ಹುಳಿಯಾರು :
ಹುಳಿಯಾರು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಂಜುನಾಥ್ ಹಾಗೂ ಎಂಜಿನಿಯರ್ ಮಂಜುನಾಥ್ ಅವರ ನೇತೃತ್ವದ ತಂಡ ಪಟ್ಟಣದ ವಿವಿಧೆಡೆ ಪಾದಯಾತ್ರೆ ನಡೆಸಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿತು.
ಪಟ್ಟಣದ ಹೊಸ ಸಂತೆ ಮೈದಾನ, ಬಸ್ ನಿಲ್ದಾಣ ರಸ್ತೆ, ರಾಜಕುಮಾರ್ ರಸ್ತೆ, ಪೊಲೀಸ್ ಸ್ಟೇಷನ್ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಬಟ್ಟೆ ಅಂಗಡಿ, ಬಂಗಾರದ ಅಂಗಡಿ, ಕಿರಾಣಿ ಅಂಗಡಿ, ಸ್ಟೀಲ್ ಅಂಗಡಿ, ಜ್ಯುವೆಲರಿ ಶಾಪ್, ತರಕಾರಿ ಅಂಗಡಿ ಜನರಲ್ ಸ್ಟೋರ್ಗಳಲ್ಲಿ ಪರಿಶೀಲಿಸಿದ ಅಧಿಕಾರಿಗಳು ಜನರಿಗಷ್ಟೇ ಅಲ್ಲದೆ, ಅಂಗಡಿಗಳ ಮಾಲೀಕರಿಗೂ ದಂಡ ವಿಧಿಸಿದರು.
ಈ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಮಂಜುನಾಥ್ ಮಾತನಾಡಿ ಅಂಗಡಿಗಳ ಮಾಲೀಕರು, ತರಕಾರಿ ವ್ಯಾಪಾರಸ್ಥರು ಮಾಸ್ಕ್ ಧರಿಸಿ ಅಂತರ ಕಾಯ್ದುಕೊಂಡು ವಹಿವಾಟು ನಡೆಸಬೇಕು ಇಲ್ಲದಿದ್ದರೆ ಅಂಗಡಿಗಳ ಪರವಾನಗಿ ರದ್ದು ಪಡಿಸಲಾಗುವುದು ಎಂದು ಎಚ್ಚರಿಸಿದರಲ್ಲಿ ಅಂಗಡಿಗಳ ಮುಂದೆ ಅಂತರ್ ಮಾರ್ಕ್ ಹಾಕುವಂತೆಯೂ, ಸ್ಯಾನಿಟೈಸರ್ ಇಡುವಂತೆಯೂ ಸೂಚನೆ ನೀಡಿದರು.
ಎಂಜಿನಿಯರ್ ಮಂಜುನಾಥ್ ಅವರು ಸಭೆ, ಸಮಾರಂಭಗಳಿಗೆ ಅನಗತ್ಯವಾಗಿ ಹೋಗಬೇಡಿ ಸೋಂಕು ಹತೋಟಿಗೆ ಬರಲು ನಮ್ಮ ಶಿಸ್ತು ಬದ್ಧ ನಡವಳಿಕೆಯಿಂದ ಮಾತ್ರ ಸಾಧ್ಯ ಹಾಗಾಗಿ ಕೋವಿಡ್ ನಿಯಮಗಳನ್ನು ಕಟ್ಟು ನಿಟ್ಟಿನಿಂದ ಪಾಲಿಸಿ ಎಂದು ಸಾರ್ವಜನಿಕರಿಗೆ ತಿಳಿಸಿ ಪಾಲಿಸುವಂತೆ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
