KGF ಬಾಬು ಮನೆ ಮೇಲೆ ಐಟಿ ದಾಳಿ….!

ಬೆಂಗಳೂರು

     ಇಂದು ಪಕ್ಷೇತರ ಅಭ್ಯರ್ಥಿಯಾದ ಕೆಜಿಎಫ್‌ ಬಾಬು ಅವರ ಮನೆ ಮೇಲೆ ಐಟಿ ದಾಳಿ ನಡೆದಿದೆ .ಬುಧವಾರ ಬೆಳಗ್ಗೆಯೇ ಹೈಗ್ರೌಂಡ್ಸ್‌ ಬಳಿಯಿರುವ ಕೆಜಿಎಫ್‌ ಬಾಬು ಅವರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಶೋಧ ಕಾರ್ಯ ಕೈಗೊಂಡಿದ್ದಾರೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆಜಿಎಫ್‌ ಬಾಬು ಅವರಿಗೆ ಪಕ್ಷದಿಂದ ಟಿಕೆಟ್ ನಿರಾಕರಿಸಲಾಗಿತ್ತು.

    ಕಾಂಗ್ರೆಸ್ ನಾಯಕ, ಉದ್ಯಮಿಯಾಗಿರುವ ಕೆಜಿಎಫ್ ಬಾಬು ಯಾನೆ ಯುಸೂಫ್ ಶರೀಫ್ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ಕೈಗೊಳ್ಳುತ್ತಿರುವುದು ಇದು ಮೊದಲೇನಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೇವಲ 20 ದಿನಗಳು ಮಾತ್ರ ಬಾಕಿ ಇದೆ. ಸಹಜವಾಗಿ ಎಲ್ಲೆಡೆ ರಾಜಕೀಯ ಪಕ್ಷಗಳ ಪ್ರಚಾರ ಜೋರಾಗಿದ್ದು, ನಾಮಪತ್ರ ಸಲ್ಲಿಕೆಯಾಗುತ್ತಿದೆ. ಇದರ ಜೊತೆ ಅವರ ಘೋಷಿತ ಆಸ್ತಿ ವಿವರಗಳು ಬಹಿರಂಗವಾಗುತ್ತಿದೆ. ಇದರ ನಡುವೆ ಐಟಿ ಅಧಿಕಾರಿಗಳು ಕೂಡ ಅಲರ್ಟ್ ಆಗಿದ್ದು ಪದೇ ಪದೇ ದಾಳಿ ನಡೆಸುತ್ತಿದ್ದಾರೆ.

          ಇತ್ತೀಚೆಗೆ ಮೈಸೂರು, ಮಂಗಳೂರು ಸೇರಿದಂತೆ ಹಲವೆಡೆ ಕಾಂಗ್ರೆಸ್ ಮುಖಂಡರ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿತ್ತು. ಈಗ ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಕೆಜಿಎಫ್​ ಬಾಬು ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದರು.

          ಆದರೆ ಕಾಂಗ್ರೆಸ್‌ ಪಕ್ಷ ಅವರ ಬದಲಿಗೆ ಆರ್‌ ವಿ ದೇವರಾಜು ಅವರಿಗೆ ಟಿಕೆಟ್‌ ನೀಡಲಾಗಿತ್ತು, ಬಳಿಕ ಕೆಜಿಎಫ್‌ ಬಾಬು ಅವರು ತಮ್ಮ ಪತ್ನಿಯಾದ ಷಾಜಿಯಾ ತರನಮ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕೆಜಿಎಫ್ ಬಾಬು ಅವರ ಮನೆ ಮೇಲೆ ಕಳೆದ 10 ತಿಂಗಳ ಹಿಂದೆ ಇಡಿ (ಜಾರಿ ನಿರ್ದೇಶನಾಲಯ) ದಿಂದ ತನಿಖೆ ಮಾಡಲಾಗಿತ್ತು. ನಾಮಪತ್ರ ಸಲ್ಲಿಕೆಯಾದ ಮೇಲೆ ಕೆಜಿಎಫ್‌ ಬಾಬು ಅವರ ಪತ್ನಿ ಷಾಜಿಯಾ ತರನಮ್‌ ಅವರ ಆಸ್ತಿ ಘೋಷಣೆಯಾಗಿತ್ತು.

 
         ಷಾಜಿಯಾ ತರನ್ನಮ್‌ ತಮ್ಮ ಬಳಿ ಒಟ್ಟಾರೆ 1622.11 ಕೋಟಿ ರು. ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿ ಕೊಂಡಿದ್ದರು. ಈ ಹಿನ್ನೆಲೆಯಲ್ಲೂ ಐಟಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. ತರನಮ್‌ ಅವರು ಈ ಪೈಕಿ ತರನ್ನಮ್‌ ತಮ್ಮ ಬಳಿ 50 ಸಾವಿರ ರು. ನಗದು, 38.58 ಲಕ್ಷ ರು ಮೌಲ್ಯದ ಚಿನ್ನ, ವಜ್ರಾಭರಣ ಸೇರಿದಂತೆ ಒಟ್ಟು 40.59 ಲಕ್ಷ ರು. ಮೌಲ್ಯದ ಚರಾಸ್ತಿ ಇದೆ. ಇದನ್ನು ಬಿಟ್ಟರೆ ಉಳಿದ 1621.71 ಕೋಟಿ ರು.ಗಳಷ್ಟು ಮೌಲ್ಯದ ಆಸ್ತಿಯು ತಮ್ಮ ಪತಿಯ ಹೆಸರಲ್ಲಿರುವುದಾಗಿ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap