ಡಾ.ರಾಜ್ ಕಿಡ್ನಾಪ್ ಆರೋಪಿಗಳ ಕೇಸ್ ಖುಲಾಸೆ

ಈರೋಡ್(ತಮಿಳುನಾಡು):

Related image

      ಸುಮಾರು 18 ವರ್ಷಗಳ ಬಳಿಕ ನಟ ಡಾ. ರಾಜ್ ಕುಮಾರ್ ಅವರ ಕಿಡ್ನಾಪ್ ಪ್ರಕರಣದ ತೀರ್ಪು ಇಂದು(ಸೆ.25) ಪ್ರಕಟಗೊಂಡಿದೆ.

      ಈ ಸಂಬಂಧ ವೀರಪ್ಪನ್ ಸೇರಿದಂತೆ 8 ಜನರ ವಿರುದ್ಧ ಆರೋಪಪಟ್ಟಿ ಹೊರಿಸಲಾಗಿತ್ತು. ಆದರೆ ವಿಚಾರಣೆ ವೇಳೆ ವೀರಪ್ಪನ್, ಸೇತುಕುಡಿ ಗೋವಿಂದನ್, ರಂಗಸಾಮಿ ಸಾವನ್ನಪ್ಪಿದ್ದರು. 

     ಪ್ರಕರಣದ ಆರೋಪಿಗಳ ಪೈಕಿ 5 ಮಂದಿ ಜೈಲಿನಲ್ಲಿದ್ದರು. ಇವರ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಗಳು ಸಿಕ್ಕಿಲ್ಲ. ಆರೋಪಿಗಳು ವೀರಪ್ಪನ್​​ ಕಡೆಯವರೇ ಎಂದು ಸಾಬೀತುಪಡಿಸಲು ಯಾವುದೇ ಸಾಕ್ಷಿಗಳನ್ನೂ ಒದಗಿಸಿಲ್ಲ. ಅಲ್ಲದೇ ವಿಚಾರಣೆ ವೇಳೆ ಡಾ. ರಾಜ್​ಕುಮಾರ್​ ಅವರ ಕುಟುಂಬ ಕೋರ್ಟ್​​ಗೆ ಹಾಜಾರಾಗಲಿಲ್ಲ ಎಂದು ಕೋರ್ಟ್​ ತಿಳಿಸಿದೆ.

      ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂನ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ. 

      2000 ಇಸವಿಯ ಜುಲೈ 30 ರಂದು, ಗಾಜನೂರಿನ ತೋಟದ ಮನೆಯಿಂದ ಡಾ.ರಾಜ್ ಅವರನ್ನು, ವೀರಪ್ಪನ್​ ಮತ್ತವರ ತಂಡ ಅಪಹರಿಸಿತ್ತು. 3 ತಿಂಗಳ ಕಾಲ ರಾಜ್​ ಅವರನ್ನು ಸತ್ಯಮಂಗಲಂ ಹಾಗೂ ಭವಾನಿ ಕಾಡಿನಲ್ಲಿ ಇರಿಸಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಆತಂಕದ ಪರಿಸ್ಥಿತಿ ಇತ್ತು. ತಮಿಳು ಮ್ಯಾಗಜೀನ್​ ನಕ್ಕೀರನ್​​ನ ಪತ್ರಕರ್ತ ಆರ್​ಆರ್​​ ಗೋಪಾಲ್​ ನೇತೃತ್ವದಲ್ಲಿ 6 ಸುತ್ತುಗಳ ಮಾತುಕತೆಯ ಬಳಿಕ ಕೊನೆಗೂ 108 ದಿನಗಳ ಬಳಿಕ ರಾಜ್​ಕುಮಾರ್​ ಬಿಡುಗಡೆಯಾದ್ದರು.

      ಡಾ. ರಾಜ್​​ ಅಪಹರಣದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಅಭಿಮಾನಿಗಳು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಅಂದಿನ ತಮಿಳುನಾಡು ಸಿಎಂ ಕರುಣಾನಿಧಿ ಹಾಗೂ ಕರ್ನಾಟಕ ಸಿಎಂ ಎಸ್​.ಎಂ ಕೃಷ್ಣ ಅವರ ನಿದ್ದೆಗೆಡಿಸಿತ್ತು.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

 

Recent Articles

spot_img

Related Stories

Share via
Copy link
Powered by Social Snap