ದುರ್ಗಾಮೂರ್ತಿ ವಿಸರ್ಜನೆಗೆ ಹೋಗಿದ್ದ 10 ಮಂದಿ ಜಲಸಮಾಧಿ!!!

ಧೋಲ್ಪುರ:

      ದುರ್ಗಾ ಮೂರ್ತಿ ವಿಸರ್ಜಿಸುವ ವೇಳೆ ನದಿಯಲ್ಲಿ ಮುಳುಗಿ 10 ಮಂದಿ ಸಾವನ್ನಪ್ಪಿರುವ ದುರ್ಘಟನೆ  ರಾಜಸ್ಥಾನದ ಧೋಲ್ಪುರದಲ್ಲಿ ನಡೆದಿದೆ.

     ಇಲ್ಲಿನ ಪರ್ಬಾತಿ ನದಿಯಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ನತದೃಷ್ಟರು ಪಾರ್ಬತಿ ನದಿಯಲ್ಲಿ ಮೂರ್ತಿ ವಿಸರ್ಜನೆ ಮಾಡಲು ತೆರಳಿದ್ದರು. ಮೂರ್ತಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಯುವಕನೊಬ್ಬ ಮುಳುಗಿದ್ದು, ಆತನ ರಕ್ಷಣೆಗೆ ತೆರಳಿದವರೂ ಆತನೊಂದಿಗೆ ಮುಳುಗಿದ್ದಾರೆ. 

     ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ತಕ್ಷಣವೇ ಡೈವರ್‌ಗಳ ತಂಡವನ್ನ ಕರೆಸಲಾಯಿತು. ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. 

      ಈಗಾಗಲೇ 7 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ರಾತ್ರಿ ಕಾರ್ಯಾಚರಣೆಯನ್ನು ಸ್ಥಗಿತ ಮಾಡಲಾಗಿತ್ತು. ಇಂದು ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಮುಂದುವರಿದಿದ್ದು, ಒಟ್ಟು ಹತ್ತು ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap