡಿ ಹೊಡೆಯಲು ನಿರ್ಧರಿಸಲಾಗಿತ್ತು. ಹಾಗಾಗಿ ಹುಂಡಿ ತುಂಬ 1 ವರ್ಷದ ಹಣವಿತ್ತು ಎನ್ನಲಾಗಿದೆ.

ಹುಳಿಯಾರು ಪೊಲೀಸ್ ಠಾಣೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Recent Articles

spot_img

Related Stories

Share via
Copy link