ನಾಡಗೀತೆ ರಾಗ ಸಂಯೋಜನೆ ಹಾಗೂ ಸಮಯ ನಿಗಧಿಗೆ ಡೆಡ್’ಲೈನ್!!

ಬೆಂಗಳೂರು : 

     ನಾಡಗೀತೆಯ ರಾಗಸಂಯೋಜನೆ ಮತ್ತು ಹಾಡುವ ಸಮಯವನ್ನು ನಿಗದಿ ಮಾಡಲು ಸರ್ಕಾರ ಅಕ್ಟೋಬರ್ 2 ರ ಡೆಡ್ ಲೈನ್ ವಿಧಿಸಿಕೊಂಡಿದೆ.

     ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಕನ್ನಡ, ಸಂಸ್ಕೃತಿ ಮತ್ತು ಇಂಧನ ಸಚಿವ ಸುನೀಲ್ ಕುಮಾರ್ ಅವರು ಈ ವಿಷಯ ತಿಳಿಸಿದರು. ನಾಡಗೀತೆಯ ರಾಗಸಂಯೋಜನೆ ಹೇಗಿರಬೇಕು? ಹಾಡುವ ಸಮಯ ಎಷ್ಟಿರಬೇಕು ಎಂಬ ಬಗ್ಗೆ ಹಲವು ಕಾಲದಿಂದ ಚರ್ಚೆ ನಡೆಯುತ್ತಲೇ ಇದೆ. ಆದರೆ ನಿಖರ ತೀರ್ಮಾನಕ್ಕೆ ಬರಲಾಗಿಲ್ಲ ಎಂದು ನುಡಿದರು.

    ಈ ಹಿನ್ನೆಲೆಯಲ್ಲಿ ನಾವು ತಜ್ಞರ ಸಮಿತಿಯನ್ನು ರಚಿಸಿದ್ದು ಅದು ಕಳೆದ ವಾರ ಒಂದು ಸಭೆ ನಡೆಸಿದೆ ಎಂದು ವಿವರ ನೀಡಿದ ಸುನೀಲ್ ಕುಮಾರ್, ಅಕ್ಟೋಬರ್ ಎರಡರಂದು ಈ ಸಮಿತಿ ಅಂತಿಮ ವರದಿ ನೀಡಲಿದ್ದು ಅದರ ಹಿನ್ನೆಲೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

     ಇದಕ್ಕೂ ಮುನ್ನ ಮಾತನಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ, ನಾಡಗೀತೆಯ ರಾಗಸಂಯೋಜನೆ ಹೇಗಿರಬೇಕು? ಮತ್ತು ಹಾಡುವ ಸಮಯ ಎಷ್ಟಿರಬೇಕು ಎಂಬ ಬಗ್ಗೆ ಹಲವು ಕಾಲದಿಂದ ವಿವಾದ ಉಳಿದುಕೊಂಡೇ ಬಂದಿದೆ. ಹಲವು ಸುತ್ತಿನ ಚರ್ಚೆಗಳಾದರೂ ನಾಡಗೀತೆಯ ರಾಗ ಹೇಗಿರಬೇಕು? ಹಾಡುವ ಸಮಯ ಎಷ್ಟಿರಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದು ಅವರು ಹೇಳಿದರು.

     ಈ ಹಂತದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಮಧ್ಯೆ ಪ್ರವೇಶಿಸಿ, ನಾಡಗೀತೆಯ ವಿವಾದವನ್ನು ಹಾಗೇ ಉಳಿಸಿಕೊಂಡು ಬರಲಾಗುತ್ತಿದೆ. ಈಗಲಾದರೂ ನೀವು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಸೂಚನೆ ನೀಡಿದರು.

    ಇದನ್ನು ಒಪ್ಪಿದ ಸಚಿವ ಸುನೀಲ್ ಕುಮಾರ್, ಅವರು ಈ ಸಂಬಂಧ ರಚಿಸಲಾದ ಸಮಿತಿಯ ಮಾಹಿತಿ ಒದಗಿಸಿದ್ದಲ್ಲದೇ ಅದು ಅಕ್ಟೋಬರ್ ಎರಡರಂದು ಅಂತಿಮ ವರದಿ ನೀಡಲಿದೆ. ಅದರ ಆಧಾರದ ಮೇಲೆ ಸರ್ಕಾರ ಒಂದು ತೀರ್ಮಾನಕ್ಕೆ ಬರಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap