ಇಸ್ಲಾಮಾಬಾದ್:
ಭಾರತದಲ್ಲಿ ಮುಸಲ್ಮಾನರಿಗೆ ಯಾವುದೇ ಆತಂಕವಿಲ್ಲ, ಬಹುಸಂಖ್ಯಾತರಂತೆ ಅವರೂ ಸಮಾನರಾಗಿದ್ದು, ಎಲ್ಲರಂತೆ ತಮ್ಮ ವ್ಯಾಪಾರ-ವ್ಯವಹಾರಗಳನ್ನು ನಡೆಸುತ್ತಿದ್ದಾರೆಂದು ಪಾಕಿಸ್ತಾನ ಮೂಲದ ಲೇಖಕ, ಸ್ವೀಡಿಷ್ ರಾಜಕೀಯ ತಜ್ಞ ಇಶ್ತಿಯಾಕ್ ಅಹ್ಮದ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯ ಪ್ರಸ್ತಾಪದ ಕುರಿತು ಅಹ್ಮದ್ ಮಾತನಾಡಿದ್ದಾರೆ.
ಈ ವೇಳೆ ” ಏಕರೂಪ ನಾಗರಿಕ ಸಂಹಿತೆ ಸರಿಯಾದ ವಿಧಾನವೆಂದು ಬಣ್ಣಿಸಿದ್ದಾರೆ. ಮುಸಲ್ಮಾನ ಹೆಣ್ಣುಮಕ್ಕಳಿಗೆ ಅನ್ಯಾಯವಾಗಬಾರದು ಎಂದು ವಾದಿಸುವ ನಾವು, ಯುಸಿಸಿಯನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. ದೇಶದಲ್ಲಿ ಸಮಾನವಾದ ಅಪರಾಧ ಕಾನೂನುಗಳಿವೆ, ಅದರಂತೆಯೇ ಸಮಾನ ನಾಗರಿಕ ಕಾನೂನುಗಳು ಜಾರಿಯಾಗುವುದರಲ್ಲಿ ತಪ್ಪೇನಿದೆ? ಪ್ರತ್ಯೇಕ ಸಮುದಾಯಗಳಿಗೆ ಪ್ರತ್ಯೇಕ ಕಾನೂನು ಎನ್ನುವಂತೆ ಭಾರತದಲ್ಲಿ ಅನ್ವಯಿಸಲು ಸಾಧ್ಯವಿಲ್ಲ, ಹಾಗಾಗಿ ಯುಸಿಸಿ ಜಾರಿಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
