ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಕಪ್ಪುಚುಕ್ಕೆ!

ತುಮಕೂರು:


ದೇಶಾದ್ಯಂತ 75ನೇ ಸ್ವಾತಂತ್ರ್ಯೋತ್ಸವ ಮೃತ ಮಹೋತ್ಸವದ ವರ್ಷಾಚರಣೆ ಮಾಡುತ್ತಿರುವ ವೇಳೆ ಇಳಿವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರರೇ ಮುಂದಾಗಿ ಸ್ವಾತಂತ್ರ್ಯ ಸೇನಾನಿಗಳ ಸ್ಮರಣಾರ್ಥ ಜಿಲ್ಲಾ ಕೇಂದ್ರದಲ್ಲಿ ನಿರ್ಮಿಸಿರುವ ವೀರಸೌಧ ಉಳಿಸುವಂತೆ ಅಂಗಲಾಚುತ್ತಿವ ಪರಿಸ್ಥಿತಿ ನಿರ್ಮಾಣವಾಗಿರುವುದು ಚರಿತ್ರಾರ್ಹ ಘಟನೆಯ ವರ್ಷಾಚರಣೆಗೆ ಕಪ್ಪು ಚುಕ್ಕೆಯೆಂಬಂತಾಗಿದೆ.

ನಗರದ ಜೆ.ಸಿ.ರಸ್ತೆಯ ಬಾಳನಕಟ್ಟೆಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ವೀರಸೌಧ ಕಟ್ಟಡದ ದುಸ್ಥಿತಿ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವಲತ್ತುಕೊಂಡ ತುಮಕೂರು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಡಿ.ಎನ್.ಸಂಪತ್ ಅವರು ಸ್ಮರಣೀಯ ಸೌಧ ಸೂಕ್ತ ನಿರ್ವಹಣೆಯಿಲ್ಲದೆ ಹಾಳಾಗುತ್ತಿದೆ. ನಿರ್ವಹಣೆ ಹೊಣೆ ಹೊತ್ತಿರುವ ಟೂಡಾ(ನಗರಾಭಿವೃದ್ಧಿ ಪ್ರಾಧಿಕಾರ)ಸಹ ಬಾಡಿಗೆ ಬಾಕಿ ವಸೂಲಿ, ಮೂಲಸೌಕರ್ಯ ಕಲ್ಪಿಸುವ ವಿಷಯದಲ್ಲಿ ಮನವಿ ಮಾಡಿದರೂ ಉಪೇಕ್ಷಿಸುತ್ತಿದೆ. ಇದರಿಂದ ಮನನೊಂದು 90ರ ಇಳಿವಯಸ್ಸಿನಲ್ಲಿ ಅಳಿದುಳಿದ ಸ್ವಾತಂತ್ರ್ಯ ಹೋರಾಟಗಾರರೇ ಸಾರ್ವಜನಿಕವಾಗಿ ಧ್ವನಿಎತ್ತುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವಲತ್ತುಕೊಂಡರು.

ಸ್ವಾತಂತ್ರ್ಯ ಹೋರಾಟಗಾರರ ಸಂಘವು 40 ವರ್ಷಗಳಿಂದ ನಿರಂತರವಾಗಿ ಸ್ವಾತಂತ್ರ್ಯ ಯೋಧರ ಕ್ಷೇಮಾಭಿವೃದ್ಧಿ ಹಾಗೂ ಮಹಾತ್ಮ ಗಾಂದೀಜಿಯವರ ಸ್ವಾತಂತ್ರ್ಯ ಪೂರ್ವ ಹೋರಾಟ, ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೂ ಸ್ಪರ್ಧೆಗಳು, ರಾಷ್ಟ್ರೀಯ ಹಬ್ಬಗಳು, ಸಮಾಜ ಸೇವಾ ಕಾರ್ಯ ಆಯೋಜಿಸುತ್ತಾ ಬರುತ್ತಿದ್ದು, 2004 ರಲ್ಲಿ ಸರ್ಕಾರದ ವತಿಯಿಂದ ಸುಮಾರು 40 ಲಕ್ಷ ರೂ.ಗಳನ್ನು ಮಂಜೂರು ಮಾಡಿ, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ, ಸಾರ್ವಜನಿಕರಿಂದ ಸಹಾಯ ಪಡೆದು ಈ ಭವ್ಯವಾದ ವೀರಸೌಧ ನಿರ್ಮಾಣವಾಗಿದ್ದು, ದೇಶದಲ್ಲಿರುವ ಕೆಲವೇ ಸ್ಮಾರಕಗಳಲ್ಲಿ ಒಂದಾಗಿದೆ. ಈ ವೀರಸೌಧ ಕಟ್ಟಡದ ನಿರ್ವಹಣೆಗೆ ವರಮಾನ ಬರುವಂತೆ ವಾಣಿಜ್ಯ ಕಟ್ಟಡವನ್ನು ನಿರ್ಮಿಸಿದ್ದು, ನಡುವೆ ಸಭಾಂಗಣ ಹಾಗೂ ಕಚೇರಿಯನ್ನು ನಿರ್ಮಿಸಲಾಗಿದೆ. ಡಾ.ಸಿ.ಸೋಮಶೇಖರ್ ಡಿಸಿ ಆಗಿದ್ದ ಅವಧಿಯಲ್ಲಿ ಜಿಲ್ಲಾಧಿಕಾರಿಗಳು, ಎಸಿ, ಇತರೆ ಸರಕಾರಿ ಅಧಿಕಾರಿಗಳು ಸ್ವಾತಂತ್ರ್ಯ ಹೋರಾಟಗಾರರನ್ನು ಪದನಿಮಿತ್ತ ಸದಸ್ಯರನ್ನಾಗಿಸಿ ಟೂಡಾ ಆಯುಕ್ತರಿಗೆ ನಿರ್ವಹಣೆ ಜವಾಬ್ದಾರಿ ನೀಡಲಾಯಿತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ್ಯಕ್ಕೆ ದೇಗುಲದಂತೆ ಸಂರಕ್ಷಿಸಬೇಕಾದ ವೀರಸೌಧ ಕೇಳುವವರ ದಿಕ್ಕಿಲ್ಲದ ಸೌಧವಾಗಿ ಮಾರ್ಪಟ್ಟಿದೆ ಎಂದು ದೂರಿದರು.

ಬಾಡಿಗೆದಾರರು ದುಂಡಾವರ್ತಿ: ಈ ಕಟ್ಟಡದಲ್ಲಿ ಸುಮಾರು 13 ಮಳಿಗೆಗಳು ಇದ್ದು, ಕೆಲವು ಅಂಗಡಿ ಮಾಲೀಕರು ಒಪ್ಪಂದ ಕರಾರಿನಂತೆ ಬಾಡಿಗೆ ಜಮಾ ಮಾಡದೆ ಹಾಗೂ ಇನ್ನಿತರ ಅಂಗಡಿ ಮಾಲೀಕರು ಬೇರೆಯವರಿಗೆ ಅನಧಿಕೃತವಾಗಿ ಬಾಡಿಗೆ ನೀಡಿ ಆ ಬಾಡಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇನ್ನೂ ಕೆಲವರು ಬಾಕಿ ಪಾವತಿಸಿದೆ ಅಂಗಡಿ ಖಾಲಿ ಮಾಡಿ ಓಡಿ ಹೋಗಿದ್ದಾರೆ. ಕೆಲವು ಅಂಗಡಿಯವರು ಕಾರ್ಪೊರೇಷನ್ ಲೈಸೆನ್ಸ್ ಪಡೆದಿಲ್ಲ, ಈ ಎಲ್ಲಾ ಸಮಸ್ಯೆಗಳು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಗೊತ್ತಿದ್ದರೂ ಸಹ ಕಾನೂನು ರೀತಿಯ ಕ್ರಮ ಕೈಗೊಳ್ಳದೆ ಇರುವುದರಿಂದ ಈ ಕಟ್ಟಡದಲ್ಲಿ ಬಾಕಿ ಬರಬೇಕಾದ 40 ಲಕ್ಷ ರೂ.ಹಣವನ್ನು ವಸೂಲಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ. 90-95 ವಯಸ್ಸಾz ವಯೋವೃದ್ಧರಾದ ನಾವು ಬಾಡಿಗೆ ವಸೂಲಿ ಮಾಡಲಾಗುತ್ತದೆಯೇ ಎಂದು ಪ್ರಶ್ನಿಸಿ ಮುಂದಿನ ಪೀಳಿಗೆಗೆ ವೀರಸೌಧ ಉಳಿಸಬೇಕಿರುವುದು ಆಡಳಿತ, ಸರಕಾರದ ಜವಾಬ್ದಾರಿ ಎಂದರು.

ಲೆಕ್ಕ ತಾಳೆ ಆಗುತ್ತಿಲ್ಲ: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವೀರಸೌಧದದ ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಕೇಳಲು ಹೋದರೆ ಇದು ನಮ್ಮ ಜವಾಬ್ದಾರಿಯೇ ಎನ್ನುತ್ತಾರೆ. ಇತ್ತೀಚಿಗೆ ಲೆಕ್ಕ ಪರಿಶೋಧಕರಿಂದ ಪರಾಮರ್ಶೆಗೊಳಪಡಿಸಿದ್ದು ಅದು ಸಹ ಪ್ರಾಧಿಕಾರದಲ್ಲಿ ಲೆಕ್ಕ ಹೊಂದಾಣಿಕೆ ಆಗುತ್ತಿಲ್ಲ. ಇತ್ತೀಚೆಗೆ ವೀರಸೌಧದ ವಿದ್ಯುತ್ ದರ ಪಾವತಿಸಿದ್ದರೂ ವಿದ್ಯುತ್ ಕಡಿತ ಮಾಡಲಾಗಿತ್ತು. ಆದ್ದರಿಂದ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕೂಡಲೇ ತನಿಖೆ ನಡೆಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಟಿ.ಆರ್.ರೇವಣ್ಣ, ಸ್ವಾತಂತ್ರ್ಯ ಹೋರಾಟಗಾರ ಶಂಕರಪ್ಪ, ತು.ಮ.ಬಸವರಾಜು ಮುಂತಾದವರು ಹಾಜರಿದ್ದ

ಪ್ರಜಾಪ್ರಗತಿಯಿಂದ ತಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link