ರಾಂಚಿ:
ಜಾರ್ಖಂಡ್ನ ಬೆಲ್ಭಾ ಘಾಟ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ 3 ನಕ್ಸಲರು ಹತರಾಗಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಜಾರ್ಖಂಡ್ನ ಗಿರಿಧಿ ಜಿಲ್ಲೆಯ ಕಾಡಿನಲ್ಲಿ ಸೋಮವಾರ ಬೆಳಗ್ಗೆ ಸಿಆರ್ಪಿಎಫ್ ಯೋಧರು ಮತ್ತು ನಕ್ಸಲರ್ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಮೂವರು ನಕ್ಸಲರು ಮೃತಪಟ್ಟಿದ್ದು, ಸಿಆರ್ ಪಿಎಫ್ ನ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಸಿಆರ್ ಪಿ ಎಫ್ ನ 7ನೇ ಬೆಟಾಲಿಯನ್ ರಾಂಚಿಯಿಂದ 185 ಕಿ.ಮೀ ದೂರದಲ್ಲಿರುವ ಬೆಲ್ಬಾಘಾಟ್ ನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾಗ ನಕ್ಸಲರು ಸಿ ಆರ್ ಪಿಎಫ್ ಯೋಧರತ್ತ ಗುಂಡು ಹಾರಿಸಿದರು. ಆಗ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಹತರಾದರು. ಯೋಧರೊಬ್ಬರು ಹುತಾತ್ಮರಾದರು.
ಹತ ನಕ್ಸಲರಿಂದ ಎಕೆ-47 ರೈಫಲ್ಗಳು ಮೂವರು ಬುಲೆಟ್ ಮ್ಯಾಗಝೀನ್ಗಳು ಮತ್ತು ನಾಲ್ಕು ಪೈಪ್ ಬಾಂಬ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/01/pulwama_encounter_759_10314.gif)