ಆಗ್ರಾ :
ಬಸ್-ಟ್ರಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ 16 ಮಂದಿ ಮೃತಪಟ್ಟಿರುವ ಘಟನೆ ಆಗ್ರಾ- ಲಕ್ನೋ ಎಕ್ಸ್ಪ್ರೆಸ್ ಹೈವೇಯಲ್ಲಿ ನಡೆದಿದೆ.
ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸು ಬುಧವಾರ ತಡರಾತ್ರಿ ಟ್ರಕ್ನ ಹಿಂಬದಿಗೆ ಢಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಟ್ರಕ್ನ ಟೈರು ಸಿಡಿದ ಬಳಿಕ ಟ್ರಕ್ ಚಾಲಕ ಟೈರ್ ಬದಲಾಯಿಸಲು ಎಕ್ಸ್ಪ್ರೆಸ್ ಹೈವೇಯ ಬಲಬದಿಯಲ್ಲಿ ಟ್ರಕ್ ನಿಲ್ಲಿಸಿದ್ದ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಬಸ್ಸು, ಟ್ರಕ್ನ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆಯಲ್ಲಿ 14 ಜನರು ಸಾವನ್ನಪ್ಪಿದ್ದು, 31 ಜನರಿಗೆ ಗಂಭೀರ ಗಾಯವಾಗಿದೆ.
Firozabad: At least 14 feared dead & many injured after a bus collided with a truck on the Agra-Lucknow Expressway in Bhadan, yesterday late night. Sachindra Patel, SSP say,"there were at least 40-45 passengers in the bus. Injured have been shifted to Saifai Mini PGI." pic.twitter.com/HrmNSZGHAl
— ANI UP (@ANINewsUP) February 12, 2020
ಗಾಯಗೊಂಡವರನ್ನು ಸೈಫಾಯ್ ಪಿಜಿಐ ಆಸ್ಪತ್ರೆಗೆ ಸೇರಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
“ಢಿಕ್ಕಿಯ ರಭಸಕ್ಕೆ ಬಸ್ಸು ನುಜ್ಜುಗುಜ್ಜಾಗಿದ್ದು, ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಬಸ್ಸಿನ ಅವಶೇಷದಿಂದ ಹೊರಕ್ಕೆ ತೆಗೆಯಲು ಮೂರು ಗಂಟೆ ಬೇಕಾಯಿತು. ಹಲವು ಮಂದಿ ಗಾಯಾಳುಗಳು ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಕಿಟಕಿಯ ಹೊರಗೆ ನೇತಾಡುತ್ತಿದ್ದರು. ಇಡೀ ದೃಶ್ಯ ಭಯಾನಕವಾಗಿತ್ತು” ಎಂದು ಯುಪಿಇಐಡಿಎ ಗಸ್ತು ತಂಡದ ಸದಸ್ಯರು ವಿವರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/02/Untitled-1-5.gif)