ತುಮಕೂರು ;
ನಗರದ ಬಾವಿಕಟ್ಟೆಕಲ್ಯಾಣ ಮಂಟಪದಲ್ಲಿ ಆ.25ರಂದು ಭಾನುವಾರ ಬೆ.5:30ಕ್ಕೆ ತೆವಡೆಹಳ್ಳಿ ಗದ್ದುಗೆ ಮಠದ ಷ ll ಬ್ರ ll ಶ್ರೀ ಶ್ರೀ ಶ್ರೀ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಇವರಿಂದ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮವನ್ನು ವೀರಶೈವ ಲಿಂಗಾಯತ ಸಮಾಜದ ಬಾಂಧವರಿಗೆ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ವೀರಶೈವ ಲಿಂಗಾಯತ ಸಮಾಜದ ಶರಣ ಬಂಧುಗಳಿಗೆ ಸರ್ವರಿಗೂ ಸುಸ್ವಾಗತ. ಅಖಿಲ ಭಾರತ ವೀರಶೈವ ಲಿಂಗಾಯತ ನೋಂದಣಿಯನ್ನು ಕೂಡ ಮಾಡಲಾಗುವುದು, ನೊಂದಣಿಯನ್ನು ಮಾಡಿಕೊಳ್ಳವವರು ಒಂದು ಭಾವಚಿತ್ರ ಹಾಗೂ ಆಧಾರ್ ಕಾರ್ಡಿನ ಜೆರಾಕ್ಸ್ ಕೊಡಬೇಕಾಗುವುದು.
