ಪೀಡೆ ತೊಲಗಿದ್ದರಿಂದ ನನಗೆ ಸಂತೋಷವಾಗಿದೆ : ರಮೇಶ್‌ ಜಾರಕೀಹೋಳಿ

ಬೆಳಗಾವಿ:

    ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕಾಂಗ್ರೆಸ್   ಸೇರಿದ್ದಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ   ಖುಷ್ ಆಗಿದ್ದಾರೆ. ​ಮತ್ತೊಮ್ಮೆ ಆಪ್ತ ಮಹೇಶ್ ಕುಮಟಳ್ಳಿ   ಗೆಲ್ಲಿಸಲು ರಮೇಶ್ ಜಾರಕಿಹೊಳಿ ಪಣ ತೊಟ್ಟಿದ್ದಾರೆ. ಅಥಣಿ  ಕ್ಷೇತ್ರದ ಬಿಜೆಪಿಯ  ಪದಾಧಿಕಾರಿಗಳು ಹಾಗು ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ ಪೀಡೆ. ಪೀಡೆ ತೊಲಗಿ ಹೋಗಿದೆ. ಪೀಡೆ ತೊಲಗಿದ್ದರಿಂದ ನನಗೆ ಸಂತೋಷವಾಗಿದೆ ಎಂದು ಟಾಂಗ್ ನೀಡಿದರು.

    ಬಿದ್ದವರಿಗೆ ಪಕ್ಷ ಡಿಸಿಎಂ ಮಾಡಿತ್ತು. ಉದ್ದ ಅಂಗಿ ಹಾಕಿರುವನು ಹೊರಗೆ ಹೋಗಿದ್ದಾನೆ. ನನಗೆ ಇವತ್ತು ತುಂಬಾ ಸಂತೋಷವಾಗಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

    ನಾನು ಅಥಣಿಯಲ್ಲೆ ಇರುತ್ತೇನೆ. ಅಥಣಿ ಹಾಗೂ ಬೆಳಗಾವಿ ಗ್ರಾಮೀಣ   ಎರಡು ಕ್ಷೇತ್ರ ನಮ್ಮದೇ, ನಾವೆ ಗೆಲ್ಲಬೇಕು. ಲಕ್ಷ್ಮಣ್ ಸವದಿ ಸೋಲಬೇಕು. ಬಿಜೆಪಿ ವರಿಷ್ಠರು ನನ್ನ ಮೇಲೆ ತುಂಬಾ ವಿಶ್ವಾಸ ಇಟ್ಟಿದ್ದಾರೆ ಎಂದು ಸವದಿ ವಿರುದ್ದ ಹರಿಹಾಯ್ದರು.   

    ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಆಪ್ತ ನಾಗೇಶ್ ಮನ್ನೊಳ್ಳಕರ್ ​ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್   ಸೋಲಿಸಲು ಮರಾಠ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ