ಹುಳಿಯಾರು :
ಮುಷ್ಕರದ ಕಾರಣ ಕೆ.ಎಸ್.ಆರ್.ಟಿ.ಸಿ ಬಸ್ಗಳು ಇಲ್ಲದಿರುವುದರಿಂದ ಯುಗಾದಿ ಹಬ್ಬಕ್ಕೆ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ತೀವ್ರವಾಗಿ ಸಮಸ್ಯೆ ಆಯಿತು ಅಲ್ಲದೆ ಹೊಸದುರ್ಗ ಕಡೆಯ ಖಾಸಗಿ ಬಸ್ಗಳು ಟಾಪ್ ಲೋಡ್ ತುಂಬಿಕೊಂಡು ಸಂಚರಿಸಿದವು.
ಹೊಸದುರ್ಗ, ಬೆಲಗೂರು, ಶ್ರೀರಾಂಪುರ, ಹುಳಿಯಾರು ಸೇರಿದಂತೆ ವಿವಿದ ಹಳ್ಳಿಗಳಿಂದ ಉದ್ಯೋಗ ಅರಸಿ ಹೋಗಿರುವವರು ಬೆಂಗಳೂರಿನಲ್ಲಿ ಅಪಾರ ಸಂಖ್ಯೆಯಲ್ಲಿ ನೆಲೆಸಿದ್ದಾರೆ ಹಬ್ಬಹರಿದಿನವಲ್ಲದೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಹೋಗಿ ಬರುತ್ತಿದ್ದರು. ಹಾಗಾಗಿಯೆ ಹೊಸದುರ್ಗದಿಂದ ಹುಳಿಯಾರು ಮಾರ್ಗವಾಗಿ ನಿತ್ಯ ನೂರಾರು ಸರ್ಕಾರಿ ಬಸ್ ಸೇವೆ ಕಲ್ಪಿಸಲಾಗಿತ್ತು ಆದರೆ ಕಳೆದ ವಾರದಿಂದ ಸರ್ಕಾರಿ ಬಸ್ ನೌಕರರ ಮುಷ್ಕರದಿಂದ ಸರ್ಕಾರಿ ಬಸ್ ಬಾರದೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಜನರ ಪರದಾಟ ಸಾಮಾನ್ಯವಾಗಿತ್ತು.
ಪ್ರಮುಖ ಹಬ್ಬಗಳಲ್ಲಿ ಒಂದಾದ ಯುಗಾದಿ ಹಬ್ಬಕ್ಕೆ ತಮ್ಮ ಊರುಗಳಿಗೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿಯೆ ಖಾಸಗಿ ಬಸ್ ಅವಲಂಬನೆ ಅನಿವಾರ್ಯವಾಗಿತ್ತು ಹಾಗಾಗಿಯೆ ಬೆಂಗಳೂರಿನಿಂದಲೆ ಖಾಸಗಿ ಬಸ್ಗಳು ಟಾಪ್ ಲೋಡ್ ಆಗಿ ಬರುತ್ತಿದ್ದವು. ಕೆಲ ಊರುಗಳಿಗೆ ಖಾಸಗಿ ಬಸ್ ವ್ಯವಸ್ಥೆಯೂ ಇಲ್ಲದಿದ್ದರಿಂದ ಹಬ್ಬದ ಸಾಮಗ್ರಿಗಳ ಖರೀದಿಗೆ ಪಟ್ಟಣಕ್ಕೆ ಬರಲು ಹಳ್ಳಿಯ ಜನರು ಬೈಕ್ಗಳು ಆಟೊಗಳನ್ನು ಅವಲಂಬಿಸಿದ್ದರು ಪರಿಣಾಮ ಹುಳಿಯಾರು ಪಟ್ಟಣದ ಪ್ರಮುಖ ಬೀದಿಗಳಾದ ರಾಜ್ಕುಮಾರ್ ರಸ್ತೆ, ಬ್ರಾಹ್ಮಣರ ಬೀದಿ, ರಾಮಗೋಪಾಲ್ ಸರ್ಕಲ್, ಬಸ್ ನಿಲ್ದಾಣಗಳಲ್ಲಿ ಟ್ರಾಫಿಕ್ ಸಮಸ್ಯೆ ಕಂಡು ಬಂತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
