ಬೆಂಗೂಳೂರು :
ರಾಜ್ಯವನ್ನು ಕಾಡುತ್ತಿರುವ ವಿವಿಧ ಮಾದರಿಯ ಮಾಲಿನ್ಯ ನಿಯಂತ್ರಿಸಲು ಸರಕಾರ ಹತ್ತಾರು ಕಾನೂನು ತರಬಹುದು. ಆದರೆ ಈ ಎಲ್ಲ ಕಾನೂನು ಮೀರಿ, ಜನರಲ್ಲಿ ಮಾಲಿನ್ಯ ನಿಯಂತ್ರಿಸುವ ಅರಿವು ಮೂಡಿಸಿದಾಗ ಮಾತ್ರ ಮಾಲಿನ್ಯ ನಿಯಂತ್ರಿಸುವಲ್ಲಿ ಯಶಸ್ಸು ಸಾಧ್ಯ. ಆದ್ದರಿಂದ ಮುಂದಿನ ಮೂರು ತಿಂಗಳುಗಳ ಕಾಲ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅಭಿಪ್ರಾಯಪಟ್ಟರು. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆ ಗೊಂಡು 50 ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ‘ಪ್ಲಾಸ್ಟಿಕ್ ಮಾಲಿನ್ಯ ವನ್ನು ಅಂತ್ಯಗೊಳಿಸೋಣ’ ಎನ್ನುವ ಧೇಯ್ಯವಾಕ್ಯದೊಂದಿಗೆ ಅರಮನೆ ಮೈದಾನದಲ್ಲಿ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕೌಟುಂಬಿಕ ಕಾರಣಕ್ಕೆ ಅಥವಾ ಜಾತಿ ಕಾರಣಕ್ಕೆ ಸಚಿವ ಸ್ಥಾನ ನೀಡುವುದಕ್ಕಿಂತ ಪಕ್ಷಕ್ಕೆ ಕೊಡುಗೆ ಏನು ಎನ್ನುವ ಆಧಾರದಲ್ಲಿ ಸಚಿವ ಸ್ಥಾನ ನೀಡಬೇಕು. ಯಾವುದೇ ರಾಜಕೀಯ ಹಿನ್ನಲೆಯಿಲ್ಲದೇ ರಾಜಕೀಯಕ್ಕೆ ಧುಮುಕಿದ ನನಗೆ ಅನೇಕ ಬಾರಿ ಅನ್ಯಾಯವಾಗಿದೆ ಎಂದು ಅಭಿಪ್ರಾಯಪಟ್ಟರು. ವಿಶ್ವವಾಣಿಯೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ, ಶಾಸಕರಿಗೆ ಅನುದಾನ, ಮರು ಗಣತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ಸಚಿವಾಕಾಂಕ್ಷಿಗಳ ಬೇಡಿಕೆ ತಪ್ಪಲ್ಲ. ಆದರೆ ಜಾತಿ, ಕುಟುಂಬದ ಆಧಾರದಲ್ಲಿ ಸಚಿವ ಸ್ಥಾನ ನೀಡುವುದಕ್ಕಿಂತ ಪಕ್ಷಕ್ಕೆ ಯಾರಿಂದ ಎಷ್ಟು ಕೊಡುಗೆ ಸಿಕ್ಕಿದೆ? ಎನ್ನುವುದನ್ನು ಗಮನಿಸಿ ನೀಡ ಬೇಕು. ಪಕ್ಷ ತಳಮಟ್ಟದಿಂದ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರಿಗೆ ಅವಕಾಶ ನೀಡುವುದು ಪಕ್ಷದ ಜವಾಬ್ದಾರಿ. ಆದರೆ ವೈಯಕ್ತಿಕವಾಗಿ ಹೇಳುವುದಾದರೆ, ನಮ್ಮ ತಂದೆ ರಾಜಕಾರಣಿಯಲ್ಲ, ಕೈಗಾರಿಕೋದ್ಯಮಿಯಲ್ಲ. ಸಾಮಾನ್ಯ ರೈತ. ಆದ್ದರಿಂದ ನನಗೆ ಹಲವು ಬಾರಿ ಅವಕಾಶ ವಂಚನೆ ಯಾಗಿದೆ. ವಿದ್ಯಾರ್ಥಿ ಸಂಘಟನೆಯಿಂದ ಪಕ್ಷದೊಂದಿಗೆ ಇದ್ದರೂ, ನನಗೆ ಸದಾಕಾಲ ವಂಚನೆಯಾ ಗುತ್ತಿದೆ. ಹೊರಗಿನಿಂದ ಬಂದವರಿಗೆ ಮಣೆ ಹಾಕಿರುವ ಅನೇಕ ಉದಾಹರಣೆಗಳಿವೆ. ಆದರೆ ಪಕ್ಷದ ಸಿದ್ಧಾಂತದಲ್ಲಿ ಕೆಲಸ ಮಾಡುವವರಿಗೆ ಅವಕಾಶ ಸಿಗುವ ಕೆಲಸವಾಗಬೇಕು.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ನಾಲ್ಕು ತಿಂಗಳಾಗಿದೆ. ಸುಮಾರು 50 ವರ್ಷದ ಇತಿಹಾಸವಿರುವ ಮಂಡಳಿಗೂ ಕಾಂಗ್ರೆಸ್ ಪಕ್ಷಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಸ್ವಾಯತ್ತ ಸಂಸ್ಥೆಯಾಗಿರುವ ಈ ಮಂಡಳಿಯನ್ನು ಈ ಹಿಂದೆ ಅನೇಕರು, ಸರಿಯಾದ ರೀತಿಯಲ್ಲಿ ನಿಭಾಯಿಸಿಲ್ಲ. ಮಂಡಳಿಯ ಅಧಿಕಾರ ವ್ಯಾಪ್ತಿಯನ್ನು ಅರ್ಥೈಸಿ ಕೊಳ್ಳುವಲ್ಲೇ ಹಿಂದಿನವರು ವಿಫಲವಾಗಿದ್ದರು.
ಸವಾಲು ಎನ್ನುವುದಕ್ಕಿಂತ ಇಲ್ಲಿ ಹಲವು ಸಮಸ್ಯೆಗಳಿವೆ. ಮೊದಲೇ ಹೇಳಿದಂತೆ ಈ ಹಿಂದಿನವರು ತಮ್ಮ ಅಧಿಕಾರಾವಧಿಯಲ್ಲಿ ಸರಿಯಾಗಿ ನಿರ್ವಹಣೆ ಮಾಡಿಲ್ಲ. ಪ್ರಮುಖವಾಗಿ, ನಮ್ಮಲ್ಲಿ ಸಿಬ್ಬಂದಿಯ ಕೊರತೆಯಿದೆ. 730 ಹುದ್ದೆಗಳಿದ್ದು, ಇದರಲ್ಲಿ 230 ಮಂದಿ ಮಾತ್ರ ಕಾರ್ಯನಿರ್ವಹಿ ಸುತ್ತಿದ್ದಾರೆ. ತಾಂತ್ರಿಕ ಪರಿಣಿತರನ್ನು ಹೊಂದಿರಬೇಕಾದ ಮಂಡಳಿಯಲ್ಲಿ ಸಿಬ್ಬಂದಿಗಳೇ ಇಲ್ಲ ಎಂದರೆ ಹೇಗೆ? ಬರುವ ದೂರನ್ನು ದಾಖಲಿಸಲು, ಸ್ಯಾಂಪಲ್ಗಳನ್ನು ಪರೀಕ್ಷಿಸಲು, ಸಂಗ್ರಹಿಸಲು ಸಿಬ್ಬಂದಿ ಅತ್ಯಗತ್ಯ. ಈಗ ನಾಲ್ವರು ಮಾಡುವ ಕೆಲಸವನ್ನು ಒಬ್ಬರೇ ಮಾಡುತ್ತಿರುವುದರಿಂದ ಹಲವು ಸಮಸ್ಯೆಯಾಗುತ್ತಿದೆ.
ಇನ್ನು ಇಡೀ ರಾಜ್ಯಕ್ಕೆ 15 ವರ್ಷದೊಳಗಿನ ವಾಹನಗಳನ್ನು ಬಳಸು ವಂತೆ ಆದೇಶ ಹೊರಡಿಸುವ ನಮ್ಮ ಮಂಡಳಿಯಲ್ಲಿಯೇ ಅನೇಕ ವಾಹನಗಳ ಆಯಸ್ಸು 15 ವರ್ಷ ಕಳೆದಿದೆ. ಮಂಗಳೂರಿಗೆ ಪ್ರವಾಸಕ್ಕೆ ಹೋದ ಸಮಯದಲ್ಲಿ ನಮ್ಮ ಮಂಡಳಿಯ ಹಳೇ ವಾಹನ ಗಳನ್ನು ನೋಡಿ ಪ್ರಶ್ನಿಸಿದಾಗ, ಅನುದಾನ ಕೊರತೆಯಿಂದ ಇವುಗಳನ್ನೇ ಬಳಸಲಾಗುತ್ತಿದೆ ಎನ್ನುವ ಉತ್ತರವನ್ನು ಅಧಿಕಾರಿಗಳು ನೀಡಿದರು. ಎಲ್ಲರಿಗೂ ಸೂಚನೆ ನೀಡುವ ನಾವೇ ಕಾನೂನು ಉಲ್ಲಂಘಿಸಿದರೆ ಹೇಗೆ? ಎಂದು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಸಿಬ್ಬಂದಿ ನೇಮಕ ಹಾಗೂ ನೂತನ ವಾಹನಗಳ ಖರೀದಿಗೆ ಮನವಿ ಮಾಡಿದಾಗ, ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಒಪ್ಪಿಗೆ ಕೊಡಿಸಿದರು. ಇದೀಗ ಹೊಸ ವಾಹನಗಳನ್ನು ಖರೀದಿಸಲಾಗುತ್ತಿದ್ದು, ಒಳಮೀಸಲು ನೀಡಿದ ಬಳಿಕ ಖಾಲಿ ಯಿರುವ ಶೇ.80ರಷ್ಟು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು.
ಮಾಲಿನ್ಯ ನಿಯಂತ್ರಣ ಮಾಡುವುದಕ್ಕೆ ನಾವು ಏನೇ ನಿಯಮ, ದಂಡ, ಶಿಕ್ಷೆ ವಿಧಿಸಬಹುದು. ಆದರೆ ಸಾರ್ವಜನಿಕರಲ್ಲಿಯೇ ಮಾಲಿನ್ಯ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಬೇಕಿದೆ. ಮಂಡಳಿ ಯೊಂದಿಗೆ ಸ್ಥಳೀಯ ಆಡಳಿತಗಳೂ ಸಾಥ್ ನೀಡಬೇಕಿದೆ. ನಗರೀಕರಣದ ಬೆಳವಣಿಗೆ ಯಿಂದ ಮಾಲಿನ್ಯದ ಮಟ್ಟವು ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇನ್ನು ಇದರ ಜತೆಗೆ ನಗರದಲ್ಲಿ ನೀರು ಶುದ್ಧೀಕರಣ ಘಟಕಗಳು ಈ ವೇಗಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ. ಖಾಸಗಿ ಬಡಾವಣೆ ಗಳು ಹಾಗೂ ದೊಡ್ಡ ದೊಡ್ಡ ಲೇಔಟ್ಗಳಲ್ಲಿ ಎಸ್ಸಿಟಿ ಸ್ಥಾಪಿಸುವಂತೆ ಸೂಚನೆ ನೀಡಿದ್ದೇವೆ. ಆದರೆ ಇದು ಯಾವ ರೀತಿಯಲ್ಲಿ ಶುದ್ಧೀಕರಣವನ್ನು ನಿಭಾಯಿಸುತ್ತಿದೆ ಎನ್ನುವುದನ್ನು ಸ್ಥಳೀಯ ಆಡಳಿತಗಳು ನಿಭಾಯಿಸಬೇಕು.
ಇನ್ನು ಯಾವುದೇ ಊರಿಗೆ ಹೋಗಿ, ಅಲ್ಲಿ ಊರಾಚೆ ಕಸಗಳನ್ನು ಎಸೆಯುವುದು ಸಾಮಾನ್ಯವಾಗಿದೆ. ಈ ರೀತಿ ಮಾಡಬಾರದು ಎನ್ನುವ ಕುರಿತು ಜಾಗೃತಿಯನ್ನು ಜನರಲ್ಲಿ ಮೂಡಿಸಬೇಕಿದೆ. ಈ ಹಿನ್ನಲೆ ಯಲ್ಲಿ 50 ವರ್ಷದ ಆಚರಣೆಯ ಸಮಯದಲ್ಲಿ ಮುಂದಿನ ಮೂರು ತಿಂಗಳ ಕಾಲ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಸಾರ್ವಜನಿಕ ಜಾಥಾ, ಕಾರ್ಯಕ್ರಮಗಳ ಮೂಲಕ ಜನರಿಗೆ ಮಂಡಳಿಯ ಕಾರ್ಯಚರಣೆಯ ಜತೆ ಜತೆಗೆ ಸಾರ್ವಜನಿಕರು ಯಾವ ರೀತಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಕೈಜೋಡಿಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಮಾಡುತ್ತೇವೆ. ಕೇವಲ ಸಾರ್ವಜನಿಕರು ಮಾತ್ರವಲ್ಲದೇ, ಬೃಹತ್ ಕೈಗಾರಿಕೆ, ಸಣ್ಣ ಕೈಗಾರಿಕೆ, ವಿವಿಧ ಉದ್ಯಮ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನಿನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ.
ಬೃಹತ್ ಕೈಗಾರಿಕೆಯ ಸಣ್ಣ ತಪ್ಪುಗಳು ಬಹುದೊಡ್ಡ ದುರಂತಕ್ಕೆ ಕಾರಣವಾಗುತ್ತದೆ. ಕೈಗಾರಿಕೆಗಳು ನದಿಗೆ ಬಿಡುವ ಸಂಸ್ಕರಿಸದ ನೀರು, ವಾತಾವರಣಕ್ಕೆ ಬಿಡುತ್ತಿರುವ ಹೊಗೆಯಿಂದ ಇಡೀ ಸಮಾಜಕ್ಕೆ ಸಮಸ್ಯೆಯಾಗುತ್ತದೆ. ಆದ್ದರಿಂದ ಕೈಗಾರಿಕೆಗಳ ಇಂತಹ ಅಲ್ಯಕ್ಷದ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಮಾಲಿನ್ಯದ ನಿಯಂತ್ರಣಕ್ಕೆ ಅಗತ್ಯ ಕಾನೂನು ಕ್ರಮವಹಿಸಲಾಗುತ್ತಿದೆ. ಕಳೆದ ಸಭೆಯೊಂದರಲ್ಲಿಯೇ 40 ಕೈಗಾರಿಕೆಗಳನ್ನು ಮುಚ್ಚುವುದಕ್ಕೆ ಸೂಚನೆ ನೀಡಿದ್ದೇವೆ. ಇರುವ ಲೋಪ ಗಳನ್ನು ಸರಿಪಡಿಸಿ, ಸ್ಥಳೀಯ ಆಡಳಿತದಿಂದ ಅನುಮತಿ ಪಡೆದುಕೊಂಡು ಬಂದರೆ ಅಂತಹ ಕೈಗಾರಿಕೆಗಳ ಪುನಾರಂಭಕ್ಕೆ ಚಿಂತನೆ ನಡೆಸುತ್ತೇವೆ.
ಸುವರ್ಣ ಮಹೋತ್ಸವಕ್ಕೂ ಕಾಂಗ್ರೆಸಿಗೂ ಅವಿನಾಭಾವ ಸಂಬಂಧವಿದೆ. ಏಕೆಂದರೆ, 1972ರಲ್ಲಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರು ಸಾರ್ಕ್ ಸಮ್ಮೇಳನದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಯಾವೆಲ್ಲ ರೀತಿಯಲ್ಲಿ ಕಾರ್ಯನಿರ್ವಹಿಸಬಹುದು ಎಂದು ವಿಶ್ವದ ಕಣ್ಣು ತೆರೆಸುವ ಭಾಷಣವನ್ನು ಮಾಡು ತ್ತಾರೆ. ಬಳಿಕ ಅದಕ್ಕಾಗಿ ಪ್ರತ್ಯೇಕ ಕಾನೂನುಗಳನ್ನು ಜಾರಿಗೆ ತಂದರು. ಬಳಿಕ 94ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಜಾರಿಗೊಳಿಸಿದರು. ಇಂದಿರಾಗಾಂಧಿ ಅವರು ಹಲವು ಕಾನೂನು ಗಳನ್ನು ಜಾರಿಗೊಳಿಸಿದ ಬಳಿಕ ಈ ಕಾನೂನುಗಳಿಗೆ ಬಲ ತುಂಬುವ ನಿಟ್ಟಿನಲ್ಲಿ ಕೆಲಸ ಮಾಡಿದ್ದು ರಾಜೀವ್ ಗಾಂಧಿ ಅವರು. ಇನ್ನು ಇತ್ತೀಚಿನ ದಿನದಲ್ಲಿ ಕಾನೂನುಗಳಿಗೆ ತಿದ್ದುಪಡಿ ತಂದಿದ್ದು ಮನಮೋಹನ್ ಸಿಂಗ್ ಸರಕಾರ. ಆದ್ದರಿಂದ ಈ ಎಲ್ಲದರಲ್ಲಿಯೂ ಕಾಂಗ್ರೆಸ್ ಬೇರುಗಳಿವೆ. ಆದ್ದರಿಂದ ಸೋಮವಾರದ ಕಾರ್ಯಕ್ರಮದಲ್ಲಿ ಮಂಡಳಿ ಸ್ಥಾಪನೆಗೆ ಕಾರಣ ಯಾರು ಎನ್ನುವು ದನ್ನು ತಿಳಿಸಲು ಇಂದಿರಾ ಗಾಂಧಿ ಅವರ ಚಿತ್ರವನ್ನು ಬಳಸಿಕೊಳ್ಳಲಾಗಿದೆ.
ಪ್ಲಾಸ್ಟಿಕ್ ಎನ್ನುವುದು ಕರ್ನಾಟಕದ ಸಮಸ್ಯೆಯಾಗಿ ಉಳಿದಿಲ್ಲ. ಇದು ಇಡೀ ವಿಶ್ವದ ಸಮಸ್ಯೆ ಯಾಗಿದೆ. ಪ್ರಕೃತಿ, ಭೂಮಿತಾಯಿಯನ್ನು ಸಂರಕ್ಷಿಸಿಕೊಳ್ಳಲು ಪ್ಲಾಸ್ಟಿಕ್ನಿಂದ ದೂರ ಹೋಗ ಬೇಕಿದೆ. ವಿಶ್ವಸಂಸ್ಥೆ ಈಗಾಗಲೇ ನೋ ಪ್ಲಾಸ್ಟಿಕ್ ಘೋಷವಾಕ್ಯವನ್ನು ನೀಡಿದ್ದು, ಅದನ್ನೇ ಕರ್ನಾಟಕದಲ್ಲಿಯೂ ಅನುಸರಿಸಲಾಗುತ್ತಿದೆ. ಪ್ಲಾಸ್ಟಿಕ್ನ್ನು ರಿಸೈಕಲ್ ಮಾಡುವುದಕ್ಕೆ ಯಾವ ರೀತಿಯಲ್ಲಿ ಕ್ರಮವಹಿಸಬೇಕು ಎನ್ನುವ ಬಗ್ಗೆಯೂ ಚಿಂತನೆ ನಡೆಸಬೇಕಿದೆ. ನಿಷೇಧಗೊಂಡಿರುವ ಪ್ಲಾಸ್ಟಿಕ್ ವಿಷಯದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ಹಲವು ಕ್ರಮಗಳನ್ನು ವಹಿಸಲಾಗಿದೆ.
ಕಳೆದ ಮೂರು ತಿಂಗಳ ಅವಧಿಯಲ್ಲಿಯೇ 1.65 ಲಕ್ಷ ಕಡೆ ದಾಳಿ ನಡೆಸಿದ್ದು, 1012 ಟನ್ ಪ್ಲಾಸ್ಟಿಕ್ ಅನ್ನು ಜಪ್ತಿ ಮಾಡಿದ್ದು, 56 ಕೋಟಿ ದಂಡ ವಿಧಿಸಲಾಗಿದೆ. ಈ ಅಂಕಿ-ಅಂಶಗಳು ನೋಡಿದಾಗ ಪ್ಲಾಸ್ಟಿಕ್ ಎನ್ನುವುದು ಜನರಲ್ಲಿ ಯಾವ ಮಟ್ಟದಲ್ಲಿ ಹಾಸುಹೊಕ್ಕಾಗಿದೆ ಎನ್ನುವು ದನ್ನು ಸ್ಪಷ್ಟವಾಗುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತದೆ.
ಮಾಲಿನ್ಯ ನಿಯಂತ್ರಣದ ಹೆಸರಲ್ಲಿ ಕಾನೂನು, ಕಾಯಿದೆ, ದಂಡ ವಿಧಿಸುವ ಮೊದಲು ಮಾಲಿನ್ಯ ನಿಯಂತ್ರಣ ವಿಷಯದಲ್ಲಿ ಜನರೇನು ಮಾಡಬೇಕು ಎನ್ನುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ವಾಗಬೇಕಿದೆ. ಆದ್ದರಿಂದ ಮಾಲಿನ್ಯ ಮಂಡಳಿಯ ಸುವರ್ಣಮಹೋತ್ಸವದ ಸಮಯದಲ್ಲಿ ಮೂರು ತಿಂಗಳ ಕಾಲ ರಾಜ್ಯಾದ್ಯಂತ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು.
