ಸಿಂಗಾಪುರ:
ವಿಶ್ವದ ವಾಣಿಜ್ಯ ಜಲಸಂಧಿ ಎಂದೇ ಖ್ಯಾತವಾಗಿರುವ ಸಿಂಗಾಪುರ ಜಲಸಂಧಿಯಲ್ಲಿ ಕೆಲ ದಿನಗಳಿಂದ ಕಡಲ್ಗಳ್ಳರು ಅಟ್ಟಹಾಸ ಮುಂದುವರೆದಿದೆ ಕೇವಲ ನಾಲ್ಕು ದಿನಗಳಲ್ಲಿ ಐದು ನೌಕೆಗಳ ಮೇಲೆ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.
ಕಳೆದ ವಾರವಷ್ಟೇ ಕಚ್ಚಾ ತೈಲ ಟ್ಯಾಂಕರ್ ವೊಂದರ ಮೇಲೆ ಕಡಲ್ಗಳ್ಳರು ದಾಳಿ ನಡೆಸಿದ್ದರು. ಈ ವೇಳೆ ಟ್ಯಾಂಕರ್ ನಲ್ಲಿ 105,000 ಟನ್ ಕಚ್ಛಾತೈಲವಿತ್ತು. ಇರಾಕ್ ನ ಬಸ್ರಾಹ್ ನಿಂದ ಕಚ್ಛಾ ತೈಲ ತುಂಬಿದ್ದ ಬಮ್ಜಿ ಎಂಬ ನೌಕೆ ಸಿಂಗಾಪುರ ಜಲಸಂಧಿ ಮಾರ್ಗವಾಗಿ ಚೀನಾ ಕಿಂಗ್ ಡಾವೋನತ್ತ ಚಲಿಸುತ್ತಿತ್ತು, ಈ ವೇಳೆ ಕಡಲ್ಗಳ್ಳರು ದಾಳಿ ನಡೆಸಿದ್ದಾರೆ ೆಂದು ವರದಿಯಾಗಿದೆ.
ಇದಾದ ಎರಡೇ ಗಂಟೆಯಲ್ಲಿ ಮತ್ತೂಂದು ನೌಕೆಯ ಮೇಲೆ ದಾಳಿ ನಡೆದಿದೆ. ಎರಡೂ ನೌಕೆಯಲ್ಲಿದ್ದ ಸಿಬಂದಿಯನ್ನು ಕಟ್ಟಿಹಾಕಿದ್ದ ಕಡಲ್ಗಳ್ಳರು, ದರೋಡೆಗೆ ಯತ್ನಿಸಿದ್ದರು. ಆದರೆ, ಹಡಗಿನಲ್ಲಿದ್ದ ಎಚ್ಚರಿಕೆಯ ಗಂಟೆ ಮೊಳಗಿದ ಕಾರಣ ಅವರ ಯತ್ನ ವಿಫಲವಾಗಿತ್ತು . ಡಿ.20ರಂದು 3 ಕಡಲ್ಗಳ್ಳತನ ಘಟನೆ ನಡೆದಿತ್ತು. 2019ರಲ್ಲಿ ಸಿಂಗಾಪುರ ಜಲಸಂಧಿಯಲ್ಲಿ ಒಟ್ಟಾರೆ ಇಂತಹ 29 ಪ್ರಕರಣಗಳು ವರದಿಯಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
