ಗ್ಯಾಸ್‌ ಸಿಲಿಂಡರ್‌ ಹೊಂದಿದ್ದೀರಾ : ಇಲ್ಲಿದೆ ಅತಿ ಮುಖ್ಯ ಅಪ್‌ ಡೇಟ್‌ ….!

ಬೆಂಗಳೂರು:- 

   ಗ್ಯಾಸ್‌ ಸಿಲಿಂಡರ್‌ ಹೊಂದಿರುವ ಕುಟುಂಬಗಳಿಗೆ ಶಾಕ್ ಎದುರಾಗಿದ್ದು, ಇನ್ಮುಂದೆ ಕೆಲವು ನಿಯಮ ಕಡ್ಡಾಯವಾಗಿದೆ.ಗ್ಯಾಸ್ ಏಜೆನ್ಸಿಗಳಿಗೂ ಇ-ಕೆವೈಸಿ ಮಾಡಲು ಯಂತ್ರಗಳನ್ನು ನೀಡಲಾಗಿದೆ.

   ಇದರಲ್ಲಿ ಯಾರ ಹೆಸರಿನಲ್ಲಿ ಗ್ಯಾಸ್ ಸಂಪರ್ಕವಿದೆಯೋ ಅವರೇ ಕೆವೈಸಿ ಮಾಡಿಕೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ನಿಯಮದ ಪ್ರಕಾರ ಇ-ಕೆವೈಸಿ ಮಾಡದವರಿಗೆ ಕಡಿಮೆ ಸಿಲಿಂಡರ್ ನೀಡಲಾಗುವುದು ಅಥವಾ ಸಿಲಿಂಡರ್ ಸಬ್ಸಿಡಿ ಸಿಗುವುದಿಲ್ಲ. ಹಾಗಾಗಿಯೇ ಇಂತಹ ಸಮಸ್ಯೆಯನ್ನು ತಪ್ಪಿಸಲು.. ತಕ್ಷಣವೇ KYC ನ್ನು ಪೂರ್ಣಗೊಳಿಸಿ.

    ಕೇಂದ್ರದ ಹೊಸ ನಿಯಮದಿಂದಾಗಿ ನಕಲಿ ದಾಖಲೆಗಳನ್ನು ನೀಡಿ ಸಿಲಿಂಡರ್ ಪಡೆದುಕೊಳ್ಳುತ್ತಿದ್ದವರ ಸಿಲಿಂಡರ್ ಬ್ಲಾಕ್ ಮಾಡಲಿದ್ದಾರೆ. ಆನ್‌ಲೈನ್ ಬುಕಿಂಗ್ ಇರುವುದಿಲ್ಲ. ಹೊಸ ನಿಯಮಗಳ ಪ್ರಕಾರ ಯಾವುದೇ ಮನೆಯಲ್ಲಿ ಒಂದೇ ಹೆಸರಿನ ಎರಡು ಮತ್ತು ಅದಕ್ಕಿಂತ ಹೆಚ್ಚು ಸಿಲಿಂಡರ್ ಗಳಿದ್ದರೆ ಎರಡನೇ ಸಿಲಿಂಡರ್ ಸ್ವಯಂಚಾಲಿತವಾಗಿ ಬ್ಲಾಕ್ ಆಗುವುದು ಸ್ಪಷ್ಟ. ಅಂದರೆ ಒಂದು ಮನೆಯಲ್ಲಿ ಒಂದೇ ಹೆಸರಿನ ಸಿಲಿಂಡರ್ ಮಾತ್ರ ಇರುತ್ತದೆ.

    ಎಲ್ಲಾ ಅಕ್ರಮ ಸಂಪರ್ಕಗಳನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಬಯಸಿದೆ. ಅಂತಹವರನ್ನು ಗುರುತಿಸಲು ಕೇಂದ್ರ ಸರ್ಕಾರವು ಈ ನಿಬಂಧನೆಯನ್ನು ಜಾರಿ ಮಾಡಿದೆ. ಇದಲ್ಲದೇ 1 ಮನೆಯಲ್ಲಿ ಏರಡಕ್ಕಿಂತ ಹೆಚ್ಚಿನ ಸಿಲಿಂಡರ್ ಇಟ್ಟುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಂತಹದೇ ಸಂಪರ್ಕಗಳನ್ನು ಪರಿಶೀಲಿಸಲು ಗ್ಯಾಸ್ ಗಳ ಏಜೆನ್ಸಿಗಳನ್ನು ಸಹ ಕೇಳಲಾಗಿದೆ.

    ಉಜ್ವಲ ಯೋಜನೆ ಅಡಿ BPL ಸದಸ್ಯರ ಖಾತೆಗಳಲ್ಲಿ ರೂ.372 ಮತ್ತು ಇತರೆ ಸಂಪರ್ಕ ಹೊಂದಿರುವವರ ಖಾತೆಗಳಲ್ಲಿ ರೂ.47 ಸಬ್ಸಿಡಿಯಾಗಿ ದೊರೆಯಲಿದೆ. ನೀವು ಗ್ಯಾಸ್ ಹೊಂದಿದ್ದರೆ ನಿಮ್ಮ ಖಾತೆಯನ್ನು ಪರಿಶೀಲಿಸಿ. ಸಬ್ಸಿಡಿ ಸಂದರ್ಭದಲ್ಲಿ KYC ಅಗತ್ಯವಿಲ್ಲ. ಇಲ್ಲವಾದರೆ ಎರಡು ವಾರಗಳಲ್ಲಿ ಮಾಡಬೇಕಾಗುವುದು. ಉಜ್ವಲ ಯೋಜನೆ ಅಡಿ ಇರುವವರು ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಪರಿಶೀಲನೆಯನ್ನು ನಡೆಸಬೇಕು.

    ಇದಕ್ಕಾಗಿಯೇ ಗ್ಯಾಸ್ ಗ್ರಾಹಕರ ಸಂಖ್ಯೆ ಮತ್ತು ವಿಳಾಸ ಪುರಾವೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ರಾಜ್ಯ ಅಥವಾ ಸರ್ಕಾರಿ ಪ್ರಮಾಣಪತ್ರದಂತಹ ದಾಖಲೆಗಳು ಗುರುತಿನ ಪುರಾವೆಯಾಗಿ, ಫೋಟೊಕಾಪಿ ನೀಡುವ ಅಗತ್ಯವಿದೆ. ವಿವರಗಳಿಗಾಗಿ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗಳನ್ನು ಸಂಪರ್ಕಿಸಿ.

    ಸಿಲಿಂಡರ್ ಇರುವವರು ಗ್ಯಾಸ್ ಏಜೆನ್ಸಿಗೆ ತೆರಳಿ ಸಿಲಿಂಡರ್ ತೆಗೆದುಕೊಳ್ಳುವ ವ್ಯಕ್ತಿ ಇದ್ದಾರೆ ಎಂದು ಮಾಹಿತಿ ನೀಡಬೇಕು ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಕಳೆದ ವರ್ಷ ಆದೇಶ ಹೊರಡಿಸಿದ್ದು ಗೊತ್ತೇ ಇದೆ. ಈ ಮೊದಲು ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ, ಆದ್ರೆ ಈಗ ಮೇ 31 ರವರೆಗೆ ಸಮಯವನ್ನು ನೀಡಲಾಗಿದೆ.

    ಈ ಪರಿಶೀಲನೆಗಾಗಿ ಜನರು ತಮ್ಮ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಗ್ಯಾಸ್ ಏಜೆನ್ಸಿಗಳಿಗೂ ಇ-ಕೆವೈಸಿ ಮಾಡಲು ಯಂತ್ರಗಳನ್ನು ನೀಡಲಾಗಿದೆ. ಇದರಲ್ಲಿ ಯಾರ ಹೆಸರಿನಲ್ಲಿ ಗ್ಯಾಸ್ ಸಂಪರ್ಕವಿದೆಯೋ ಅವರೇ ಕೆವೈಸಿ ಮಾಡಿಕೊಳ್ಳಬೇಕಾಗುತ್ತದೆ

   ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ನಿಯಮದ ಪ್ರಕಾರ ಇ-ಕೆವೈಸಿ ಮಾಡದವರಿಗೆ ಕಡಿಮೆ ಸಿಲಿಂಡರ್ ನೀಡಲಾಗುವುದು ಅಥವಾ ಸಿಲಿಂಡರ್ ಸಬ್ಸಿಡಿ ಸಿಗುವುದಿಲ್ಲ. ಹಾಗಾಗಿಯೇ ಇಂತಹ ಸಮಸ್ಯೆಯನ್ನು ತಪ್ಪಿಸಲು.. ತಕ್ಷಣವೇ KYC ನ್ನು ಪೂರ್ಣಗೊಳಿಸಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap