ತಿಪಟೂರು:
ಬುಧವಾರ ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ತಾಲೂಕಿನ ಮಾಜಿ ಶಾಸಕ ಹಾಗೂ ಕೊಬ್ಬರಿ ವರ್ತಕ ಬಿ.ನಂಜಾಮರಿ ಅವರ ಮನೆ ಹಾಗೂ ಕಚೇರಿಯ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿಮಾಡಿದ್ದಾರೆ.
ತಾಲೂಕಿನ ಬೆಳಗರಹಳ್ಳಿ ನಿವಾಸಕ್ಕೆ ಬೆಳಗ್ಗೆ 4 ಗಂಟೆ ಸುಮಾರಿಗೆ ದಾಳಿಮಾಡಿದ ಅಧಿಕಾರಿಗಳು ಅಲ್ಲಿಂದ ಎಪಿಎಂಸಿ ಮಾರುಕಟ್ಟೆಯಲ್ಲಿದ್ದ ಅವರ ಕೊಬ್ಬರಿ ಅಂಗಡಿಯ ಮೇಲೂ ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲಿಸಿದರು.
ಕುಸಿದ ಕೊಬ್ಬರಿ ಬೆಲೆ :
ಕಳೆದ ತಿಂಗಳಿನಿಂದಲೂ ಏರುಗತಿಯಲ್ಲಿ ಸಾಗುತ್ತಿದ್ದ ಕೊಬ್ಬರಿ ಬೆಲೆ ಇಂದು ಐಟಿ ದಾಳಿ ನಡೆಯುತ್ತಿದ್ದಂತೆ ಏಕಾಏಕಿ ಕ್ವಿಂಟಾಲ್ಗೆ 400 ರೂ ಇಳಿಕೆ ಕಂಡಿದ್ದು, ತಿಪಟೂರು ಎಪಿಎಂಸಿಯ ಕೊಬ್ಬರಿ ವ್ಯಾಪಾರದಲ್ಲಿ ಹಿಡಿತ ಹೊಂದಿರುವ ನಂಜಾಮರಿಯವರು ದರ ಇಳಿಕೆಯ ಹಿಂದೆ ಇರಬಹುದಾ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/11/copra2-1626932022.jpg)