ಅಮರಾವತಿ:
ಸ್ಯಾನಿಟೈಸರ್ ಸೇವಿಸಿದ ಪರಿಣಾಮ 9 ಮಂದಿ ಕುಡುಕರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಕುರಿಚೇಡು ಎಂಬಲ್ಲಿ ನಡೆದಿದೆ.
ಮೃತರನ್ನು ಶ್ರೀನು ಬೋಯಾ (25), ಭೋಗೆಮ್ ತಿರುಪಥಾಯ (37), ಗುಂಟಕಾ ರಾಮಿರೆಡ್ಡಿ (60), ಕೆ. ರಾಮಣಯ್ಯ (30), ಕೋನಗಿರಿ ರಾಮಣಯ್ಯ (65) ಮತ್ತು ರಾಜರೆಡ್ಡಿ (65) ಎಂದು ಗುರುತಿಸಲಾಗಿದೆ. ಉಳಿದವರ ಕುರಿತು ಇನ್ನೂ ಮಾಹಿತಿ ಸಿಕ್ಕಿಲ್ಲ.
ಮೃತರಲ್ಲಿ ಭಿಕ್ಷುಕರು ಹಾಗೂ ಸ್ಥಳೀಯರು ಸೇರಿದ್ದು, ಮೂವರು ನಿನ್ನೆ ರಾತ್ರಿ, ಇಂದು ಬೆಳಗ್ಗೆ ಆರು ಜನರು ಸಾವನ್ನಪ್ಪಿದ್ದಾರೆ.
ಬಿಕ್ಷುಕರು ಹತ್ತಿರದ ಸ್ಲಂನಲ್ಲಿ ವಾಸಿಸುತ್ತಿದ್ದರು ಎಂದು ಹೇಳಲಾಗಿದ್ದು, ಕಳೆದ ಎರಡು ದಿನದ ಅವಧಿಯಲ್ಲಿ ಒಟ್ಟು 20 ಮಂದಿ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಿದ್ದು, ಆ ಪೈಕಿ 9 ಮಂದಿ ಸಾವನ್ನಪ್ಪಿದ್ದಾರೆ.
ಇವರೆಲ್ಲರೂ ಬಡತನದ ಹಿನ್ನೆಲೆಯವರಾಗಿದ್ದು, ಕುಡಿತದ ಚಟ ವಿಪರೀತ ಇದ್ದರಿಂದ ಸ್ಯಾನಿಟೈಸರ್ ಮೊರೆ ಹೋಗಿದ್ದಾರೆ. ಲಾಕ್ಡೌನ್ ಹಿನ್ನೆಲೆ ಆ ಭಾಗದಲ್ಲಿ ಮದ್ಯದಂಗಡಿಯನ್ನು ಕ್ಲೋಸ್ ಮಾಡಲಾಗಿದೆ. ಕುಡಿಯಲು ಮದ್ಯ ಸಿಗದ ಕಾರಣ ಚಡಪಡಿಸಿದ ಇವರು ಕೊನೆಗೆ ಹ್ಯಾಂಡ್ ಸ್ಯಾನಿಟೈಸರ್ನಲ್ಲಿ ಆಲ್ಕೋಹಾಲ್ ಅಂಶವಿರುವ ಕಾರಣ ಅದನ್ನೇ ಸೇವಿಸಿದ್ದಾರೆ ಎನ್ನಲಾಗಿದೆ.
ಅವರು ಸೇವಿಸಿದ್ದ ಸ್ಯಾನಿಟೈಸರ್ನ ಸ್ಯಾಂಪಲ್ನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿಕೊಟ್ಟಿದ್ದು, ಘಟನೆ ಸಂಬಂಧ ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/04/handsanitizer.gif)