ಲೇಖಕಿ ಡಾ. ಶೈಲಾ ನಾಗರಾಜ್ ಅವರಿಗೆ ಇಂದಿರಾರತ್ನ ದತ್ತಿ ಪ್ರಶಸ್ತಿ ಪ್ರದಾನ

ತುಮಕೂರು:


ಸಾಹಿತ್ಯ ಕಾರ್ಯಕ್ರಮ ಸಂಘಟಕರು ಶ್ರೇಷ್ಟತೆಯ ವ್ಯಸನದಿಂದ ಹೊರಬರಬೇಕು. ಜನಸಾಮಾನ್ಯರಲ್ಲಿ ಸಾಹಿತ್ಯಾಭಿರುಚಿಯನ್ನು ಬೆಳೆಸುವುದು ಹೇಗೆ ಎಂಬ ಬಗ್ಗೆ ಯೋಚಿಸಬೇಕಾಗಿದೆ. ಪ್ರಸಿದ್ಧ ಸಾಹಿತಿಗಳು, ಅವರ ಸಾಹಿತ್ಯವನ್ನೇ ಜಪಿಸುತ್ತಾ ಕೂರದೇ ಜನಸಾಮಾನ್ಯರಿಗೆ ಹತ್ತಿರವಾದ ಸಾಹಿತ್ಯವನ್ನು ಬರೆದ ಹೆಚ್ಚು ಪ್ರಚಾರಕ್ಕೆ ಬಾರದ ಕವಿ, ಲೇಖಕರ ಸಾಹಿತಿಗಳನ್ನು ಪರಿಚಯಿಸುವ ಕಾರ್ಯ ಮಾಡಬೇಕಿದೆ ಎಂದು ಲೇಖಕಿ ಹಾಗೂ ಜನಪದ ತಜ್ಞೆ ಡಾ.ಕೆ.ಆರ್. ಸಂಧ್ಯಾ ರೆಡ್ಡಿ ತಿಳಿಸಿದರು.
ಕರ್ನಾಟಕ ಲೇಖಕಿಯರ ಸಂಘ ರಾಜ್ಯ ಮತ್ತು ತುಮಕೂರು ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಇಂದಿರಾರತ್ನ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕಿ ಡಾ.ಬಿ.ಸಿ.ಶೈಲಾ ನಾಗರಾಜ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ದೊಡ್ಡದೊಡ್ಡ ಸಾಹಿತಿಗಳು, ವಿಮರ್ಶಕರಿಗೆ ಜನಸಾಮಾನ್ಯರು ಲೆಕ್ಕಕ್ಕೇ ಇಲ್ಲ. ಸಾಮಾನ್ಯರ ಅಭಿರುಚಿ ಏನು ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಅವರು ಶ್ರೇಷ್ಟತೆಯ ವ್ಯಸನದಿಂದ ನರಳುತ್ತಿದ್ದು, ಮಹಿಳಾ ಸಾಹಿತ್ಯವನ್ನು ಅವಗಣನೆಯಿಂದ ನೋಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕನಕ, ಬಸವ, ಅಂಬೇಡ್ಕರ್, ವಾಲ್ಮೀಕಿ ಜಯಂತಿಗಳನ್ನು ಸರ್ಕಾರಗಳು ಮಾಡುತ್ತವೆ. ಆಯಾ ಜಾತಿಯ ಮುಖಂಡರು, ಶಾಸಕರನ್ನು ಕರೆಸಿ ಪ್ರಶಸ್ತಿ ಕೊಡಿಸಿ ಕಾರ್ಯಕ್ರಮ ಮುಗಿಸುವುದರಿಂದ ಯಾರಿಗೂ ಆ ಮಹನೀಯರ ಕುರಿತು ಮಾಹಿತಿ ತಿಳಿಯುವುದಿಲ್ಲ. ಕಣ್ಣಿಗೆ ಪಟ್ಟಿಕೊಂಡಂತೆ ಕಾರ್ಯಕ್ರಮ ನಡೆಸುತ್ತಾರೆ. ಹಾಗಾಗಿ ಕರ್ನಾಟಕ ಲೇಖಕಿಯರ ಸಂಘ ಶಾಲೆಗಳಿಗೆ ಹೋಗಿ ಕನಕ, ವಾಲ್ಮೀಕಿ, ಅಂಬೇಡ್ಕರ್ ಕುರಿತು ಪ್ರಬಂಧ ಬರೆಯುವ ಸ್ಪರ್ಧೆ, ಹಾಡುವ ಸ್ಪರ್ಧೆ ಮಾಡಿ ವಿದ್ಯಾರ್ಥಿಗಳನ್ನು ಕನ್ನಡದ ಕಡೆ ಸೆಳೆಯುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕನಕ, ಅಂಬೇಡ್ಕರ್, ವಾಲ್ಮೀಕಿ, ಬಸವ ಜಯಂತಿ ಕಾರ್ಯಕ್ರಮಗಳನ್ನು ಜಾತಿಗೆ ಸೀಮಿತಗೊಳಿಸಿ ಅರ್ಥಹೀನವಾಗಿ ನಡೆಸಲಾಗುತ್ತಿದೆ ಇದು ತಪ್ಪಬೇಕು. ಅವರು ಸಮಾಜದ ಎಲ್ಲಾ ವರ್ಗಕ್ಕೆ ಸೇರಿದವರು. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.

ರಾಜ್ಯೋತ್ಸವ ಒಂದು ವಾರ್ಷಿಕ ಆಚರಣೆಯಾಗಿ ಕಾಣುತ್ತಿದೆ. ಕನ್ನಡ ವಾತಾವರಣ ಇಲ್ಲವಾಗಿದೆ. ಅದನ್ನು ಹೇಗೆ ಲ್ಲಿಸಿ: ಶೈಲಾ ನಾಗರಾಜ್ ಅವರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಿದ್ದು ಅವರನ್ನು ಗೆಲ್ಲಿಸಬೇಕು. ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುವ ಶೈಲಾ ಅವರನ್ನು ಗೆಲ್ಲಿಸಿದರೆ ಒಳ್ಳೆಯ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ ಎಂದು ಹೇಳಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪತ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ ಇಂದಿರಾರತ್ನ ದತ್ತಿ ನಿಧಿ ಇಟ್ಟಿರುವ ರಾಜನ್ ಅವರನ್ನು ಸ್ಮರಿಸಿದರು.

ಡಾ.ಶೈಲಾ ನಾಗರಾಜ್ ಅವರಿಗೆ ಇಂದಿರಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷೆ ಸಿ.ಎನ್.ಸುಗುಣಾದೇವಿ ಅಭಿನಂದನಾ ನುಡಿಗಳನ್ನಾಡಿ ಶೈನಾ ಮಹಿಳೆಯಲ್ಲ ಮಹಿಳಾ ಶಕ್ತಿ ಎಂದು ಬಣ್ಣಿಸಿದರು. ಕಲೇಸಂ ತುಮಕೂರು ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಸ್ವಾಗತಿಸಿದರು. ರಾಣಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಪಾರ್ವತಮ್ಮ ರಾಜಕುಮಾರ, ಕಾವ್ಯ, ಗಂಗಲಕ್ಷ್ಮಿ, ಹಿರಿಯರಾದ ಕಲಾಶ್ರೀ ಸಂಗಡಿಗರು ಕನ್ನಡದ ಹಾಡುಗಳನ್ನು ಹಾಡಿದರು. ಹಿರಿಯ ಲೇಖಕಿಯರಾದ ಸಿ.ಎಲ್.ಸುನಂದಮ್ಮ., ಇಂದಿರಮ್ಮ, ರಂಗಮ್ಮ ಹೊದೆಕಲ್, ಮಂಜುಳಾ, ನಾಗಲಾಂಬಿಕೆ ಮತ್ತಿತರರು ಪಾಲ್ಗೊಂಡರು.ಒಡಮೂಡಿಸಬೇಕಾಗಿದೆ, ಕನ್ನಡ ಭಾಷೆ, ಸಂಸ್ಕøತಿ ಬಗ್ಗೆ ಯುವಜನರಲ್ಲಿ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಅರಿವು ಮುಡಿಸುವುದು ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link