ಗಾಂಧಿವಾದಕ್ಕೆ ನಿಜಲಿಂಗಪ್ಪ ಸಮರ್ಪಣೆ;ಶಿಮೂಶ

ಚಿತ್ರದುರ್ಗ:

   ಗಾಂಧೀ ರಾಷ್ಟ್ರಕ್ಕೆ ಜೀವ ಸಮರ್ಪಿಸಿದರೆ, ನಿಜಲಿಂಗಪ್ಪ ಗಾಂಧಿ ವಾದಕ್ಕೆ ಜೀವನ ಸವೆಸಿದರು ಎಂದು ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ವಿಶ್ಲೇಷಿಸಿದರು.

   ತಾಲ್ಲೂಕಿನ ಸೀಬಾರ ಎಸ್.ನಿಜಲಿಂಗಪ್ಪ ಸ್ಮಾರಕದ ಆವರಣದಲ್ಲಿ ಸೋಮವಾರ ಎಸ್.ನಿಜಲಿಂಗಪ್ಪ ಮೆಮೇರಿಯಲ್ ಟ್ರಸ್ಟ್ ಆಯೋಜಿಸಿದ್ದ ಎಸ್.ನಿಜಲಿಂಗಪ್ಪ 116ನೇ ಜನ್ಮ ದಿನಾಚರಣೆ ಸಾನ್ನಿಧ್ಯ ವಹಿಸಿ ಮಾತನಾಡಿದರು. ನಿಜಲಿಂಗಪ್ಪ ಇಂದಿನ ರಾಜಕಾರಣಿಗಳಿಗೆ ಇಂದಿಗೂ ಮಾದರಿಯಾಗಿದ್ದಾರೆ. ಅಂತವರ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಜನರು ಬರಲಲ್ಲ ಎಂದರೆ ಹೇಗೆ? ನಿಜಲಿಂಗಪ್ಪ ಅವರ ತತ್ವ ಸಿದ್ದಾಂತಗಳು ಸರ್ವಕಾಲಕ್ಕೂ ಪ್ರಸ್ತುತವಾಗಿದೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.

   ಅಧಿಕಾರವಿದ್ದರೆ ಜನರು ಸದಾ ಇರುತ್ತಾರೆ. ಮಂತ್ರಿ, ಮುಖ್ಯಮಂತ್ರಿಯಾಗಿದ್ದಾಗ ಜನರೋ ಜನರು. ಅಲ್ಲದೆ ಕೈಯಲ್ಲಿ ಹಾರ ಹಿಡಿದು ಹಾಕುತ್ತಿದ್ದರು. ಆದರೆ ಕಾರ್ಯಕ್ರಮದಲ್ಲಿ ಬೆರಳಣಿಕೆ ಜನರೆಂದರೆ ನೋವಾಗುತ್ತದೆ. ನಿಜಲಿಂಗಪ್ಪ ಅವರ ವಿಚಾರಧಾರೆಗ:ಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

   ಅಧ್ಯಕ್ಷತೆ ವಹಿಸಿದ್ದ ಟ್ರಸ್ಟಿನ ಅಧ್ಯಕ್ಷ ಹಾಗೂ ಮಾಜಿ ಸಂಸದ ಎಚ್.ಹನುಮಂತಪ್ಪ ಮಾತನಾಡಿ, 8 ವರ್ಷ ಮುಖ್ಯಮಂತ್ರಿಯಾಗಿದ್ದರೂ ಮಕ್ಕಳಿಗೆ ಆಸ್ತಿ ಮಾಡಲಿಲ್ಲ, ರಾಜಕಾರಣಕ್ಕೆ ತರಲಿಲ್ಲ. ಅಧಿಕಾರ ಹೋದ ಬಳಿಕ ಬರುವ ಪಿಂಚಣಿ ನೋಡಿ ಈಗ ತಾನು ಹೆಚ್ಚು ಶ್ರೀಮಂತ ಎಂದಿದ್ದರು. ಚಿತ್ರದುರ್ಗದವರೇ ಆದ ನಿಜಲಿಂಗಪ್ಪರ ಜನ್ಮ ದಿನಾಚರಣೆಗೆ ಜನರೆ ಬರಲ್ಲ ಎಂದರೆ ನೋವಾಗುತ್ತಿದೆ. ಟ್ರಸ್ಟ್ ಖರೀದಿಸಿರುವ ಜಾಗದಲ್ಲಿ ತರಬೇತಿ ಕೇಂದ್ರ, ಗಾಂಧಿಭವನ, ಗ್ರಾಮೀಣ ಕೈಗಾರಿಕೆ ಪ್ರದರ್ಶನ ಕೇಂದ್ರ ಸ್ಥಾಪಿಸಲಾಗುವುದು. ತರಬೇತಿ ಕೇಂದ್ರಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಸಂಸ್ಥೆಗಳ ಮೂಲಕ ಸಮಾಜಮುಖಿ ಯುವ ಪಡೆ ನಿರ್ಮಾಣ ಉದೇಶವಾಗಿದೆ ಎಂದರು.

   ಬೆಂಗಳೂರು ಕರ್ನಾಟಕ ಸರ್ವೋದಯ ಮಂಡಲ ಕಾರ್ಯದರ್ಶಿ ಡಾ.ಸುರೇಶ್ ಮಾತನಾಡಿ, ಪ್ರಾಮಾಣಿಕತೆ ನಿಜಲಿಂಗಪ್ಪರ ಅವರಿಗೆ ದಿವ್ಯ ಶಕ್ತಿಯಾಗಿತ್ತು ಎಂದರು. ತುಮಕೂರು ಬಾಪೂಜಿ ವಿದ್ಯಾಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಎಂ.ಬಸವಯ್ಯ ಮಾತನಾಡಿದರು. ಕೆಇಬಿ ಷಣ್ಮುಖಪ್ಪ ಮೊದಲಾದವರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link