ದೋಣಿ ದುರಂತ :2 ಸಾವು, 11 ಮಂದಿ ನಾಪತ್ತೆ..!!!

ಇಂಡೋನೇಷ್ಯಾ

      ದೋಣಿ ಶುಕ್ರವಾರ ಸೊರೊಂಗ್‌ನಿಂದ ಹೊರಟು ರಾಜಾ ಅಂಪತ್‌ಗೆ ತೆರಳುತ್ತಿದ್ದಾಗ ರಾಜಾ ಅಂಪತ್‌ ಕರಾವಳಿಯಲ್ಲಿ ಮುಳುಗಿದೆ ಎಂದು ರಾಷ್ಟ್ರೀಯ ಶೋಧ ಮತ್ತು ರಕ್ಷಣಾ ಕಚೇರಿ ಮಾಧ್ಯಮ ಸಂವಹನ ವಿಭಾಗದ ಮುಖ್ಯಸ್ಥ ಯೂಸುಫ್ ಲತೀಫ್ ಹೇಳಿದ್ದಾರೆ.

     ‘ಬೃಹತ್ ಅಲೆಗಳು ಅಪ್ಪಳಿಸಿದ್ದ ನಂತರ ದೋಣಿ ಮಗುಚಿದೆ’ ಎಂದು ಅವರು ಕ್ಸಿನ್ಹುವಾಗೆ ತಿಳಿಸಿದ್ದಾರೆ.ಕಾಣೆಯಾದ 11 ಪ್ರಯಾಣಿಕರಿಗಾಗಿ ಪ್ರಾಂತ್ಯದ ಶೋಧ ಮತ್ತು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.ದೋಣಿಯಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಲತೀಫ್ ಹೇಳಿದ್ದಾರೆ.

      ವಿಶಾಲ ದ್ವೀಪಸಮೂಹ ದೇಶದಲ್ಲಿ ದೋಣಿ ಆದ್ಯತೆಯ ಸಾರಿಗೆ ಸಾಧನವಾಗಿದೆ. ಸಡಿಲ ಸುರಕ್ಷತಾ ಮಾನದಂಡಗಳಿಂದ ಸಮುದ್ರದಲ್ಲಿ ಹೆಚ್ಚಾಗಿ ಇಂತಹ ಘಟನೆಗಳು ಆಗಾಗ್ಗೆ ಸಂಭವಿಸುತ್ತವೆ.ಈ ಮಧ್ಯೆ, ಇಂದು ಇದೇ ಪೂರ್ವ ಇಂಡೋನೇಷ್ಯಾದಲ್ಲಿ ರಿಕ್ಟರ್ ಮಾಪಕದಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ. ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap